1.80 ಲಕ್ಷ ಮೌಲ್ಯದ 8 ಬಿಡಾಡಿ ದನಗಳ ರಕ್ಷಣೆ
ರಸ್ತೆಗೆ ದನಕರುಗಳನ್ನು ಬಿಟ್ಟರೆ ಎಚ್ಚರಿಕೆ | ಪಾಲಿಕೆ ಮನವಿಗೆ ಕ್ಯಾರೇ ಎನ್ನದ ಮಾಲೀಕರಿಗೆ ಬರೆ
Vijaya Karnataka 11 Sep 2019, 5:00 am
ತುಮಕೂರು:
ನಗರದ ಪ್ರಮುಖ ಬೀದಿಗಳಲ್ಲಿಎಲ್ಲೆಂದರಲ್ಲಿವಿಹರಿಸುತ್ತಿದ್ದ 8 ಬಿಡಾಡಿ ದನಗಳನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ರಕ್ಷಿಸಿದ್ದು, ಗೋಶಾಲೆಯ ವಶಕ್ಕೆ ಒಪ್ಪಿಸಿದ್ದಾರೆ.
ನಗರದ ಬಿ.ಎಚ್.ರಸ್ತೆಯ ಇಕ್ಕೆಲಗಳಲ್ಲಿ, ರಸ್ತೆಯ ನಡುಭಾಗದಲ್ಲಿಸದಾ ಬಿಡಾಡಿ ದನಗಳು ವಿಹರಿಸುತ್ತಿದ್ದವು. ಇದರಿಂದ ಸಾಕಷ್ಟು ಬಾರಿ ವಾಹನ ಸವಾರರು ಅಪಘಾತಕ್ಕೊಳಗಾಗಿದ್ದರು. ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಪಾಲಿಕೆ ಹಲವು ಬಾರಿ ಪ್ರಕಟಣೆಗಳ ಮೂಲಕ ಮನವಿ ಮಾಡಿದರೂ ಅವುಗಳ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಬಿಡಾಡಿ ದನಗಳನ್ನು ಹಿಡಿದು ವಾಹನ ಸವಾರರ ಪ್ರಾಣ ಉಳಿಸುವಂತೆ ಸಾರ್ವಜನಿಕರು ಕೂಡಾ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದ್ದರು. ಅದರಂತೆ ಕಾರ್ಯಾಚರಣೆ ಆರಂಭಿಸಿರುವ ಪಾಲಿಕೆ ಒಂದೇ ದಿನ 8 ಬಿಡಾಡಿ ದನಗಳನ್ನು ರಕ್ಷಿಸಿದೆ.
15ನೇ ವಾರ್ಡ್ನ ಹೊಸ ಬಡಾವಣೆಯ ಹಳೇ ಪೊಲೀಸ್ ಠಾಣೆ ಎದುರು 1, ಬಿ.ಎಚ್.ರಸ್ತೆಯ ಬಾಟಾ ಶೋ ರೂಂ ಎದುರು 6 ಹಾಗೂ ಕಾಲ್ಟೆಕ್ಸ್ ವೃತ್ತದಲ್ಲಿ1 ಸೇರಿ 8 ಬಿಡಾಡಿ ದನಗಳನ್ನು ಪಾಲಿಕೆ ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಬಿಡಾಡಿ ದನಗಳನ್ನು ಗುಬ್ಬಿ ತಾಲೂಕು ಎಂ.ಎಚ್.ಪಟ್ನಾದಲ್ಲಿನ ಧ್ಯಾನ್ ಫೌಂಡೇಷನ್ ಅವರ ಗೋಶಾಲೆಯ ಸುಪರ್ದಿಗೆ ನೀಡಲಾಗಿದೆ.
ಕ್ಯಾತೆ ತೆಗೆದ ಮಾಲೀಕರು
ಇಷ್ಟು ದಿನ ರಸ್ತೆಗೆ ದನಕರುಗಳನ್ನು ಬಿಡದಂತೆ ಪಾಲಿಕೆ ಮನವಿ ಮಾಡಿದರೂ ಮಾಲೀಕರು ಕ್ಯಾರೇ ಎನ್ನುತ್ತಿರಲಿಲ್ಲ. ಬಿಡಾಡಿ ದನಗಳ ಹಾವಳಿಯಿಂದ ಶಾಲಾ ಮಕ್ಕಳು, ವೃದ್ಧರು ಸೇರಿದಂತೆ ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ಅಪಘಾತಕ್ಕೆ ಒಳಗಾಗಿದ್ದಾರೆ. ಇಷ್ಟಾದರೂ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಮಂಗಳವಾರ ಪಾಲಿಕೆ ಅಧಿಕಾರಿಗಳು ಬಿಡಾಡಿ ದನಗಳನ್ನು ವಶಕ್ಕೆ ಪಡೆಯುತ್ತಿದ್ದಂತೆ ಓಡೋಡಿ ಬಂದ ಮಾಲೀಕರು, ಪಾಲಿಕೆ ಅಧಿಕಾರಿಗಳ ಜತೆಗೆ ವಾಗ್ವಾದ ನಡೆಸಿ ಕಾರ್ಯಾಚರಣೆಗೆ ಅಡ್ಡಿಪಡಿಸಲು ಯತ್ನಿಸಿದರು. ಆದರೆ ಯಾವುದೇ ಒತ್ತಡಕ್ಕೆ ಮಣಿಯದ ಪಾಲಿಕೆ ಅಧಿಕಾರಿಗಳು ಅಂದಾಜು 1.80 ಲಕ್ಷ ರೂ. ಮೌಲ್ಯದ ಬಿಡಾಡಿ ದನಗಳನ್ನು ಗೋಶಾಲೆಗೆ ಕೊಂಡೊಯ್ದು ಬಿಟ್ಟಿದ್ದಾರೆ. ಬಿಡಾಡಿ ದನಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿಸುವುದಾಗಿ ಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದ್ದು, ಸಾರ್ವಜನಿಕರು ಪಾಲಿಕೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಗರದ ಪ್ರಮುಖ ಬೀದಿಗಳಲ್ಲಿಎಲ್ಲೆಂದರಲ್ಲಿವಿಹರಿಸುತ್ತಿದ್ದ 8 ಬಿಡಾಡಿ ದನಗಳನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ರಕ್ಷಿಸಿದ್ದು, ಗೋಶಾಲೆಯ ವಶಕ್ಕೆ ಒಪ್ಪಿಸಿದ್ದಾರೆ.
ನಗರದ ಬಿ.ಎಚ್.ರಸ್ತೆಯ ಇಕ್ಕೆಲಗಳಲ್ಲಿ, ರಸ್ತೆಯ ನಡುಭಾಗದಲ್ಲಿಸದಾ ಬಿಡಾಡಿ ದನಗಳು ವಿಹರಿಸುತ್ತಿದ್ದವು. ಇದರಿಂದ ಸಾಕಷ್ಟು ಬಾರಿ ವಾಹನ ಸವಾರರು ಅಪಘಾತಕ್ಕೊಳಗಾಗಿದ್ದರು. ಬಿಡಾಡಿ ದನಗಳನ್ನು ರಸ್ತೆಗೆ ಬಿಡದಂತೆ ಪಾಲಿಕೆ ಹಲವು ಬಾರಿ ಪ್ರಕಟಣೆಗಳ ಮೂಲಕ ಮನವಿ ಮಾಡಿದರೂ ಅವುಗಳ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಬಿಡಾಡಿ ದನಗಳನ್ನು ಹಿಡಿದು ವಾಹನ ಸವಾರರ ಪ್ರಾಣ ಉಳಿಸುವಂತೆ ಸಾರ್ವಜನಿಕರು ಕೂಡಾ ಪಾಲಿಕೆಗೆ ಹಲವು ಬಾರಿ ಮನವಿ ಮಾಡಿದ್ದರು. ಅದರಂತೆ ಕಾರ್ಯಾಚರಣೆ ಆರಂಭಿಸಿರುವ ಪಾಲಿಕೆ ಒಂದೇ ದಿನ 8 ಬಿಡಾಡಿ ದನಗಳನ್ನು ರಕ್ಷಿಸಿದೆ.
15ನೇ ವಾರ್ಡ್ನ ಹೊಸ ಬಡಾವಣೆಯ ಹಳೇ ಪೊಲೀಸ್ ಠಾಣೆ ಎದುರು 1, ಬಿ.ಎಚ್.ರಸ್ತೆಯ ಬಾಟಾ ಶೋ ರೂಂ ಎದುರು 6 ಹಾಗೂ ಕಾಲ್ಟೆಕ್ಸ್ ವೃತ್ತದಲ್ಲಿ1 ಸೇರಿ 8 ಬಿಡಾಡಿ ದನಗಳನ್ನು ಪಾಲಿಕೆ ಅಧಿಕಾರಿಗಳು ರಕ್ಷಿಸಿದ್ದಾರೆ. ಈ ಬಿಡಾಡಿ ದನಗಳನ್ನು ಗುಬ್ಬಿ ತಾಲೂಕು ಎಂ.ಎಚ್.ಪಟ್ನಾದಲ್ಲಿನ ಧ್ಯಾನ್ ಫೌಂಡೇಷನ್ ಅವರ ಗೋಶಾಲೆಯ ಸುಪರ್ದಿಗೆ ನೀಡಲಾಗಿದೆ.
ಕ್ಯಾತೆ ತೆಗೆದ ಮಾಲೀಕರು
ಇಷ್ಟು ದಿನ ರಸ್ತೆಗೆ ದನಕರುಗಳನ್ನು ಬಿಡದಂತೆ ಪಾಲಿಕೆ ಮನವಿ ಮಾಡಿದರೂ ಮಾಲೀಕರು ಕ್ಯಾರೇ ಎನ್ನುತ್ತಿರಲಿಲ್ಲ. ಬಿಡಾಡಿ ದನಗಳ ಹಾವಳಿಯಿಂದ ಶಾಲಾ ಮಕ್ಕಳು, ವೃದ್ಧರು ಸೇರಿದಂತೆ ದ್ವಿಚಕ್ರ ವಾಹನ ಸವಾರರು ಅನೇಕ ಬಾರಿ ಅಪಘಾತಕ್ಕೆ ಒಳಗಾಗಿದ್ದಾರೆ. ಇಷ್ಟಾದರೂ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಮಂಗಳವಾರ ಪಾಲಿಕೆ ಅಧಿಕಾರಿಗಳು ಬಿಡಾಡಿ ದನಗಳನ್ನು ವಶಕ್ಕೆ ಪಡೆಯುತ್ತಿದ್ದಂತೆ ಓಡೋಡಿ ಬಂದ ಮಾಲೀಕರು, ಪಾಲಿಕೆ ಅಧಿಕಾರಿಗಳ ಜತೆಗೆ ವಾಗ್ವಾದ ನಡೆಸಿ ಕಾರ್ಯಾಚರಣೆಗೆ ಅಡ್ಡಿಪಡಿಸಲು ಯತ್ನಿಸಿದರು. ಆದರೆ ಯಾವುದೇ ಒತ್ತಡಕ್ಕೆ ಮಣಿಯದ ಪಾಲಿಕೆ ಅಧಿಕಾರಿಗಳು ಅಂದಾಜು 1.80 ಲಕ್ಷ ರೂ. ಮೌಲ್ಯದ ಬಿಡಾಡಿ ದನಗಳನ್ನು ಗೋಶಾಲೆಗೆ ಕೊಂಡೊಯ್ದು ಬಿಟ್ಟಿದ್ದಾರೆ. ಬಿಡಾಡಿ ದನಗಳ ರಕ್ಷಣಾ ಕಾರ್ಯಾಚರಣೆ ಮುಂದುವರಿಸುವುದಾಗಿ ಪಾಲಿಕೆ ಆಯುಕ್ತ ಟಿ.ಭೂಬಾಲನ್ ತಿಳಿಸಿದ್ದು, ಸಾರ್ವಜನಿಕರು ಪಾಲಿಕೆ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.