ಆ್ಯಪ್ನಗರ

ವೀರಭದ್ರ ಸ್ವಾಮಿ ದೇವಾಲಯದಲ್ಲಿ ಊಟ ಸೇವಿಸಿ ದುರಂತ ಪ್ರಕರಣ: ಪೂಜಾರಿ ಸ್ಪಷ್ಟನೆ

ನೀರಿನ ವ್ಯವಸ್ಥೆ ನೀವೆ ಮಾಡಿಕೊಳ್ಳುವ ಬಗ್ಗೆ ನಾನು ಅವರಿಗೆ ಮೊದಲೇ ಮಾಹಿತಿ ನೀಡಿದ್ದೆ. ಅದರೂ ಅವರು ಯಾವುದೇ ನೀರಿನ ಸಿದ್ದತೆ ಮಾಡಿಕೊಳ್ಳದೆ ದೇವಾಲಯಕ್ಕೆ ಬಂದಿದ್ದರು ಎಂದು ದೇವಾಲಯದಲ್ಲಿ ನಡೆದ ಊಟದ ದುರಂತದ ಬಗ್ಗೆ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ.

Vijaya Karnataka Web 22 May 2019, 2:27 pm
ತುಮಕೂರು: ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭದ್ರ ಸ್ವಾಮಿ ದೇವಾಲಯದಲ್ಲಿ ಊಟದಲ್ಲಿ ನಡೆದಿರುವ ದುರಂತ ಘಟನೆ ಬಗ್ಗೆ ನಿಡಗಲ್ ದುರ್ಗದ ದೇವಾಲಯ ಪೂಜಾರಿ ರುದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.
Vijaya Karnataka Web prasada


ಗುಡಿಬಂಡೆ ಸಮೀಪದ ಮೋರು ಬಾಗಿಲು ಗ್ರಾಮದವರು ದೇವಾಲಯಕ್ಕೆ ಬರುವುದಾಗಿ ನನಗೆ ಕರೆ ಮಾಡಿದಾಗ ದೇವಾಲಯದ ಸಮೀಪದ ಟ್ರಾನ್ಸ್ಫಾರ್ಮರ್ ಸುಟ್ಟಿರುವ ಬಗ್ಗೆ ಅವರಿಗೆ ಮಾಹಿತಿ ನೀಡಿದ್ದೆ. ಅಲ್ಲದೆ, ನೀರಿನ ವ್ಯವಸ್ಥೆ ನೀವೆ ಮಾಡಿಕೊಳ್ಳುವ ಬಗ್ಗೆ ನಾನು ಅವರಿಗೆ ಮೊದಲೇ ಮಾಹಿತಿ ನೀಡಿದ್ದೆ. ಅದರೂ ಅವರು ಯಾವುದೇ ನೀರಿನ ಸಿದ್ದತೆ ಮಾಡಿಕೊಳ್ಳದೆ ದೇವಾಲಯಕ್ಕೆ ಬಂದಿದ್ದರು.

ಜತೆಗೆ, ಅವರು ಉಟಕ್ಕಾಗಿ ಅಡುಗೆ ತಯಾರಿಸುವಾಗ ತೊಟ್ಟಿ ನೀರನ್ನು ಬಳಸುತ್ತಿದ್ದ ವೇಳೆ, ನಾನೇ ಖುದ್ದಾಗಿ ಹೇಳಿದ್ದೆ ಈ ನೀರು ಬೇಡ ಅಂತ. ಆದರೂ ಅದೇ ನೀರಿನಲ್ಲಿ ಆವರಿಗಾಗಿ‌ ಆಡುಗೆ ಸಿದ್ದತೆ ಮಾಡಿಕಂಡರು. ಇದು ದೇವಾಲಯದ ಪ್ರಸಾದವಲ್ಲ. ಇವರು‌ ತಯಾರಿಸಿದ ಅಡುಗೆಯನ್ನು ನಾನು ಸೇರಿ ನಿಡಗಲ್ ಗ್ರಾಮದ ಹಲವರು ಸೇವನೆ ಮಾಡಿದ್ದಾರೆ. ನಮಗೆ ಯಾವುದೇ ತೊಂದರೆ ಆಗಿಲ್ಲ. ಆದರೆ, ಇವತ್ತು ದೇವಾಲಯದ ಪ್ರಸಾದದಿಂದ ಮತ್ತೊಂದು ಅವಾಂತರ ಎನ್ನುವುದು ದುರದೃಷ್ಟಕರ ಎಂದು ಪೂಜಾರಿ ರುದ್ರಪ್ಪ ಸ್ಪಷ್ಟನೆ ನೀಡಿದ್ದಾರೆ.

ನಾನು ಸುಮಾರು ನಲವತ್ತು ವರ್ಷಗಳಿಂದ ವೀರಭದ್ರ ಸ್ವಾಮಿ ದೇವಾಲಯದ ಪೂಜಾರಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಇಲ್ಲ ಸಲ್ಲದ ಉಹಾಪೋಹ ಹಬ್ಬಿಸಿ ನಿಡಗಲ್ ಹೆಸರು ಕೆಡಿಸಬೇಡಿ ಎಂದು ಸಹ ಪೂಜಾರಿ ಹೇಳಿದ್ದಾರೆ.

ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭದ್ರ ಸ್ವಾಮಿ ದೇವಾಲಕ್ಕೆ ತೆರಳಿ ಹರಿಸೇವೆ ಪ್ರಸಾದದ ಊಟ ಸೇವಿಸಿದ 20ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದರು. ದುರಾದೃಷ್ಟವಶಾತ್ ಘಟನೆಯಲ್ಲಿ ಒಬ್ಬ ಬಾಲಕ ಮೃತಪಟ್ಟಿದ್ದ.

ಸಿರಾ ಮೂಲದ ಭಕ್ತರು ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ನಿಡಗಲ್ಲು ಗ್ರಾಮದ ವೀರಭದ್ರ ಸ್ವಾಮಿ ದೇವಾಲಯಕ್ಕೆ ತೆರಳಿದ್ದರು. ಈ ವೇಳೆ, ಭಕ್ತರು ಅಡುಗೆಗೆ ನೀರಿಲ್ಲದ ಕಾರಣ ತೊಟ್ಟಿಯ ನೀರು ಬಳಸಿ ಅಡುಗೆ ಮಾಡಿದ್ದರು. ಈ ಹಿನ್ನೆಲೆ ತೊಟ್ಟಿ ನೀರಿನಿಂದ ತೊಂದರೆಯಾಗಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ