ಆ್ಯಪ್ನಗರ

ರೈಲಿಗೆ ಸಿಲುಕಿ ಚಹಾ ಮಾರುವವನ ಕಾಲು ತುಂಡು

ತಿಪಟೂರು ತಾಲೂಕಿನಲ್ಲಿ ಚಲಿಸುತಿದ್ದ ರೈಲಿಗೆ ಸಿಲುಕಿ ರೈಲಿನಲ್ಲಿ ಚಹಾ ವ್ಯಾಪಾರ ಮಾಡುತಿದ್ದ ಯುವಕನ ಕಾಲು ತುಂಡಾಗಿದೆ.

Vijaya Karnataka Web 28 Dec 2017, 10:46 am
ತುಮಕೂರು: ತಿಪಟೂರು ತಾಲೂಕಿನಲ್ಲಿ ಚಲಿಸುತಿದ್ದ ರೈಲಿಗೆ ಸಿಲುಕಿ ರೈಲಿನಲ್ಲಿ ಚಹಾ ವ್ಯಾಪಾರ ಮಾಡುತಿದ್ದ ಯುವಕನ ಕಾಲು ತುಂಡಾಗಿದೆ. ಹೊನ್ನವಳ್ಳಿ ರೈಲ್ವೆ ನಿಲ್ದಾಣದಲ್ಲಿ ಚಹಾ ಮಾರುತ್ತಿದ್ದ ಇಪ್ಪತ್ತು ವರ್ಷದ ಯುವಕ ನರಸಿಂಹ ಕಾಲು ಕಳೆದಕೊಂಡವರು.
Vijaya Karnataka Web rail accident in tiptur
ರೈಲಿಗೆ ಸಿಲುಕಿ ಚಹಾ ಮಾರುವವನ ಕಾಲು ತುಂಡು


ಹುಬ್ಬಳಿಯಿಂದ ಬೆಂಗಳೂರಿಗೆ ಹೋಗುತಿದ್ದ ಮಹಾಲಕ್ಷ್ಮಿ ರೈಲಿಗೆ ಈತನ ಕಾಲು ಸಿಲುಕಿದೆ. ಬಲಗಾಲು ಮೊಣಕಾಲಿನವರೆಗೆ ಸಂಪೂರ್ಣ ತುಂಡಾಗಿದೆ. ಎಡಗಾಲು ಕೂಡಾ ಜರ್ಜರಿತವಾಗಿದೆ.

ಗಾಯಾಳು ನರಸಿಂಹನನ್ನು ತಕ್ಷಣ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಮಾನ್ಸ್‌ಗೆ ದಾಖಲಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ