ಆ್ಯಪ್ನಗರ

ಗೌರಿ, ಗಣೇಶನಿಗಿಂತ ನಾಗಪ್ಪನನ್ನು ಕಂಡರೆ ಇಲ್ಲಿನ ಭಕ್ತರಿಗೆ ಭಯ

ಇಂದು ದೇಶಾದ್ಯಂತ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಗೌರಿ ಹಾಗೂ ಗಣೇಶನಿಗಿಂತ ನಾಗಪ್ಪನನ್ನು ಕಂಡರೆ ಭಕ್ತ ಸಮೂಹಕ್ಕೆ ಭಯ ಹೆಚ್ಚಾಗಿದೆ. ವಿಶೇಷವಾಗಿ ಜಿಲ್ಲೆಯ ಗುಬ್ಬಿ ತಾಲೂಕಿನ ಹಲವು ಗ್ರಾಮಗಳ ಭಕ್ತರು, ಊರು ತೊರೆದಿದ್ದರೂ ಸಹ ಚೌತಿ ನಾಗರ ಪೂಜೆ ಮಾಡಲು ಮಾತ್ರ ತಮ್ಮ ಊರು ಸೇರಿಕೊಳ್ಳುತ್ತಾರೆ.

Vijaya Karnataka Web 13 Sep 2018, 12:26 pm
ತುಮಕೂರು: ಇಂದು ದೇಶಾದ್ಯಂತ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತಿದೆ. ಆದರೆ, ಜಿಲ್ಲೆಯಲ್ಲಿ ಮಾತ್ರ ಗೌರಿ ಹಾಗೂ ಗಣೇಶನಿಗಿಂತ ನಾಗಪ್ಪನನ್ನು ಕಂಡರೆ ಭಕ್ತ ಸಮೂಹಕ್ಕೆ ಭಯ ಹೆಚ್ಚಾಗಿದೆ. ವಿಶೇಷವಾಗಿ ಜಿಲ್ಲೆಯ ಗುಬ್ಬಿ ತಾಲೂಕಿನ ಹಲವು ಗ್ರಾಮಗಳ ಭಕ್ತರು, ಊರು ತೊರೆದಿದ್ದರೂ ಸಹ ಚೌತಿ ನಾಗರ ಪೂಜೆ ಮಾಡಲು ಮಾತ್ರ ತಮ್ಮ ಊರು ಸೇರಿಕೊಳ್ಳುತ್ತಾರೆ.
Vijaya Karnataka Web unnamed


ಹೀಗಾಗಿ, ಬೆಂಗಳೂರು, ಮೈಸೂರು, ಮುಂಬಯಿ ಎಲ್ಲೇ ಇರಲಿ ಗಣೇಶ, ಗೌರಿ, ವರಮಹಾಲಕ್ಷ್ಮಿ ಹಬ್ಬಕ್ಕೆ ದೂರದ ಊರುಗಳಿಂದ ಜನರು ಬರದೆ ಇದ್ದರೂ, ನಾಗರ ಪೂಜೆಗೆ ಮಾತ್ರ ಓಡೋಡಿ ಬಂದು ಶ್ರದ್ಧಾ ಭಕ್ತಿಯಿಂದ ಉಪವಾಸ ಮಾಡಿ ಪೂಜೆ ಮಾಡುವುದು ರೂಡಿಯಲ್ಲಿದೆ.

ಇನ್ನು, ನಾಗರ ಹಬ್ಬದಲ್ಲಿ ಒಂದೇ ರೀತಿಯಾಗಿ ಪೂಜೆ ಮಾಡದೆ ಒಂದೊಂದು ಕುಟಂಬಗಳು ಒಂದೊಂದು ರೀತಿಯಲ್ಲಿ ದಶಮಾನಗಳಿಂದ ವಿಶೇಷವಾಗಿ ಮಾಡಿಕೊಂಡು ಬರುತ್ತವೆ. ಕೆಲವರು ಹೂವು ಹಣ್ಣು ಕಾಯಿಯನ್ನು ತೆಗೆದುಕೊಂಡು ಹೋಗಿ ಪೂಜೆಯನ್ನು ಮಾಡಿದರೆ ಇನ್ನೂ ಕೆಲವರು ನಾಗರಗಳು ವಿಶೇಷ ಆಡುಗೆಯ ನಾಗರಗಳಾಗಿದ್ದು ಸಪ್ಪೆ ಆಹಾರವನ್ನು ಮಾಡಿ ದೇವರಿಗೆ ಆರ್ಪಿಸುತ್ತಾರೆ. ಫಲಾಹಾರ ನಾಗರು, ಹೀಗೆ ಹಲವು ರೀತಿಯ ನಾಗರ ಪೂಜೆಗಳು ಕಂಡು ಬರುತ್ತವೆ ಹಾಗೂ ಅಲ್ಲಿ ಪೂಜೆ ಮಾಡಿದಂತಹ ಹಣ್ಣು ಕಾಯಿ ಆಡುಗೆಯನ್ನು ಅವರ ಕುಟುಂಬದವರು ಮಾತ್ರ ಸೇವನೆ ಮಾಡುತ್ತಾರೆ. ಬದಲಾಗಿ ಬೇರೆ ಯಾರಿಗೂ ನೀಡುವುದಿಲ್ಲ.

ಚೌತಿ ನಾಗರ



ಈ ಹಬ್ಬದಲ್ಲಿ ಕಿಚಡಿ, ಸೊಪ್ಪಿನ ಸಾರು, ಕಡುಬು, ವಿಶೇಷ ಆಹಾರ ಪದ್ದತಿ ರೂಡಿಯಲ್ಲಿದೆ. ಕೆಲವರು ಪೂಜೆ ಮಾಡಿದ ಜಾಗದಲ್ಲೇ ಊಟ ಮಾಡಿ ಬರುವುದು, ಹಾಗೂ ನಾಗರನ್ನು ಮುಗಿಸಿಕೊಂಡು ಗ್ರಾಮದ ಒಳಗೆ ಬರುವಾಗ ಊರು ಬಾಗಿಲಿಗೆ ತೀರ್ಥವನ್ನು ಹಾಕಿ ಗ್ರಾಮಕ್ಕೆ ಒಳಿತಾಗಲಿ ಎಂದುಕೊಂಡು ಗ್ರಾಮದ ಒಳಗೆ ಬರುವುದು ವಾಡಿಕೆಯಾಗಿದೆ. ಇಂಥಹ ಆಚರಣೆಗಳು ಗೌರಿ ಹಾಗೂ ಗಣೇಶನ ಹಬ್ಬಗಳಲ್ಲಿ ಚೌತಿ ನಾಗರ ಹಬ್ಬಗಳು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಹಲವು ಗ್ರಾಮಗಳಲ್ಲಿ ಕಂಡು ಬರುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ