ಆ್ಯಪ್ನಗರ

ವರಮಹಾಲಕ್ಷ್ಮಿಗೆ ಬೆಲೆ ಏರಿಕೆ ಶಾಕ್‌!

ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ಅಂತರಸನಹಳ್ಳಿ ಕೃಷಿ ಮಾರುಕಟ್ಟೆಗೆ ನಾನಾ ಬಗೆಯ ಹೂವುಗಳು ಲಗ್ಗೆ ಇಟ್ಟಿವೆ.

Vijaya Karnataka 23 Aug 2018, 5:00 am
*ವಿಕಾಸ್‌ ಆರ್‌.
Vijaya Karnataka Web price raise for varamahalakshmi festival
ವರಮಹಾಲಕ್ಷ್ಮಿಗೆ ಬೆಲೆ ಏರಿಕೆ ಶಾಕ್‌!

ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ಅಂತರಸನಹಳ್ಳಿ ಕೃಷಿ ಮಾರುಕಟ್ಟೆಗೆ ನಾನಾ ಬಗೆಯ ಹೂವುಗಳು ಲಗ್ಗೆ ಇಟ್ಟಿವೆ.

ಹಬ್ಬದ ಪ್ರಯುಕ್ತ ಹೂವಿನ ವ್ಯಾಪಾರಕ್ಕೆ ಸ್ವಲ್ಪ ಚುರುಕು ಮುಟ್ಟಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳೋದು ಖಾತರಿಯಾಗಿದೆ. ಹಣ್ಣು, ತರಕಾರಿ ಬೆಲೆ ದಿನದಿಂದ ದಿನಕ್ಕೆ ಏರಿಳಿತವಾಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ತರಕಾರಿ ಕೊಳ್ಳುವವರ ಸಂಖ್ಯೆಗಿಂತ ಹೂವು, ಹಣ್ಣು ಕೊಳ್ಳುವವರ ಸಂಖ್ಯೆಯೇ ಅಧಿಕವಾಗಿದೆ.

ಸೇವಂತಿಗೆಗೆ ಡಿಮ್ಯಾಂಡ್‌: ಕಳೆದ ವಾರದಿಂದ ಶ್ರಾವಣ ಮಾಸ ಪ್ರಾರಂಭಗೊಂಡಿದ್ದು, ಹೂವಿನ ವ್ಯಾಪಾರಕ್ಕೆ ಕಳೆ ಬಂದಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿಗಳು. ಅದರಲ್ಲೂ ಮಾರುಕಟ್ಟೆಗೆ ನಾನಾ ಬಗೆಯ ಸೇವಂತಿಗೆ ಲಗ್ಗೆ ಇಟ್ಟಿದ್ದು, ವ್ಯಾಪಾರ ಚುರುಕುಗೊಂಡಿದೆ.

ಕಳೆದ ವಾರ ಕಿಲೋ ಸೇವಂತಿಗೆ 50ರೂ.ಗೆ ಮಾರಾಟವಾಗಿತ್ತು. ಸದ್ಯ 20 ಮಾರು ಸೇವಂತಿಗೆ 1,500ರೂ. ಇದೆ. ಅಲ್ಲದೇ ಥೆರನಲ್‌ ಸೇವಂತಿಗೆ 20 ಮಾರಿಗೆ 1,500ರೂ., ಬಟನ್ಸ್‌ 20 ಮಾರಿಗೆ 1,600ರೂ., ಪಚ್ಚೆ 20 ಮಾರಿಗೆ 2 ಸಾವಿರ ರೂ., 20 ಮಾರು ಪೂರ್ಣಿಮ 2,500ರೂ., ಎಫ್‌9 ಕಿಲೋಗೆ 130ರೂ., ಎಫ್‌.ಆರೆಂಜ್‌ ಕಿಲೋಗೆ 120ರೂ., ಹಾಗೂ ವೈಟ್‌ರಾಜ 20ಮಾರು 2ಸಾವಿರ ರೂ.ಗೆ ಮಾರಾಟವಾಗುತ್ತಿದೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಚಂದ್ರೇಗೌಡ.

ಅಂಬರಕ್ಕೇರಿದ ಕನಕಾಂಬರ: ಕಳೆದ ವಾರ ಕಿಲೋ 400ರೂ. ಇದ್ದ ಕನಕಾಂಬರ ಸದ್ಯ ಕಿಲೋಗೆ 2ಸಾವಿರ ರೂ.ಗೆ ಏರಿಕೆಯಾಗಿದೆ. ಕಿಲೋ ಮಲ್ಲಿಗೆ 600 ರೂ., ಸುಗಂಧರಾಜ ಕಿಲೋ 150ರಿಂದ 250ರೂ., ಕಾಕಡ 400ರೂ., ಚೆಂಡು ಹೂ ಕಿಲೋ 40ರಿಂದ 50ರೂ.ಗೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ಮುಟ್ಟಿದೆ.

ಹಾರಗಳಿಗೂ ಬೇಡಿಕೆ: ಬಿಡಿ ಹೂವಿನ ಜತೆಗೆ ಹಾರಗಳ ಬೆಲೆ ಏರಿಕೆ ಕಂಡಿದೆ. ಗುಲಾಬಿ ಹಾರ 300ರೂ., ಸುಗಂಧರಾಜ ಹಾರ 100ರಿಂದ 200ರೂ., ಮಲ್ಲಿಗೆ ಹಾರ ಒಂದಕ್ಕೆ 250ರೂ., ಅಲ್ಲದೇ ಕನಗಲ ಹೂ ಮಾರಿಗೆ 50ರೂ., ವೆಲ್‌ವೆಟ್‌ 1ಮಾರಿಗೆ 60ರೂ., ತುಳಸಿ 1ಮಾರಿಗೆ 70ರೂ., ಬಿಡಿ ಗುಲಾಬಿ ಕಿಲೋಗೆ 160ರೂ., 6 ಡೇರೆ ಹೂಗೆ 100ರೂ., ಬ್ಲಾಕ್ಸ್‌ 2ಕ್ಕೆ 50ರೂ., 1ತಾವರೆ ಹೂ 30ರೂ.ಗೆ ಮಾರಾಟವಾಗುತ್ತಿದೆ.

ಹಣ್ಣಿನ ಬೆಲೆಯಲ್ಲಿ ಸ್ಥಿರತೆ: ಸೇಬು ಕಿಲೋ 80ರಿಂದ 100ರೂ., ಮೊಸಂಬಿ 60ರಿಂದ 80ರೂ., ದ್ರಾಕ್ಷಿ 200ರೂ, ಬ್ಲಾಕ್‌ ದ್ರಾಕ್ಷಿ 160ರೂ., ದಾಳಿಂಬೆ 100ರಿಂದ 120ರೂ., ಬಾಳೆ ಹಣ್ಣು ಕಿಲೋ 80ರೂ. ಮತ್ತು ಪೈನಾಪಲ್‌ ಜತೆ 80ರೂ., ಮರಸೇಬು 120ರೂ., ಸಪೋಟ 160ರೂ., ಕಿತ್ತಳೆ ಹಣ್ಣು ಕಿಲೋಗೆ 180ರೂ., ಸೀತಾಫಲ 160ರೂ., ಸೀಬೆಹಣ್ಣು ಕಿಲೋಗೆ 80ರೂ.ಗೆ ಮಾರಾಟವಾಗುತ್ತಿದೆ.


ಈಗಾಗಲೇ ಶ್ರಾವಣ ಆರಂಭವಾಗಿದ್ದು, ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವ್ಯಾಪಾರ ಜೋರಾಗಿದೆ. ಹೂವಿನ ಬೆಲೆ ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಕಳೆದ ವಾರ ಕಿಲೋ 400ರೂ.ಗೆ ಮಾರಟವಾಗಿದ್ದ ಕನಕಾಂಬರ ಸದ್ಯ 2ಸಾವಿರ ರೂ.ಗೆ ಏರಿಕೆಯಾಗಿದೆ.
-ಪ್ರಸನ್ನಕುಮಾರ್‌, ಹೂವಿನ ವ್ಯಾಪಾರಿ

ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಿಂದ ಹಣ್ಣಿನ ವ್ಯಾಪಾರ ಜೋರಾಗಿದೆ. ಮಾವಿನ ಹಣ್ಣು ಬಿಟ್ಟು ಉಳಿದೆಲ್ಲ ಹಣ್ಣುಗಳು ಮಾರುಕಟ್ಟೆಗೆ ಪೂರೈಕೆಯಾಗಿದ್ದು, ಬೆಲೆಯಲ್ಲಿ ಸ್ವಲ್ಪ ಏರುಪೇರಾಗಿದೆ.
-ಅಮ್ಜದ್‌, ಹಣ್ಣಿನ ವ್ಯಾಪಾರಿ

ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ಬೆಲೆ ಹೆಚ್ಚಾಗಿದೆ. ಹಾಗೆಂದ ಮಾತ್ರಕ್ಕೆ ಹಬ್ಬ ಮಾಡದೆ ಇರಲು ಸಾಧ್ಯವಿಲ್ಲ. ಬೆಲೆ ಬಿಸಿಯ ನಡುವೆಯೇ ಹಬ್ಬವನ್ನು ಆಚರಿಸುತ್ತಿದ್ದೇವೆ.
-ರುದ್ರೇಶ್‌, ಗ್ರಾಹಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ