ಆ್ಯಪ್ನಗರ

ಕೊರಟಗರೆಯಲ್ಲಿ ರಸ್ತೆ ಅಪಘಾತಕ್ಕೆ ಮೂವರು ಬಲಿ

ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟಿದ್ದಾರೆ.

Vijaya Karnataka Web 2 Sep 2018, 9:41 am
ಕೊರಟಗೆರೆ: ಬೈಪಾಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಯುವಕರು ಮೃತಪಟ್ಟಿದ್ದಾರೆ.
Vijaya Karnataka Web road accident


ಯುವಕರಿಬ್ಬರು ಬೆಂಗಳೂರಿನಿಂದ ಕೊರಟಗೆರೆ ಪಟ್ಟಣಕ್ಕೆ ಸ್ನೇಹಿತರ ಮದುವೆಗಾಗಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಕೊರಟಗೆರೆ ತಾಲೂಕಿನ ರಾಯವಾರ ಗ್ರಾಮದ ಹಷಿ೯ತ್ ರೆಡ್ಡಿ(24)ಮತ್ತು ದೊಡ್ಡಪಾಲನಹಳ್ಳಿ ಗ್ರಾಮದ ನವೀನಕುಮಾರ್(22)
ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮಧುಗಿರಿ ಮಾರಮ್ಮನ ದೇವಾಲಯಕ್ಕೆ ಹೋಗಿ ಬರುತ್ತಿದ್ದ ಚಿಂತಾಮಣಿ ತಾಲೂಕಿನ ನಂದಿಗಾನಹಳ್ಳಿಯಸಿ ಉಪನ್ಯಾಸಕ ಸೋಮಶೇಖರ್(32)ಗಾಯಗೊಂಡಿದ್ದು, ತುಮಕೂರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಊರ್ಡಿಗೆರೆ ಕ್ರಾಸ್ ಬಳಿಯ ಬೈಪಾಸ್ ರಸ್ತೆಯಲ್ಲಿ 20 ದಿನದಲ್ಲಿ ನಡೆದ 8ನೇ ಅಪಘಾತ ಇದಾಗಿದ್ದು, 5ನೇ ಸಾವು. ಬೆಂಗಳೂರು ಕಡೆಯಿಂದ ಪಾವಗಡಕ್ಕೆ ಮತ್ತು ತುಮಕೂರಿನಿಂದ ಪಾವಗಡಕ್ಕೆ ಸಂಪರ್ಕ ಕಲ್ಪಿಸುವ ಕೊರಟಗೆರೆ ಬೈಪಾಸ್ ರಾಜ್ಯ ಹೆದ್ದಾರಿಯ ಮಾರ್ಗವೇ ಅವೈಜ್ಞಾನಿಕ ಎಂಬುದು ಸ್ಥಳೀಯರ ದೂರು.

ಸಿಪಿಐ ಮುನಿರಾಜು ಮತ್ತು ಪಿಎಸ್‌ಐ ಮಂಜುನಾಥ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ