ಬಡವರಿಗೆ ಪಡಿತರ ಚೀಟಿ ಸೌಲಭ್ಯ
ಪಡಿತರ ಚೀಟಿ ಸೌಲಭ್ಯವಿಲ್ಲದ ಕುಟುಂಬಗಳಿಗೆ ಪಡಿತರ ಚೀಟಿ,ಆರೋಗ್ಯ ಚೀಟಿ, ವೃದ್ಧಾಪ್ಯ ವೇತನ ಸೇರಿದಂತೆ ಮತ್ತಿತರ ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದು ಶಾಸಕ ಡಿ.ಸಿ. ಗೌರಿಶಂಕರ್ ಹೇಳಿದರು.
Vijaya Karnataka 17 Aug 2019, 5:00 am
ತುಮಕೂರು ಗ್ರಾಮಾಂತರ:
ಪಡಿತರ ಚೀಟಿ ಸೌಲಭ್ಯವಿಲ್ಲದ ಕುಟುಂಬಗಳಿಗೆ ಪಡಿತರ ಚೀಟಿ,ಆರೋಗ್ಯ ಚೀಟಿ, ವೃದ್ಧಾಪ್ಯ ವೇತನ ಸೇರಿದಂತೆ ಮತ್ತಿತರ ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದು ಶಾಸಕ ಡಿ.ಸಿ. ಗೌರಿಶಂಕರ್ ಹೇಳಿದರು.
ಗ್ರಾಮಾಂತರದ ಬೆಳ್ಳಾವಿ ಹೋಬಳಿಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಧಾಪನೆ ನೆರವೇರಿಸಿ ಮಾತನಾಡಿದ ಅವರು, ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಪಡಿತರ ಚೀಟಿ ಒದಗಿಸಲಾಗುವುದು. ಜತೆಗೆ ಬಡವರಿಗೆ ಆರೋಗ್ಯ ಚೀಟಿ ಹಾಗೂ ವೃದ್ಧಾಪ್ಯ ವೇತನ ಸಮರ್ಪಕವಾಗಿ ಒದಗಿಸಲಾಗುವುದು ಎಂದರು.
ಗೌರಿಹಬ್ಬಕ್ಕೆ ಉಡುಗೊರೆ: ಮುಂದಿನ ತಿಂಗಳು ಬರುವ ಗೌರಿ ಹಬ್ಬದಂದು ಗ್ರಾಮಾಂತರದ 25 ಸಾವಿರ ಹೆಣ್ಣು ಮಕ್ಕಳಿಗೆ ವಿಶೇಷ ಉಡುಗೊರೆ ನೀಡಲಾಗುವುದು. ಇದರ ಜತೆಗೆ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ನಂತರ ಗೌಡಿಹಳ್ಳಿಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗೆ ತೊಂದರೆ ಕಂಡು ಬರುತ್ತಿದೆ. ಹಾಗಾಗಿ ಹೇಮಾವತಿ ನೀರನ್ನು ಕೆರೆಗಳಿಗೆ ಹರಿಸುವ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಲಾಗಿಸಲಾಗುವುದು. ಮುಂದಿನ 3 ತಿಂಗಳಲ್ಲಿ ಗೌಡಿಹಳ್ಳಿಯ ಗ್ರಾಮಸ್ಥರಿಗೆ ತಮ್ಮ ನಿವೇಶನಗಳ ಹಕ್ಕು ಪತ್ರವನ್ನು ತಲುಪಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದರು.
ಕಾಮಗಾರಿಗಳಿಗೆ ಗುದ್ದಲಿ ಪೂಜೆ: ಒಟ್ಟು 8.60 ಕೋಟಿ ರೂ. ವೆಚ್ಚದಲ್ಲಿ ಕಂಬತ್ತನಹಳ್ಳಿ ಗೇಟ್ನಿಂದ ದೊಡ್ಡಸಾರಂಗಿ ಪಾಳ್ಯ ಗೇಟ್(ವೈಂಡಿಂಗ್), ತುರುಚನಕಟ್ಟೆ, ಕರಡಿಗೆ, ಭೋವಿಪಾಳ್ಯ, ಮಾಕನಹಳ್ಳಿ, ಅರಿಯೂರು, ಭೋವಿಪಾಳ್ಯದವರೆಗೆ ರಸ್ತೆ ಅಭಿವೃದ್ಧಿ, 2.40 ಕೋಟಿ ರೂ. ವೆಚ್ಚದಲ್ಲಿ ಗಂಗಸಂದ್ರ, ಸಿರಿವರ ರಸ್ತೆಯಿಂದ ರಂಗಯ್ಯನಪಾಳ್ಯ ಕುಂಕುಮನಹಳ್ಳಿ ಮಾರ್ಗವಾಗಿ ಕೊತ್ತಿಹಳ್ಳಿ ರಸ್ತೆ ಅಭಿವೃದ್ಧಿ, 15 ಕೋಟಿ ರೂ. ವೆಚ್ಚದಲ್ಲಿ ಹಾಲನೂರು ಗ್ರಾಮದ ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ, 2.90 ಕೋಟಿ ರೂ. ವೆಚ್ಚದಲ್ಲಿ ಕಾಗ್ಗೆರೆ ಸಿಂಗ್ ಮನೆಯಿಂದ ಅಸಲೀಪುರ, ಸಿಂಗೀಪುರ, ಟಿ.ಗೊಲ್ಲಹಳ್ಳಿ ಮಾರ್ಗ ದೊಡ್ಡೇರಿ-ಬೆಳ್ಳಾವಿ ಟಿ.ಸಿ.ಬಿ ರಸ್ತೆ ಅಭಿವೃದ್ಧಿ, 1.50 ಕೋಟಿ ರೂ. ವೆಚ್ಚದಲ್ಲಿ ದೊಡ್ಡನಾರವಂಗಲದಿಂದ ಗೌಡಿಹಳ್ಳಿ ಮೂಲಕ ಬಾಣಾವರ ಕ್ರಾಸ್-ತಿಮ್ಮಲಾಪುರದವರೆಗೆ ರಸ್ತೆ ಅಭಿವೃದ್ಧಿ, ಸೇರಿದಂತೆ ಇನ್ನೂ ವಿವಿಧ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಜೆಡಿಎಸ್ನ ತಾಲೂಕು ಅಧ್ಯಕ್ಷ ಹಾಲನೂರು ಅನಂತ್, ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಎಪಿಎಂಸಿ ಮಾಜಿ ಸದಸ್ಯ ಪ್ರಭು, ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಪಡಿತರ ಚೀಟಿ ಸೌಲಭ್ಯವಿಲ್ಲದ ಕುಟುಂಬಗಳಿಗೆ ಪಡಿತರ ಚೀಟಿ,ಆರೋಗ್ಯ ಚೀಟಿ, ವೃದ್ಧಾಪ್ಯ ವೇತನ ಸೇರಿದಂತೆ ಮತ್ತಿತರ ಸರಕಾರಿ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗುವುದು ಎಂದು ಶಾಸಕ ಡಿ.ಸಿ. ಗೌರಿಶಂಕರ್ ಹೇಳಿದರು.
ಗ್ರಾಮಾಂತರದ ಬೆಳ್ಳಾವಿ ಹೋಬಳಿಯ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಶುಕ್ರವಾರ ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಧಾಪನೆ ನೆರವೇರಿಸಿ ಮಾತನಾಡಿದ ಅವರು, ಪಡಿತರ ಚೀಟಿ ಇಲ್ಲದ ಕುಟುಂಬಗಳಿಗೆ ಪಡಿತರ ಚೀಟಿ ಒದಗಿಸಲಾಗುವುದು. ಜತೆಗೆ ಬಡವರಿಗೆ ಆರೋಗ್ಯ ಚೀಟಿ ಹಾಗೂ ವೃದ್ಧಾಪ್ಯ ವೇತನ ಸಮರ್ಪಕವಾಗಿ ಒದಗಿಸಲಾಗುವುದು ಎಂದರು.
ಗೌರಿಹಬ್ಬಕ್ಕೆ ಉಡುಗೊರೆ: ಮುಂದಿನ ತಿಂಗಳು ಬರುವ ಗೌರಿ ಹಬ್ಬದಂದು ಗ್ರಾಮಾಂತರದ 25 ಸಾವಿರ ಹೆಣ್ಣು ಮಕ್ಕಳಿಗೆ ವಿಶೇಷ ಉಡುಗೊರೆ ನೀಡಲಾಗುವುದು. ಇದರ ಜತೆಗೆ ಮಹಿಳೆಯರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ನಂತರ ಗೌಡಿಹಳ್ಳಿಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗೆ ತೊಂದರೆ ಕಂಡು ಬರುತ್ತಿದೆ. ಹಾಗಾಗಿ ಹೇಮಾವತಿ ನೀರನ್ನು ಕೆರೆಗಳಿಗೆ ಹರಿಸುವ ಮೂಲಕ ಕುಡಿಯುವ ನೀರಿನ ಸೌಲಭ್ಯ ಒದಲಾಗಿಸಲಾಗುವುದು. ಮುಂದಿನ 3 ತಿಂಗಳಲ್ಲಿ ಗೌಡಿಹಳ್ಳಿಯ ಗ್ರಾಮಸ್ಥರಿಗೆ ತಮ್ಮ ನಿವೇಶನಗಳ ಹಕ್ಕು ಪತ್ರವನ್ನು ತಲುಪಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ ಎಂದರು.
ಕಾಮಗಾರಿಗಳಿಗೆ ಗುದ್ದಲಿ ಪೂಜೆ: ಒಟ್ಟು 8.60 ಕೋಟಿ ರೂ. ವೆಚ್ಚದಲ್ಲಿ ಕಂಬತ್ತನಹಳ್ಳಿ ಗೇಟ್ನಿಂದ ದೊಡ್ಡಸಾರಂಗಿ ಪಾಳ್ಯ ಗೇಟ್(ವೈಂಡಿಂಗ್), ತುರುಚನಕಟ್ಟೆ, ಕರಡಿಗೆ, ಭೋವಿಪಾಳ್ಯ, ಮಾಕನಹಳ್ಳಿ, ಅರಿಯೂರು, ಭೋವಿಪಾಳ್ಯದವರೆಗೆ ರಸ್ತೆ ಅಭಿವೃದ್ಧಿ, 2.40 ಕೋಟಿ ರೂ. ವೆಚ್ಚದಲ್ಲಿ ಗಂಗಸಂದ್ರ, ಸಿರಿವರ ರಸ್ತೆಯಿಂದ ರಂಗಯ್ಯನಪಾಳ್ಯ ಕುಂಕುಮನಹಳ್ಳಿ ಮಾರ್ಗವಾಗಿ ಕೊತ್ತಿಹಳ್ಳಿ ರಸ್ತೆ ಅಭಿವೃದ್ಧಿ, 15 ಕೋಟಿ ರೂ. ವೆಚ್ಚದಲ್ಲಿ ಹಾಲನೂರು ಗ್ರಾಮದ ಕಾಲೋನಿಯಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿ, 2.90 ಕೋಟಿ ರೂ. ವೆಚ್ಚದಲ್ಲಿ ಕಾಗ್ಗೆರೆ ಸಿಂಗ್ ಮನೆಯಿಂದ ಅಸಲೀಪುರ, ಸಿಂಗೀಪುರ, ಟಿ.ಗೊಲ್ಲಹಳ್ಳಿ ಮಾರ್ಗ ದೊಡ್ಡೇರಿ-ಬೆಳ್ಳಾವಿ ಟಿ.ಸಿ.ಬಿ ರಸ್ತೆ ಅಭಿವೃದ್ಧಿ, 1.50 ಕೋಟಿ ರೂ. ವೆಚ್ಚದಲ್ಲಿ ದೊಡ್ಡನಾರವಂಗಲದಿಂದ ಗೌಡಿಹಳ್ಳಿ ಮೂಲಕ ಬಾಣಾವರ ಕ್ರಾಸ್-ತಿಮ್ಮಲಾಪುರದವರೆಗೆ ರಸ್ತೆ ಅಭಿವೃದ್ಧಿ, ಸೇರಿದಂತೆ ಇನ್ನೂ ವಿವಿಧ ಕಾಮಗಾರಿಗಳಿಗೆ ಶಾಸಕರು ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಜೆಡಿಎಸ್ನ ತಾಲೂಕು ಅಧ್ಯಕ್ಷ ಹಾಲನೂರು ಅನಂತ್, ಯುವ ಘಟಕದ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಎಪಿಎಂಸಿ ಮಾಜಿ ಸದಸ್ಯ ಪ್ರಭು, ಶಿವರಾಜ್ ಮತ್ತಿತರರು ಉಪಸ್ಥಿತರಿದ್ದರು.