ಬಿಜವರ ಗ್ರಾಮ ಪಂಚಾಯಿತಿಯಲ್ಲಿ ಉರುಳಿಬಿದ್ದ ರಾಷ್ಟ್ರಧ್ವಜ!
ಬಿಜವರ ಗ್ರಾಮಪಂಚಾಯಿತಿಯಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಪಂಚಾಯಿತಿಯ ಕಾರ್ಯಾಲಯದಲ್ಲಿದ್ದ ಧ್ವಜರೋಹಣ ಮಾಡಿದ್ದ ಧ್ವಜವು ಕೆಳಗುರುಳಿದೆ. ಪಿಡಿಒ ಮತ್ತು ಸಿಬ್ಬಂದಿ ಅಜಾಗರೂಕತೆಯಿಂದಾಗಿ ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ಬಾವುಟ ನೆಲಕ್ಕೆ ಉರುಳಿ ಬಿದ್ದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Vijaya Karnataka Web 4 Dec 2020, 3:58 pm
ತುಮಕೂರು: ಮಧುಗಿರಿ ತಾಲೂಕಿನ ಬಿಜವರ ಗ್ರಾಮ ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ಅಜಾಗರೂಕತೆಯಿಂದಾಗಿ ಪಂಚಾಯಿತಿ ಕಾರ್ಯಾಲಯದಲ್ಲಿ ಧ್ವಜಾರೋಹಣ ಮಾಡಿದ್ದ ಧ್ವಜವು ಉರುಳಿ ಬಿದ್ದಿರುವ ಘಟನೆ ಜರುಗಿದೆ.
ತಾಲೂಕಿನ ಕಸಬ ವ್ಯಾಪ್ತಿಯ ಬಿಜವರ ಗ್ರಾಪಂ ಕಾರ್ಯಾಲಯದ ಮೇಲ್ಭಾಗದಲ್ಲಿ ಎಂದಿನಂತೆ ಗುರುವಾರ ಕೂಡ ರಾಷ್ಟ್ರಧ್ವಜ ಹಾರಿಸಲಾಯಿತು. ಪಂಚಾಯಿತಿ ಸಿಬ್ಬಂದಿ ಧ್ವಜ ಹಾರಿಸಿ ಹೋಗಿದ್ದರು. ಆದರೆ ಇದ್ದಕ್ಕಿದ್ದಂತೆ ಧ್ವಜ ಕಂಬದ ಸಮೇತ ಮುರಿದು ನೆಲಕ್ಕೆ ಉರಳಿದೆ. ಬಾವುಟ ಮತ್ತು ಕಂಬವು ನೆಲಕ್ಕೆ ಬಿದ್ದು ಕೆಲ ಗಂಟೆಗಳೇ ಕಳೆದರೂ ಅದನ್ನು ಸರಿಪಡಿಸುವ ಕಾರ್ಯಕ್ಕೆ ಸಿಬ್ಬಂದಿ ವರ್ಗವರು ಮುಂದಾಗಿಲ್ಲ. ಈ ಬಗ್ಗೆ ಸಾರ್ವಜನಿಕರು ಪಿಡಿಒ ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಕರೆ ಮಾಡಿದ ಕೆಲ ಗಂಟೆಗಳ ಬಳಿಕ ಸ್ಥಳಕ್ಕೆ ಬಂದು ಧ್ವಜವನ್ನು ಸರಿಪಡಿಸಲು ಮುಂದಾಗಿದ್ದಾರೆ.
ಬಿಎಲ್ಒ ಹುದ್ದೆಯಿಂದ ಗೇಟ್ ಪಾಸ್, ಆಕ್ರೋಶ: ಪತಿ, ಪುತ್ರನಿಂದ ತಹಶೀಲ್ದಾರ್ ಜತೆ ವಾಗ್ವಾದ !
ಇಲ್ಲಿನ ಪಿಡಿಒ ಸರಿಯಾಗಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ. ಪಿಡಿಒ ಮತ್ತು ಸಿಬ್ಬಂದಿ ಅಜಾಗರೂಕತೆಯಿಂದಾಗಿ ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ಬಾವುಟ ನೆಲಕ್ಕೆ ಉರುಳಿ ಬಿದ್ದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಪಾರಿವಾಳ ಸಂತತಿಗೆ ಕುತ್ತು: ಪಾರ್ಶ್ವವಾಯು ಪೀಡಿತರೇ ಗ್ರಾಹಕರು!
ಪಂಚಾಯಿತಿ ಕಚೇರಿಯ ಸಮೀಪದಲ್ಲಿ ಕೋತಿಗಳ ಉಪಟಳದಿಂದ ಈ ಘಟನೆ ಜರುಗಿದ್ದು, ನನ್ನ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸರಿಪಡಿಸಲಾಗಿದೆ.
-ರಂಗನಾಥ್, ಪಿಡಿಒ, ಬಿಜವರ ಗ್ರಾಪಂ
ತಾಲೂಕಿನ ಕಸಬ ವ್ಯಾಪ್ತಿಯ ಬಿಜವರ ಗ್ರಾಪಂ ಕಾರ್ಯಾಲಯದ ಮೇಲ್ಭಾಗದಲ್ಲಿ ಎಂದಿನಂತೆ ಗುರುವಾರ ಕೂಡ ರಾಷ್ಟ್ರಧ್ವಜ ಹಾರಿಸಲಾಯಿತು. ಪಂಚಾಯಿತಿ ಸಿಬ್ಬಂದಿ ಧ್ವಜ ಹಾರಿಸಿ ಹೋಗಿದ್ದರು. ಆದರೆ ಇದ್ದಕ್ಕಿದ್ದಂತೆ ಧ್ವಜ ಕಂಬದ ಸಮೇತ ಮುರಿದು ನೆಲಕ್ಕೆ ಉರಳಿದೆ. ಬಾವುಟ ಮತ್ತು ಕಂಬವು ನೆಲಕ್ಕೆ ಬಿದ್ದು ಕೆಲ ಗಂಟೆಗಳೇ ಕಳೆದರೂ ಅದನ್ನು ಸರಿಪಡಿಸುವ ಕಾರ್ಯಕ್ಕೆ ಸಿಬ್ಬಂದಿ ವರ್ಗವರು ಮುಂದಾಗಿಲ್ಲ. ಈ ಬಗ್ಗೆ ಸಾರ್ವಜನಿಕರು ಪಿಡಿಒ ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಕರೆ ಮಾಡಿದ ಕೆಲ ಗಂಟೆಗಳ ಬಳಿಕ ಸ್ಥಳಕ್ಕೆ ಬಂದು ಧ್ವಜವನ್ನು ಸರಿಪಡಿಸಲು ಮುಂದಾಗಿದ್ದಾರೆ.
ಬಿಎಲ್ಒ ಹುದ್ದೆಯಿಂದ ಗೇಟ್ ಪಾಸ್, ಆಕ್ರೋಶ: ಪತಿ, ಪುತ್ರನಿಂದ ತಹಶೀಲ್ದಾರ್ ಜತೆ ವಾಗ್ವಾದ !
ಇಲ್ಲಿನ ಪಿಡಿಒ ಸರಿಯಾಗಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿ ಬಂದಿದೆ. ಪಿಡಿಒ ಮತ್ತು ಸಿಬ್ಬಂದಿ ಅಜಾಗರೂಕತೆಯಿಂದಾಗಿ ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ಬಾವುಟ ನೆಲಕ್ಕೆ ಉರುಳಿ ಬಿದ್ದಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಪಾರಿವಾಳ ಸಂತತಿಗೆ ಕುತ್ತು: ಪಾರ್ಶ್ವವಾಯು ಪೀಡಿತರೇ ಗ್ರಾಹಕರು!
ಪಂಚಾಯಿತಿ ಕಚೇರಿಯ ಸಮೀಪದಲ್ಲಿ ಕೋತಿಗಳ ಉಪಟಳದಿಂದ ಈ ಘಟನೆ ಜರುಗಿದ್ದು, ನನ್ನ ಗಮನಕ್ಕೆ ಬಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸರಿಪಡಿಸಲಾಗಿದೆ.
-ರಂಗನಾಥ್, ಪಿಡಿಒ, ಬಿಜವರ ಗ್ರಾಪಂ