ಆ್ಯಪ್ನಗರ

ಮುಸ್ಲೀಂರಿಲ್ಲದ ಊರಲ್ಲಿಹಿಂದೂಗಳಿಂದ ಮೊಹರಂ ಆಚರಣೆ

ಒಂದೇ ವೇದಿಕೆಯಲ್ಲಿಗಣೇಶ್‌-ಮೊಹರಂ ಆಚರಿಸಿ ಕೋಮು ಸೌಹಾರ್ದತೆ ಸಾರಿದ ನಿಟ್ರಹಳ್ಳಿ ಗ್ರಾಮ

Vijaya Karnataka 11 Sep 2019, 5:00 am
ಕೊಡಿಗೇನಹಳ್ಳಿ:
Vijaya Karnataka Web moharram celebration by hindus
ಮುಸ್ಲೀಂರಿಲ್ಲದ ಊರಲ್ಲಿಹಿಂದೂಗಳಿಂದ ಮೊಹರಂ ಆಚರಣೆ


ಗ್ರಾಮದಲ್ಲಿಮುಸ್ಲೀಂರು ಇಲ್ಲದಿದ್ದರೂ ಈ ಬಾರಿ ಒಂದೇ ವೇದಿಕೆಯಲ್ಲಿಗಣೇಶ ಹಾಗೂ ಮೊಹರಂ ಹಬ್ಬ ಆಚರಿಸುವ ಮೂಲಕ ಇಲ್ಲಿನ ಗ್ರಾಮಸ್ಥರು ಸೌಹಾರ್ದತೆ ಮೆರೆದಿದ್ದಾರೆ.

ಪುರವರ ಹೋಬಳಿ ನಿಟ್ರಹಳ್ಳಿ ಗ್ರಾಮ ಎಂದಾಕ್ಷಣ ನೆನಪಾಗುವುದು ಅಭಯ ಹಸ್ತ ಆಧಿಲಕ್ಷಿತ್ರ್ಮ ಸಂಸ್ಥಾನ. ಈ ಗ್ರಾಮದಲ್ಲಿಸುಮಾರು 200 ಕುಟುಂಬಗಳು ವಾಸವಿದ್ದು, ಇಲ್ಲಿಯಾರೊಬ್ಬರು ಮುಸ್ಲೀಂ ಸಮುದಾಯವರು ಇಲ್ಲ. ಆದರೆ ಇಲ್ಲಿನ ಹಿಂದೂಗಳು ಮೊಹರಂ ಹಾಗೂ ಗೌರಿ ಗಣೇಶ ಹಬ್ಬವನ್ನು ಒಂದೇ ವೇದಿಯಲ್ಲಿಆಚರಿಸುವ ಮೂಲಕ ಹಿಂದೂ ಹಾಗೂ ಮುಸ್ಲೀಂ ಸಾಮರಸ್ಯಕ್ಕೆ ಇಡೀ ನಾಡಿಗೆ ಮಾದರಿಯಾಗಿದ್ದಾರೆ.

ಈ ಗ್ರಾಮದಲ್ಲಿಹಲವರು ಮಂಗಳವಾರ ಉಪವಾಸ ವ್ರತ ಆಚರಣೆ ಮಾಡಿದ್ದು, ಪಂಜಾಗಳನ್ನು ಪ್ರತಿಷ್ಠಾಪಿಸಿ ವಿಧಿ ವಿಧಾನಗಳನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸಿ, ನೈವೇದ್ಯ ಮಾಡುವ ಮೂಲಕ ಸಕ್ಕರೆ ಕಡ್ಲೇಪುರಿ ಪ್ರಸಾದ ವಿನಿಯೋಗ ಮಾಡಿದರು. ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಗ್ರಾಮದ ಹಿರಿಯ ಮುಖಂಡರು ವಾರದ ಹಿಂದೆ ಸಭೆ ನಡೆಸಿ, ಎರಡೂ ಹಬ್ಬಗಳನ್ನು ಒಟ್ಟೊಟ್ಟಿಗೆ ಆಚರಿಸಲು ತೀರ್ಮಾನಿಸಿದ್ದು, ಸ್ವತಃ ಹಿಂದೂಗಳೇ ಅಲಾಯಿ ಗುಂಡಿ ತೋಡಿದ್ದರು. ವಿವಿಧ ಹರಕೆಗಳೊಂದಿಗೆ ಸೋಮವಾರ ರಾತ್ರಿ ದೇವರನ್ನು ಹೊತ್ತು ಕೆಂಡ ಹಾಯ್ದರು. ಗಂಡು ಮಕ್ಕಳು ಕಾಲಿಗೆ ಗೆಜ್ಜೆ ಕಟ್ಟಿ ಹೆಜ್ಜೆಮೇಳ, ಕೋಲು ಮೇಳ, ಕರಡಿ, ಹುಲಿ ಹಾಗೂ ಮಹಿಳೆಯರಂತೆ ವಿಚಿತ್ರ ವೇಷ ಭೂಷಣಗಳನ್ನು ತೊಟ್ಟು ಕುಣಿಯುತ್ತಾ ಅತ್ಯಂತ ಸಂಭ್ರಮದಿಂದ ಆಚರಿಸಿದರು.

ಈ ಸಂದರ್ಭದಲ್ಲಿಗ್ರಾಪಂ ಸದಸ್ಯರಾದ ವೆಂಕಟೇಶ್‌, ರತ್ನಮ್ಮ, ಮಹಾತ್ಮ ಗಾಂಧಿ ಸಂಘದ ಅಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ನಾಗಭೂಷಣ್‌, ಹಿರಿಯ ಮುಖಂಡರು ಹಾಜರಿದ್ದರು.


ಪೂಜಾ ಕಾರ್ಯಕ್ರಮಕ್ಕೆ ಆದಿಲಕ್ಷಿತ್ರ್ಮ ಸಂಸ್ಥಾನದ ನೀಲಕಂಠ ಸ್ವಾಮಿಜಿ ಭೇಟಿ ನೀಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಇದೇ ಮೊದಲ ಬಾರಿ ಇಲ್ಲಿಮೊಹರಂ ಹಬ್ಬ ಆಚರಿಚರಿಸುತಿದ್ದು, ಬಾವೈಕ್ಯತೆ ಹಬ್ಬ ಎಂದಿಗೂ ಮರೆಯಲಾಗುವುದಿಲ್ಲ. ಎಷ್ಟೋ ಪಂಗಡಗಳಿದ್ದು ಜಾತಿ ಜಾತಿಗಳು, ದೇವರು ದೇವರಗಳ ನಡುವೆ ಸಂಘರ್ಷ ನಡೆಯುತ್ತಿದೆ. ಆದರೆ, ದೇವರು ಒಬ್ಬನೇ ನಾಮ ಹಲವು ಎಂಬುದು ನಾವು ಅರಿತುಕೊಳ್ಳಬೇಕಿದೆ. ಬಾವೈಕ್ಯತೆಯಿಂದ ಎಲ್ಲಾಕೈಂರ್ಯಗಳು ಭಾವನತೀತವಾಗಿ ಮಾಡಿದಾಗ ನಾವೆಲ್ಲಾಒಂದೇ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಉಪದೇಶ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ