ಆ್ಯಪ್ನಗರ

ಡಿಸಿಎಂ ಜಿ.ಪರಮೇಶ್ವರ್ ಕಾಲೇಜಿನಲ್ಲಿ ಮೊಳಗಿದ ಮೋದಿ ಜೈಕಾರ

ನಿರುದ್ಯೋಗ ಸಮಸ್ಯೆ ಐದು ವರ್ಷದಿಂದ ಮಾತ್ರ ಇಲ್ಲಾ ಸ್ವಾತಂತ್ರ್ಯ ನಂತರದಿಂದ ನಿರಂತರವಾಗಿ ನಿರುದ್ಯೋಗ ಸಮಸ್ಯೆ ಇದೆ. ಮೋದಿಯನ್ನು ಮಾತ್ರ ಯಾಕೇ ಟೀಕಿಸುತ್ತೀರಿ ಎಂದು ವಿದ್ಯಾರ್ಥಿಗಳು ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು.

Vijaya Karnataka Web 25 Feb 2019, 7:31 pm
ತುಮಕೂರು: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್‌ ನೇತೃತ್ವದ ಸಿದ್ದಾರ್ಥ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತಿದ್ದ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಪರ ಘೋಷಣೆ ಕೇಳಿಬಂದಿದೆ.
Vijaya Karnataka Web ವಿದ್ಯಾರ್ಥಿನಿ
ವಿದ್ಯಾರ್ಥಿನಿ


ಜಿಲ್ಲಾಯುವ ಕಾಂಗ್ರೆಸ್ ನಿಂದ ನಡೆಯುತಿದ್ದ "ವಿಭಿನ್ನ ವಿಚಾರಗಳ ಮುಖಾ-ಮುಖಿ" ಕಾರ್ಯಕ್ರಮ ಸಂವಾದ ಕಾರ್ಯಕ್ರಮದ ಸಲಹೆಗಾರ ಕಾಂಗ್ರೆಸ್‌ನ ಚೇತನ್ ರೆಡ್ಡಿಗೆ ವಿದ್ಯಾರ್ಥಿಗಳು ತರಾಟೆಗೆ ತೆಗೆದುಕೊಂಡರು.

ನಿರುದ್ಯೋಗ ಸಮಸ್ಯೆ ಐದು ವರ್ಷದಿಂದ ಮಾತ್ರ ಇಲ್ಲಾ ಸ್ವಾತಂತ್ರ್ಯ ನಂತರದಿಂದ ನಿರಂತರವಾಗಿ ನಿರುದ್ಯೋಗ ಸಮಸ್ಯೆ ಇದೆ. ಮೋದಿಯನ್ನು ಮಾತ್ರ ಯಾಕೇ ಟೀಕಿಸುತ್ತೀರಿ ಎಂದು ವಿದ್ಯಾರ್ಥಿಗಳು ಆಯೋಜಕರನ್ನು ತರಾಟೆಗೆ ತೆಗೆದುಕೊಂಡರು.

ಆಗ ವಿದ್ಯಾರ್ಥಿಗಳು ಮೋದಿ ಮೋದಿ ಎಂದು ಜೈಕಾರ ಹಾಕಿದರು.

ಮನಮೋಹನ್ ಸಿಂಗ್ ಕಾಲದಲ್ಲಿ ಪೆಟ್ರೋಲ್ ರೇಟ್ ಜಾಸ್ತಿ ಯಾದ್ರೆ ಅದಕ್ಕೆ ನೀವು ಕಾರಣ ಕೊಡ್ತಿರಾ. ಈಗ ಜಾಸ್ತಿಯಾದರೆ ಕಾರಣ ಕೇಳ್ತಿರಾ. ಇದ್ಯಾವ ನ್ಯಾಯ ನಿಮ್ಮದು ಎಂದು ಎಸ್.ಎಸ್.ಐ.ಟಿ.ಕಾಲೇಜು ಪ್ರಾಂಶುಪಾಲರಾದ ರವಿಕುಮಾರ್ ಮೋದಿ ಪರ ಬ್ಯಾಟ್ ಬೀಸಿದರು.

ಆಗಲೂ ವಿದ್ಯಾರ್ಥಿಗಳು ಮೋದಿ ಮೋದಿ ಮೋದಿ ಎಂದು ಕೂಗಿದರು.

ವಿದ್ಯಾರ್ಥಿಗಳ ಈ ಜೈಕಾರ ಕಂಡು ಕಾರ್ಯಕ್ರಮದ ಆಯೋಜಕರು ತೀವ್ರ ಮುಖಭಂಗಕ್ಕೀಡಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ