ಆ್ಯಪ್ನಗರ

ವಿದ್ಯುತ್‌ ಸ್ಪರ್ಶ; ಇಬ್ಬರು ಸಾವು

ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ಮನೆಯ ಹೊರಗೆ ಹೋಗಿದ್ದಾಗ ವಿದ್ಯುತ್‌ ಕಂಬದಿಂದ ಕೆಳಗೆ ಬಿದ್ದಿದ್ದ ತಂತಿಯನ್ನು ಆಕಸ್ಮಿಕವಾಗಿ ತುಳಿದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾರ್ಪೆಹಳ್ಳಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ.

Vijaya Karnataka 9 Sep 2018, 5:00 am
ಸಿರಾ: ರಾತ್ರಿ ವೇಳೆ ಮೂತ್ರ ವಿಸರ್ಜನೆಗೆ ಮನೆಯ ಹೊರಗೆ ಹೋಗಿದ್ದಾಗ ವಿದ್ಯುತ್‌ ಕಂಬದಿಂದ ಕೆಳಗೆ ಬಿದ್ದಿದ್ದ ತಂತಿಯನ್ನು ಆಕಸ್ಮಿಕವಾಗಿ ತುಳಿದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಕಾರ್ಪೆಹಳ್ಳಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ.
Vijaya Karnataka Web power touch two deaths
ವಿದ್ಯುತ್‌ ಸ್ಪರ್ಶ; ಇಬ್ಬರು ಸಾವು


ವಿದ್ಯುತ್‌ ಸ್ಪರ್ಶದಿಂದ ಸಾವನ್ನಪ್ಪಿದವರು ವೀರದಾಸಪ್ಪ (62) ಮತ್ತು ಹರೀಶ್‌ (40). ಮೊದಲಿಗೆ ವೀರದಾಸಪ್ಪ ವಿದ್ಯುತ್‌ ತಂತಿ ತುಳಿದು ಒದ್ದಾಡುತ್ತಿದ್ದಾಗ ಇವರನ್ನು ರಕ್ಷಿಸಲು ಹರೀಶ್‌ ಮುಂದಾಗಿದ್ದಾನೆ. ತಕ್ಷ ಣವೇ ಇಬ್ಬರಿಗೂ ತೀವ್ರ ವಿದ್ಯುತ್‌ ಪ್ರವಹಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಶಾಸಕ ಬಿ.ಸತ್ಯನಾರಾಯಣ ಭೇಟಿ ನೀಡಿ ಮೃತಪಟ್ಟವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರಕಾರದಿಂದ ಬರುವ ಸವಲತ್ತುಗಳನ್ನು ಕೊಡಿಸುವುದಾಗಿ ತಿಳಿಸಿದರು. ಕಳ್ಳಂಬೆಳ್ಳ ಠಾಣೆಯಲ್ಲಿ ಕೇಸು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.

ಉತ್ಸವ ಮುಂದೂಡಿಕೆ: ಗ್ರಾಮದ ವೀರದಾಸಪ್ಪ ಮತ್ತು ಹರೀಶ್‌ ಅವರ ಸಾವಿನಿಂದ ಮನನೊಂದಿರುವ ಗ್ರಾಮಸ್ಥರು ಶನಿವಾರ ಮತ್ತು ಭಾನುವಾರ ನಡೆಯಬೇಕಾಗಿದ್ದ, ಕರಿಯಮ್ಮ ಹಾಗೂ ಆಂಜನೇಯ ದೇವರ ಆರತೀ ಕಾರ್ಯಕ್ರಮವನ್ನು ಮುಂದೂಡಲು ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ