ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ಬಿ ಫಾರಂಗೆ ಆಕಾಂಕ್ಷಿಗಳಿಂದ ಕೊನೆ ಕ್ಷಣದ ಕಸರತ್ತು
ಕೊರಟಗೆರೆ: ಪಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಾಗಲೇ 15 ವಾರ್ಡ್ಗಳಿಗೆ ಆ.16ರಂದು ಮಧ್ಯಾಹ್ನ 3ಗಂಟೆ ಮುಕ್ತಾಯಕ್ಕೆ 50 ಆಕಾಂಕ್ಷಿ ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಪಪಂ ಚುನಾವಣೆ ಶಾಂತಿಯುತ ಮತ್ತು ಸೂಕ್ತ ರೀತಿಯಲ್ಲಿ ನಡೆಸಲು ಪಟ್ಟಣದ 15ವಾರ್ಡ್ಗಳಿಗೆ ತಲಾ ಇಬ್ಬರು ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 1ರಿಂದ 8ರವರಗೆ ಕಂದಾಯ ಇಲಾಖೆಯ ಸಭಾಂಗಣ ಮತ್ತು 9ರಿಂದ 15ರವರಗೆ ಉಪತಹಸೀಲ್ದಾರ್ ಕಚೇರಿಯಲ್ಲಿ ಸೂಕ್ತ ಭದ್ರತೆಯೊಂದಿಗೆ ನಾಮಪತ್ರ ಸಲ್ಲಿಸಲಾಗುತ್ತಿದೆ.
ಪಟ್ಟಣದ 1ರಿಂದ 8ನೇ ವಾರ್ಡ್ಗೆ ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ನಾಗರಾಜು ಕೆಲಸ ನಿರ್ವಹಿಸುತ್ತಿದ್ದು, ಆ.13ರಿಂದ ಆ.16ರವರಗೆ ಒಟ್ಟು 8 ವಾರ್ಡ್ಗೆ 27 ಮಂದಿ ಆಕಾಂಕ್ಷಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿಯಾಗಿ 8, ಜೆಡಿಎಸ್ನ 12, ಪಕ್ಷೇತರ ಅಭ್ಯರ್ಥಿಗಳಾಗಿ 7 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷ ದಿಂದ ಇನ್ನೂ ಯಾರು ನಾಮಪತ್ರ ಸಲ್ಲಿಸಿಲ್ಲ.
ಪಟ್ಟಣದ 9ರಿಂದ 15ವಾರ್ಡ್ಗೆ ಚುನಾವಣಾಧಿಕಾರಿ ಆಗಿ ರೇಷ್ಮೆ ಇಲಾಖೆಯ ಲಕ್ಷ್ಮಿನರಸಯ್ಯ ನೇಮಕವಾಗಿದ್ದಾರೆ. ಆ.13ರಿಂದ ಆ.16ರವರಗೆ 7ವಾರ್ಡ್ಗೆ ಒಟ್ಟು 23 ಆಕಾಂಕ್ಷಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಗಳಾಗಿ 9, ಕಾಂಗ್ರೆಸ್ನಿಂದ 7, ಜೆಡಿಎಸ್ನಿಂದ 2 ಮತ್ತು ಪಕ್ಷೇತರವಾಗಿ 5 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.
ಆ.17ರಂದು ಮಧ್ಯಾಹ್ನ 3ಗಂಟೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಆ.16ರ ಮಧ್ಯಾಹ್ನ 3ಗಂಟೆವರಗೆ ಮೂರು ಪಕ್ಷ ದ ಯಾವುದೇ ಅಭ್ಯರ್ಥಿಗಳಿಗೆ ಬಿ. ಫಾರಂ ನೀಡಿಲ್ಲ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನಿಂದ ಒಟ್ಟು 38 ಜನ ಆಕಾಂಕ್ಷಿ ಅಭ್ಯರ್ಥಿಗಳು ಬಿ. ಫಾರಂ ಪಡೆಯದೇ ಆಕಾಂಕ್ಷಿ ಅಭ್ಯರ್ಥಿಗಳಾಗಿ ಚುನಾವಣಾಧಿಕಾರಿಗಳಿಗೆ ಟಿಕೆಟ್ ಸಿಗುವ ಭರವಸೆಯಿಂದ ನಾಮಪತ್ರ ಸಲ್ಲಿಸಿರುವುದು ವಿಶೇಷ.
ಪಟ್ಟಣದ 15ವಾರ್ಡ್ನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷ ದಲ್ಲಿಯೂ ಆಕಾಂಕ್ಷಿ ಅಭ್ಯರ್ಥಿಗಳ ಪೈಪೋಟಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪಕ್ಷ ದ ನಾಯಕರು ಅಭ್ಯರ್ಥಿಗಳ ಆಯ್ಕೆಯನ್ನು ವಾರ್ಡ್ನ ಮತದಾರರಿಗೆ ಗೊಂದಲವಾಗದ ರೀತಿಯಲ್ಲಿ ಆ.16ರ ರಾತ್ರಿ ಅಥವಾ ಆ.17ರ ಬೆಳಗ್ಗೆವರಗೆ ಕಾಯ್ದಿರಿಸಿಮ ಕೊನೆಯ ಕ್ಷ ಣದಲ್ಲಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು, ಕೊನೆಯ ಕ್ಷ ಣದವರೆಗೂ ಪಕ್ಷ ದ ಟಿಕೆಟ್ ಪಡೆಯಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ.
ಕೊರಟಗೆರೆ: ಪಪಂ ಚುನಾವಣೆಗೆ ನಾಮಪತ್ರ ಸಲ್ಲಿಸಲು ಒಂದು ದಿನ ಬಾಕಿ ಇರುವಾಗಲೇ 15 ವಾರ್ಡ್ಗಳಿಗೆ ಆ.16ರಂದು ಮಧ್ಯಾಹ್ನ 3ಗಂಟೆ ಮುಕ್ತಾಯಕ್ಕೆ 50 ಆಕಾಂಕ್ಷಿ ಅಭ್ಯರ್ಥಿಗಳು ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಪಪಂ ಚುನಾವಣೆ ಶಾಂತಿಯುತ ಮತ್ತು ಸೂಕ್ತ ರೀತಿಯಲ್ಲಿ ನಡೆಸಲು ಪಟ್ಟಣದ 15ವಾರ್ಡ್ಗಳಿಗೆ ತಲಾ ಇಬ್ಬರು ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. 1ರಿಂದ 8ರವರಗೆ ಕಂದಾಯ ಇಲಾಖೆಯ ಸಭಾಂಗಣ ಮತ್ತು 9ರಿಂದ 15ರವರಗೆ ಉಪತಹಸೀಲ್ದಾರ್ ಕಚೇರಿಯಲ್ಲಿ ಸೂಕ್ತ ಭದ್ರತೆಯೊಂದಿಗೆ ನಾಮಪತ್ರ ಸಲ್ಲಿಸಲಾಗುತ್ತಿದೆ.
ಪಟ್ಟಣದ 1ರಿಂದ 8ನೇ ವಾರ್ಡ್ಗೆ ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ನಾಗರಾಜು ಕೆಲಸ ನಿರ್ವಹಿಸುತ್ತಿದ್ದು, ಆ.13ರಿಂದ ಆ.16ರವರಗೆ ಒಟ್ಟು 8 ವಾರ್ಡ್ಗೆ 27 ಮಂದಿ ಆಕಾಂಕ್ಷಿ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಕಾಂಗ್ರೆಸ್ ಆಕಾಂಕ್ಷಿ ಅಭ್ಯರ್ಥಿಯಾಗಿ 8, ಜೆಡಿಎಸ್ನ 12, ಪಕ್ಷೇತರ ಅಭ್ಯರ್ಥಿಗಳಾಗಿ 7 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷ ದಿಂದ ಇನ್ನೂ ಯಾರು ನಾಮಪತ್ರ ಸಲ್ಲಿಸಿಲ್ಲ.
ಪಟ್ಟಣದ 9ರಿಂದ 15ವಾರ್ಡ್ಗೆ ಚುನಾವಣಾಧಿಕಾರಿ ಆಗಿ ರೇಷ್ಮೆ ಇಲಾಖೆಯ ಲಕ್ಷ್ಮಿನರಸಯ್ಯ ನೇಮಕವಾಗಿದ್ದಾರೆ. ಆ.13ರಿಂದ ಆ.16ರವರಗೆ 7ವಾರ್ಡ್ಗೆ ಒಟ್ಟು 23 ಆಕಾಂಕ್ಷಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅದರಲ್ಲಿ ಬಿಜೆಪಿ ಆಕಾಂಕ್ಷಿ ಅಭ್ಯರ್ಥಿಗಳಾಗಿ 9, ಕಾಂಗ್ರೆಸ್ನಿಂದ 7, ಜೆಡಿಎಸ್ನಿಂದ 2 ಮತ್ತು ಪಕ್ಷೇತರವಾಗಿ 5 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಯಾಗಿದೆ.
ಆ.17ರಂದು ಮಧ್ಯಾಹ್ನ 3ಗಂಟೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಆ.16ರ ಮಧ್ಯಾಹ್ನ 3ಗಂಟೆವರಗೆ ಮೂರು ಪಕ್ಷ ದ ಯಾವುದೇ ಅಭ್ಯರ್ಥಿಗಳಿಗೆ ಬಿ. ಫಾರಂ ನೀಡಿಲ್ಲ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ನಿಂದ ಒಟ್ಟು 38 ಜನ ಆಕಾಂಕ್ಷಿ ಅಭ್ಯರ್ಥಿಗಳು ಬಿ. ಫಾರಂ ಪಡೆಯದೇ ಆಕಾಂಕ್ಷಿ ಅಭ್ಯರ್ಥಿಗಳಾಗಿ ಚುನಾವಣಾಧಿಕಾರಿಗಳಿಗೆ ಟಿಕೆಟ್ ಸಿಗುವ ಭರವಸೆಯಿಂದ ನಾಮಪತ್ರ ಸಲ್ಲಿಸಿರುವುದು ವಿಶೇಷ.
ಪಟ್ಟಣದ 15ವಾರ್ಡ್ನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಮೂರು ಪಕ್ಷ ದಲ್ಲಿಯೂ ಆಕಾಂಕ್ಷಿ ಅಭ್ಯರ್ಥಿಗಳ ಪೈಪೋಟಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ಪಕ್ಷ ದ ನಾಯಕರು ಅಭ್ಯರ್ಥಿಗಳ ಆಯ್ಕೆಯನ್ನು ವಾರ್ಡ್ನ ಮತದಾರರಿಗೆ ಗೊಂದಲವಾಗದ ರೀತಿಯಲ್ಲಿ ಆ.16ರ ರಾತ್ರಿ ಅಥವಾ ಆ.17ರ ಬೆಳಗ್ಗೆವರಗೆ ಕಾಯ್ದಿರಿಸಿಮ ಕೊನೆಯ ಕ್ಷ ಣದಲ್ಲಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು, ಕೊನೆಯ ಕ್ಷ ಣದವರೆಗೂ ಪಕ್ಷ ದ ಟಿಕೆಟ್ ಪಡೆಯಲು ಅಂತಿಮ ಕಸರತ್ತು ನಡೆಸುತ್ತಿದ್ದಾರೆ.