ಆ್ಯಪ್ನಗರ

ಪಾಲಿಕೆಯಿಂದ 82,500 ರೂ. ದಂಡ ವಸೂಲಿ!

Vijaya Karnataka 12 Jun 2019, 5:00 am
ತುಮಕೂರು: ಮಹಾನಗರ ಪಾಲಿಕೆಯ ಆಯುಕ್ತ ಡಾ.ಟಿ.ಭೂ ಬಾಲನ್‌ ಅವರು ಮಹಾನಗರ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಉದ್ದಿಮೆ ನಡೆಸುತ್ತಿರುವ ಉದ್ದಿಮೆದಾರರಿಗೆ, ಸಾರ್ವಜನಿಕರಿಗೆ ಮಂಗಳವಾರ 82 ಸಾವಿರ 500 ರೂ. ದಂಡ ವಿಧಿಸಿದರು.
Vijaya Karnataka Web plastic polythene bags sales 82500 rs fine collected by tumkur corporation
ಪಾಲಿಕೆಯಿಂದ 82,500 ರೂ. ದಂಡ ವಸೂಲಿ!


ಪಾಲಿಕೆ ಆಯುಕ್ತರ ನೇತೃತ್ವದಲ್ಲಿ ಆರೋಗ್ಯಾಧಿಕಾರಿ ಡಾ.ಟಿ.ನಾಗೇಶ್‌ ಕುಮಾರ್‌, ಪರಿಸರ ಅಭಿಯಂತರರಾದ ಮೃತ್ಯುಂಜಯ, ಪಿ.ಕೆ.ಮೋಹನ್‌ ಕುಮಾರ್‌ ಅವರು ವಿವಿಧ ವಾರ್ಡ್‌ಗಳಿಗೆ ತೆರಳಿ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ, ಸಾರ್ವಜನಿಕ ಪಾದಚಾರಿ ರಸ್ತೆ ಒತ್ತುವರಿ, ಫುಟ್‌ಬಾತ್‌ ಒತ್ತುವರಿ ಹಾಗೂ ಫುಟ್‌ಬಾತ್‌ನಲ್ಲಿ ಕಸ ಹಾಕಿದವರ ಮೇಲೆ ದಂಡ ವಿಧಿಸಿದರು.

ನಿಷೇಧಿತ ಪ್ಲಾಸ್ಟಿಕ್‌ ಬಳಕೆಗೆ ದಂಡ: ಪಾಲಿಕೆ ವ್ಯಾಪ್ತಿಯ 2 ನೇ ವಾರ್ಡ್‌ನಲ್ಲಿ ನಿಷೇಧಿತ ಪ್ಲಾಸ್ಟಿಕ್‌ ಮಾರಾಟ ಮಾಡುತ್ತಿದ್ದ ಅರುಣ್‌ ಪ್ರಾವಿಜನ್‌ ಸ್ಟೋರ್ಸ್‌ಮಾಲೀಕ ಆನಂದ್‌ ಕುಮಾರ್‌ರವರಿಗೆ 10 ಸಾವಿರ ರೂ. ದಂಡ, ವೈಎಚ್‌ಕೆ ಸ್ಟೋರ್ಸ್‌ನ ರಾಜಶೇಖರ್‌ಗೆ 25 ಸಾವಿರ ರೂ., ಅಕ್ರಂಗೆ 500 ರೂ., ಎಪಿಎಂಸಿ ಮಾರುಕಟ್ಟೆಯ ರಾಮಾಂಜಿನಯ್ಯ ಅವರಿಗೆ 500 ರೂ., ಸಿದ್ದೇಶ್ವರ ಆಗ್ರೋ ಕೇಂದ್ರದ ಚಂದ್ರ ಅವರಿಗೆ 2 ಸಾವಿರ ರೂ., ಎಸ್‌ಎಲ್‌ವಿ ಸ್ಟೋರ್ಸ್‌ನ ವಿಜಯಕುಮಾರ್‌ಗೆ 1 ಸಾವಿರ ರೂ., ಮಾರುತಿ ಸ್ಟೋರ್ಸ್‌ನ ಅರುಣ್‌ ಕುಮಾರ್‌ಗೆ 1 ಸಾವಿರ ರೂ., ದಿನೇಶ್‌ಗೆ 2 ಸಾವಿರ., ಬಿಎಸ್‌ಎನ್‌ ಟ್ರೇಡರ್ಸ್‌ನ ದಿನೇಶ್‌ಗೆ 2 ಸಾವಿರ ರೂ., ಸಂಜೀವ್‌ರಾಜುಗೆ 2 ಸಾವಿರ ರೂ., ನೇತಾಜಿ ಟ್ರೇಡಿಂಗ್‌ನ ರಾಮಕೃಷ್ಣರಿಗೆ 500 ರೂ., ವೈಎಚ್‌ಎನ್‌ ಸ್ಟೋರ್ಸ್‌ನ ಸುರೇಶ್‌ಗೆ 2 ಸಾವಿರ ರೂ., ಜೆಎಸ್‌ ಪ್ರಾವಿಷನ್‌ ಸ್ಟೋರ್ಸ್‌ನ ಆನಂದ್‌ಗೆ 10 ಸಾವಿರ ರೂ. ಹಾಗೂ 14 ನೇ ವಾರ್ಡಿನ ನೇತಾಜಿ ಸ್ಟೋರ್ಸ್‌ಗೆ 5 ಸಾವಿರ ರೂ. ಮತ್ತು ಇತರೆ ಅಂಗಡಿಗಳಿಗೆ 5 ಸಾವಿರ ರೂ. ದಂಡ ವಿಧಿಸಿದರು.

ಸಾರ್ವಜನಿಕ ಆಸ್ತಿ ಒತ್ತುವರಿಗೂ ದಂಡ:
ಸಾರ್ವಜನಿಕ ಪಾದಚಾರಿ ರಸ್ತೆ ಒತ್ತುವರಿ ಮಾಡಿಕೊಂಡ 2ನೇ ವಾರ್ಡಿನ ಎಸ್‌ಎಲ್‌ಆರ್‌ ಮೋಟಾರ್‌ ಅಂಡ್‌ ಆಟೋಮೊಬೈಲ್ಸ್‌ನ ಶಶಿಧರ್‌ಗೆ 10 ಸಾವಿರ ರೂ. ದಂಡ, ಮಂಜುನಾಥ್‌ ಅವರಿಗೆ 2 ಸಾವಿರ ರೂ., ಸಾರ್ವಜನಿಕ ಆಸ್ತಿ ನಾಶಪಡಿಸಿದ ಪಾರ್ವತಮ್ಮ ಅವರಿಗೆ 1 ಸಾವಿರ ರೂ., ಹನುಮಂತರಾಜುಗೆ 1 ಸಾವಿರ ರೂ., ಫುಟ್‌ಬಾತ್‌ ಒತ್ತುವರಿ ಮತ್ತು ಕಸ ಹಾಕಿದ ವಿಘ್ನೇಶ್ವರ ಬಾಳೆಹಣ್ಣು ಅಂಗಡಿಯ ಉಮೇಶ್‌ಗೆ 2 ಸಾವಿರ ರೂ. ದಂಡ ವಿಧಿಸಲಾಗಿದೆ.

ಒಟ್ಟಾರೆ ನಗರದಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್‌ ಮಾರಾಟ ಮಾಡುತ್ತಿದ್ದವರಿಗೆ ಪಾಲಿಕೆ ಆಯುಕ್ತರು ದಂಡ ವಿಧಿಸಿ ಖಡಕ್‌ ಸೂಚನೆ ನೀಡಿದ್ದಾರೆ. ಇದು ಹೀಗೆ ಮುಂದುವರೆದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಆರೋಗ್ಯಾಧಿಕಾರಿ ಡಾ.ಟಿ.ನಾಗೇಶ್‌ ಕುಮಾರ್‌, ಪರಿಸರ ಅಭಿಯಂತರರಾದ ಮೃತ್ಯುಂಜಯ, ಪಿ.ಕೆ.ಮೋಹನ್‌ ಕುಮಾರ್‌, ಸಿ.ಕೃಷ್ಣಮೂರ್ತಿ, ಐ.ಬಿ.ನಿಖಿತ, ಎಂ.ಎಸ್‌.ಪ್ರಸನ್ನ ಕುಮಾರ್‌, ಎಚ್‌.ಎಸ್‌.ಚಿಕ್ಕಸ್ವಾಮಿ, ನಟೇಶ್‌ ಎಸ್‌. ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ