ಆ್ಯಪ್ನಗರ

ಸೋಬಾನೆ ಹಾಡುಗಳ ಕಣಜ ಗಂಗಹುಚ್ಚಮ್ಮಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

ಜಾನಪದ ಸೋಬಾನೆ ಹಾಡುಗಳ ಕಣಜ ಎಂದೇ ಖ್ಯಾತಿಯ ತಾಲೂಕಿನ ಜಲಧಿಗೆರೆ ಗಂಗಹುಚ್ಚಮ್ಮ ಅವರಿಗೆ ಈ ಬಾರಿಯ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

Vijaya Karnataka 29 Nov 2018, 10:12 pm
ಕುಣಿಗಲ್‌:
Vijaya Karnataka Web rajyotsava award gangahuchchamma
ಸೋಬಾನೆ ಹಾಡುಗಳ ಕಣಜ ಗಂಗಹುಚ್ಚಮ್ಮಗೆ ರಾಜ್ಯೋತ್ಸವ ಪ್ರಶಸ್ತಿ ಗರಿ


ಜಾನಪದ ಸೋಬಾನೆ ಹಾಡುಗಳ ಕಣಜ ಎಂದೇ ಖ್ಯಾತಿಯ ತಾಲೂಕಿನ ಜಲಧಿಗೆರೆ ಗಂಗಹುಚ್ಚಮ್ಮ ಅವರಿಗೆ ಈ ಬಾರಿಯ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಅನಕ್ಷ ರಸ್ಥ ಗಂಗಹುಚ್ಚಮ್ಮ ಅವರಿಗೆ ಈಗ ಸುಮಾರು 77 ವರ್ಷ. ತಂದೆ ನರಸಿಂಹಯ್ಯ, ತಾಯಿ ಹೊಂಬಾಳಮ್ಮ. ಆರು ಜನ ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳ ಪೈಕಿ ಮೊದಲ ಪುತ್ರಿಯೇ ಇವರು. ಹುಟ್ಟಿದ ದಿನ ಗೊತ್ತಿಲ್ಲದ ಮುಗ್ಧೆ. ತನ್ನದೇ ತಂಡ ಕಟ್ಟಿಕೊಂಡು ಸ್ಥಳದಲ್ಲೇ ಯಾರ ಹೆಸರಿನ ಮೇಲೆ ಬೇಕಾದರೂ ತಕ್ಷ ಣ ಹಾಡು ಕಟ್ಟಿ ಹಾಡುವ ಅಪ್ರತಿಮ ಜಾನಪದ ಕಲಾ ಪ್ರತಿಭೆ. ಯಾವುದೇ ಕಾರ್ಯಕ್ರಮ ನಡೆಯಲಿ, ಅಲ್ಲಿಗೆ ಇವರ ತಂಡ ಹಾಜರು. ಕಾರ್ಯಕ್ರಮ ಆರಂಭವಾಗುವ ಮುನ್ನ ಇವರ ಜಾನಪದ ಹಾಡಿನ ಕಲರವ, ಸಮಯಕ್ಕೆ ತಕ್ಕಂತೆ, ಕಾರ್ಯಕ್ರಮಕ್ಕೆ ತಕ್ಕಂತೆ, ಸನ್ನಿವೇಶಕ್ಕನುಗುಣವಾಗಿ ಜಾನಪದ ಸೊಗಡಿನ ಹಾಡು ಕಟ್ಟಿ ರಾಗವಾಗಿ ಹಾಡುವ ಕ್ರೀಯಾಶೀಲ ಜಾನಪದ ಕಲಾವಿದೆ ಇವರು.

1982ರಿಂದ ಪ್ರಾರಂಭವಾದ ಇವರ ಜಾನಪದ ಹಾಡಿನ ಸೊಗಡು ಇಂದಿನವರೆಗೂ ಮುಂದುವರಿದಿದೆ. ಇಲ್ಲಿವರೆಗೆ ಹೇಳಿರುವ ಹಾಡು ಎಷ್ಟು ಅಂದರೆ ಲೆಕ್ಕ ಹಾಕಲು ಆಗಲ್ಲ ಅಂತಾರೆ. ಗಂಗಹುಚ್ಚಮ್ಮ ಯಾವುದೇ ಕಾರ್ಯಕ್ರಮಕ್ಕೆ ಕರೆದರೂ ತಪ್ಪದೇ ಹೋಗಿ ಹಾಡುತ್ತಿದ್ದರು. ಯಾರ ಬಳಿಯೂ ಸಂಭಾವನೆ ಕೇಳುತ್ತಿರಲ್ಲಿ. ಕೊಟ್ಟಷ್ಟು ಪಡೆದು ಬರುತ್ತಿದ್ದರು. ಆಕಾಶವಾಣಿ, ದೂರದರ್ಶನ, ರಾಮನಗರ ಜಾನಪದ ಲೋಕದ ಜಾನಪದ ಜಾತ್ರೆಯಲ್ಲಿ 55 ಬಾರಿ ಕಾರ್ಯಕ್ರಮ ಕೊಟ್ಟ ಹೆಗ್ಗಳಿಕೆ. ಹಲವು ಸಂಘ ಸಂಸ್ಥೆಗಳು ಗುರುತಿಸಿಕೊಟ್ಟಿರುವ ಪ್ರಶಸ್ತಿಯ ಸಂಖ್ಯೆ 185. ತಾಲೂಕಿನ ಜಲಧಿಗೆರೆ ಚಿಕ್ಕಮ್ಮ ದೊಡ್ಡಮ್ಮ ದೇವರ ಮೇಲೆ ಹಾಡಿರುವ ಕ್ಯಾಸೆಟ್‌ ಬಿಡುಗಡೆ ಮಾಡಿದ್ದಾರೆ. ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇವರು ಅಂದರೆ ಇವರಿಗೆ ಎಲ್ಲಿಲ್ಲದ ಭಕ್ತಿ. ಇದರಿಂದಲೇ ಈ ದೇವರ ಮೇಲೆ ಹೆಚ್ಚಿನ ಜಾನಪದ ಹಾಡು ಕಟ್ಟಿ ಹಾಡಿರುವುದು ವಿಶೇಷ.

ಸೋಬಾನೆ ಪದದಲ್ಲೇ 25 ನಮೂನೆಯ ಹಾಡು ಹಾಡುವ ಪ್ರತಿಭೆ, ಮದುವೆಯ ಪ್ರತಿಯೊಂದು ಶಾಸ್ತಕ್ಕೂ ಗಂಗಹುಚ್ಚಮ್ಮನ ಬಳಿ ಜಾನಪದ ಹಾಡು ತಲೆಯಲ್ಲಿ ಸಂಗ್ರಹವಾಗಿದೆ. ಅಕ್ಕ ತಂಗಿ ಪದ, ತತ್ತ್ವ ಪದ, ರಂಗ ಗೀತೆ, ರಾಗಿ ಬೀಸುವ ಪದ, ಭತ್ತ ಕುಟ್ಟುವ ಪದ, ಜೋಗಳು ಪದ, ಸೇರಿದಂತೆ ರಾಜ್ಯದ ಎಲ್ಲಾ ದೇವರ ಮೇಲೆ ಹಾಡು ಕಟ್ಟಿ ಹಾಡುವುದು ಗಂಗಹುಚ್ಚಮ್ಮ ಅವರ ಬಳಿ ಇರುವ ಅಗಾದ ಪ್ರತಿಭೆ.


ನಾನು ದೇವರ ನಂಬಿ ಕಷ್ಟದಲ್ಲಿ ಬೆಳೆದವಳು. ದೇವರ ಮೇಲೆ ಹೆಚ್ಚು ಹಾಡು ಕಟ್ಟಿ ಹಾಡಿದ್ದರಿಂದ ಭಗವಂತನ ಕರುಣೆಯಿಂದ ರಾಜ್ಯ ಪ್ರಶಸ್ತಿ ಬಂದಿದೆ. ಖುಷಿಯಾಗಿದೆ. ಎಲ್ಲಾ ದೇವರ ಮಹಿಮೆ.

-ಗಂಗಹುಚ್ಚಮ್ಮ, ಜಾನಪದ ಕಲಾವಿದೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ