ಆ್ಯಪ್ನಗರ

ಹೊಸ ವರ್ಷ ಪೂಜೆಗೆಂದು ತೆರಳಿದ ಐವರು ಬಾರದ ಲೋಕಕ್ಕೆ

ಅಡ್ಡ ಬಂದ ಬಾಲಕಿಯನ್ನು ಬಚಾವ್ ಮಾಡಲು ಹೋಗಿ ರಸ್ತೆ ಬದಿ ನಿಂತ್ತಿದ್ದ ಕ್ಯಾಂಟರ್ ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Vijaya Karnataka Web 1 Jan 2018, 11:06 am
ಕುಣಿಗಲ್‌: ಅಡ್ಡ ಬಂದ ಬಾಲಕಿಯನ್ನು ಬಚಾವ್ ಮಾಡಲು ಹೋಗಿ ರಸ್ತೆ ಬದಿ ನಿಂತ್ತಿದ್ದ ಕ್ಯಾಂಟರ್ ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Vijaya Karnataka Web people death by accident in kunigal
ಹೊಸ ವರ್ಷ ಪೂಜೆಗೆಂದು ತೆರಳಿದ ಐವರು ಬಾರದ ಲೋಕಕ್ಕೆ


ಗವಿಮಠದ ಬಳಿ ಈ ಭೀಕರ ದುರಂತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಮತ್ತು ಅದರಲ್ಲಿದ್ದವರ ದೇಹಗಳು ನಜ್ಜುಗುಜ್ಜಾಗಿವೆ. ಚೌಡನಕುಪ್ಪೆ ಹಾಲಿ ಮದ್ದೂರು ವಾಸಿಗಳಾದ ಸಿದ್ದೋಜೀರಾವ್(60), ಉಷಾಬಾಯಿ(35), ಕೀರ್ತನ(7), ಹಿತೇಶ್(3) ಹಾಗೂ ಭುವನ(16)ಮೃತಪಟ್ಟವರು.

ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಹೊಸ ವರ್ಷದ ಅಂಗವಾಗಿ ಕೊರಟಗೆರೆ ಗೊರವನಹಳ್ಳಿ ಲಕ್ಷ್ಮೀ ದೇವಸ್ಥಾನಕ್ಕೆ ಪೂಜೆಗಾಗಿ ತೆರಳುತ್ತಿದ್ದಾಗಈ ಅವಘಡ ಸಂಭವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ