ಆ್ಯಪ್ನಗರ

ಸೀನಿಯರ್‌ ನೀಡಿದ ದೂರು ಸ್ವೀಕರಿಸದ ಪಾವಗಡ ಪಿಎಸ್‌ಐ ಅಮಾನತು

ಹಿರಿಯ ಅಧಿಕಾರಿ ನೀಡಿದ ದೂರನ್ನು ಸ್ವೀಕರಿಸದ ಹಿನ್ನಲೆಯಲ್ಲಿ ಪಾವಗಡ ಅಪರಾಧ ವಿಭಾಗದ ಪಿಎಸ್ಐ ಮಲ್ಲಿಕಾರ್ಜುನ್ ಅವರನ್ನು ಅಮಾನತುಗೊಳಿಸಲಾಗಿದೆ.

ವಿಕ ಸುದ್ದಿಲೋಕ 18 Jun 2017, 12:34 pm
ತುಮಕೂರು: ಹಿರಿಯ ಅಧಿಕಾರಿ ನೀಡಿದ ದೂರನ್ನು ಸ್ವೀಕರಿಸದ ಹಿನ್ನಲೆಯಲ್ಲಿ ಪಾವಗಡ ಅಪರಾಧ ವಿಭಾಗದ ಪಿಎಸ್ಐ ಮಲ್ಲಿಕಾರ್ಜುನ್ ಅವರನ್ನು ಅಮಾನತುಗೊಳಿಸಲಾಗಿದೆ.
Vijaya Karnataka Web pavagada psi suspended
ಸೀನಿಯರ್‌ ನೀಡಿದ ದೂರು ಸ್ವೀಕರಿಸದ ಪಾವಗಡ ಪಿಎಸ್‌ಐ ಅಮಾನತು


ಡಿಸಿಬಿ ಇನ್ಸ್ಪೆಕ್ಟರ್ ಗೌತಮ್ ನೀಡಿದ ದೂರು ಸ್ವೀಕರಿಸಲು ಪಿಎಸ್‌ಐ ನಿರಾಕರಿಸಿದ್ದರು. ಕಳೆದ ರಾತ್ರಿ ಮಟ್ಕಾ ದಂಧೆ ಮೇಲೆ ದಾಳಿ ನಡೆಸಿದ್ದ ಗೌತಮ್ ನೇತೃತ್ವದ ಡಿಸಿಬಿ ಪೊಲೀಸರು ಆರೋಪಿ ಅಶ್ವಥ್ ಸೇರಿದಂತೆ ಐವರನ್ನು ಬಂಧಿಸಿದ್ದಾರೆ. 1.23 ಲಕ್ಷ ನಗದು,ಹತ್ತು ಮೊಬೈಲ್ ವಶಪಡಿಸಿದ್ದಾರೆ.

ಪಾವಗಡದ ನಿವಾಸದಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದ ಅಶ್ವಥ್ ವಿರುದ್ಧ ದೂರು ಸ್ವೀಕರಿಸಲು ಮಲ್ಲಿಕಾರ್ಜುನ್ ನಿರಾಕರಿಸಿದ್ದರು. ಕಾನೂನು ಸುವ್ಯವಸ್ಥೆ ಪಿಎಸ್ಐ ರಜೆಯಲ್ಲಿ ಇದ್ದಕಾರಣ, ಇನ್ ಚಾರ್ಜ್ ನಲ್ಲಿದ್ದ ಮಲ್ಲಿಕಾರ್ಜುನ ಅವರು ದೂರು ಸ್ವೀಕರಿಸಲು ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಪಿ ಡಾ.ದಿವ್ಯಾ ಗೋಪಿನಾಥ್ ಅಮಾನತುಗೊಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ