ತುರುವೇಕೆರೆ (ತುಮಕೂರು): ತಾಲೂಕಿನ ಚಿಕ್ಕಶೆಟ್ಟಿಕೆರೆ ಬಳಿ ಗುರುವಾರ ನಸುಕಿನಲ್ಲಿ ಲಾರಿ ಹಾಗೂ ಇನೋವಾ ಕಾರಿನ ನಡುವೆ ಸಂಭವಿಸಿದ ಬೀಕರ ಅಪಘಾತದಲ್ಲಿ ನವ ವರ ಹಾಗೂ ಚಾಲಕ ಸ್ಥಳದಲ್ಲೇ ಮೃತಪಟ್ಟರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ವರನ ಸಂಬಂಧಿ ಸಾವಿಗೀಡಾದರು. ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ವಧು ತೀವ್ರತರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿಅರಸೀಕೆರೆ ತಾಲೂಕಿನ ಕಮಲಾಪುರ ವಾಸಿ ನಂಜುಂಡಪ್ಪನ ಮಗ ಪ್ರಸನ್ನಕುಮಾರ (30), ಅದೇ ಗ್ರಾಮದ ಜಯರಾಮ್ ಮಗ ಸಂತೋಷ್ (29) ಹಾಗೂ ಬೆಂಗಳೂರು ಮೂಲದ ಚಾಲಕ ಚಿನ್ನಪ್ಪ (30) ಮೃತಪಟ್ಟವರು.
ಘಟನೆ ವಿವರ!
ಕಳೆದ ವಾರದ ಹಿಂದಷ್ಟೆ ಅರಸೀಕರೆ ತಾಲೂಕಿನ ಕಮಲಾಪುರದ ಪ್ರಸನ್ನಕುಮಾರ್ ಹಾಗೂ ಅದೇ ತಾಲೂಕಿನ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ (26) ಜತೆ ವಿವಾಹವಾಗಿದ್ದರು. ಗುರುವಾರ ನಸುಕಿನಲ್ಲಿಅಗತ್ಯ ಸಾಮಾನುಗಳೊಂದಿಗೆ ಬೆಂಗಳೂರಿನತ್ತ ಮಾಯಸಂದ್ರ ಮಾರ್ಗವಾಗಿ ಸಂಬಂಧಿ ಸಂತೋಷ ಹಾಗೂ ಚಾಲಕ ಚಿನ್ನಪ್ಪನೊಂದಿಗೆ ಪ್ರಯಾಣ ಬೆಳೆಸಿದ್ದರು. ಗುರುವಾರ ನಸುಕಿನಲ್ಲಿ ಮಾಯಸಂದ್ರ ಬಳಿ ಚಿಕ್ಕಶೆಟ್ಟಿಕೆರೆ ಬಳಿ ಮೈಸೂರಿನಿಂದ ಬರುತ್ತಿದ್ದ ಲಾರಿಗೆ ಇನೋವಾ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ತಮಿಳುನಾಡಿನಲ್ಲಿ ಹಳಿ ತಪ್ಪಿ ನಿಲ್ದಾಣದೊಳಗೆ ನುಗ್ಗಿದ ರೈಲು : ತಪ್ಪಿದ ಭಾರೀ ದುರಂತ
ಘಟನೆ ವಿವರ!
ಕಳೆದ ವಾರದ ಹಿಂದಷ್ಟೆ ಅರಸೀಕರೆ ತಾಲೂಕಿನ ಕಮಲಾಪುರದ ಪ್ರಸನ್ನಕುಮಾರ್ ಹಾಗೂ ಅದೇ ತಾಲೂಕಿನ ಮೈಲನಹಳ್ಳಿ ಕೊಪ್ಪಲು ವಾಸಿ ಮಂದಾರ (26) ಜತೆ ವಿವಾಹವಾಗಿದ್ದರು. ಗುರುವಾರ ನಸುಕಿನಲ್ಲಿಅಗತ್ಯ ಸಾಮಾನುಗಳೊಂದಿಗೆ ಬೆಂಗಳೂರಿನತ್ತ ಮಾಯಸಂದ್ರ ಮಾರ್ಗವಾಗಿ ಸಂಬಂಧಿ ಸಂತೋಷ ಹಾಗೂ ಚಾಲಕ ಚಿನ್ನಪ್ಪನೊಂದಿಗೆ ಪ್ರಯಾಣ ಬೆಳೆಸಿದ್ದರು. ಗುರುವಾರ ನಸುಕಿನಲ್ಲಿ ಮಾಯಸಂದ್ರ ಬಳಿ ಚಿಕ್ಕಶೆಟ್ಟಿಕೆರೆ ಬಳಿ ಮೈಸೂರಿನಿಂದ ಬರುತ್ತಿದ್ದ ಲಾರಿಗೆ ಇನೋವಾ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ತಮಿಳುನಾಡಿನಲ್ಲಿ ಹಳಿ ತಪ್ಪಿ ನಿಲ್ದಾಣದೊಳಗೆ ನುಗ್ಗಿದ ರೈಲು : ತಪ್ಪಿದ ಭಾರೀ ದುರಂತ