ಆ್ಯಪ್ನಗರ

8 ಲಕ್ಷ ನಗದು, 13 ಲಕ್ಷ ರೂ.ನ ಚೆಕ್‌ ದೋಚಿದ್ದ ದರೋಡೆಕೋರರ ಬಂಧನ

ಇತ್ತೀಚೆಗೆ ಅಡುಗೆ ಆಯಿಲ್‌ ಸರಬರಾಜು ಕಂಪನಿಯೊಂದರ ಬಿಲ್‌ ಕಲೆಕ್ಟರ್‌ನ ಕಣ್ಣಿಗೆ ಕಾರದಪುಡಿ ಎರಚಿ 8 ಲಕ್ಷ ನಗದು ಹಾಗೂ 13 ಲಕ್ಷ ರೂ. ಚೆಕ್‌ ದೋಚಿದ್ದ ಎಂಟು ಮಂದಿ ದರೋಡೆಕೋರರನ್ನು ಕುಣಿಗಲ್‌ ಪೊಲೀಸರು ಬಂಧಿಸಿದ್ದಾರೆ.

Vijaya Karnataka 27 Nov 2018, 3:16 pm
ಕುಣಿಗಲ್‌: ಇತ್ತೀಚೆಗೆ ಅಡುಗೆ ಆಯಿಲ್‌ ಸರಬರಾಜು ಕಂಪನಿಯೊಂದರ ಬಿಲ್‌ ಕಲೆಕ್ಟರ್‌ನ ಕಣ್ಣಿಗೆ ಕಾರದಪುಡಿ ಎರಚಿ 8 ಲಕ್ಷ ನಗದು ಹಾಗೂ 13 ಲಕ್ಷ ರೂ. ಚೆಕ್‌ ದೋಚಿದ್ದ ಎಂಟು ಮಂದಿ ದರೋಡೆಕೋರರನ್ನು ಕುಣಿಗಲ್‌ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web rs 8 lakh cash rs 13 lakh check detention of gangster robbers
8 ಲಕ್ಷ ನಗದು, 13 ಲಕ್ಷ ರೂ.ನ ಚೆಕ್‌ ದೋಚಿದ್ದ ದರೋಡೆಕೋರರ ಬಂಧನ


ಬಂಧಿತ ಎಂಟು ಮಂದಿ ದರೋಡೆಕೋರರನ್ನು ಕುಣಿಗಲ್‌ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಪೊಲೀಸ್‌ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಆರೋಪಿಗಳ ಹೆಸರು ಹಾಗೂ ವಿಳಾಸವನ್ನು ತಿಳಿಸಲು ಪೊಲೀಸರು ನಿರಾಕರಿಸಿದ್ದಾರೆ.

ನ.14ರಂದು ತುಮಕೂರಿನ ಎನ್‌.ಆರ್‌. ಆಯಿಲ್‌ ಮಿಲ್‌ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್‌ ಅವರು ಕುಣಿಗಲ್‌ ಪಟ್ಟಣದ ಅಂಗಡಿಗಳಿಗೆ ಸರಬರಾಜು ಮಾಡಿದ್ದ ಬಿಲ್‌ನ ಹಣ ಸಂಗ್ರಹಿಸಿ ಕುಣಿಗಲ್‌ನಿಂದ ಖಾಸಗಿ ಬಸ್‌ನಲ್ಲಿ ತುಮಕೂರಿಗೆ ತೆರಳುತ್ತಿದ್ದರು. ಇದನ್ನು ಮೊದಲೇ ತಿಳಿದುಕೊಂಡು ಹೊಂಚು ಹಾಕಿದ್ದ ಎಂಟು ಮಂದಿ ದರೋಡೆಕೋರರ ತಂಡ ಕೊತ್ತಗೆರೆ ಬಳಿ ಬಸ್‌ನಲ್ಲಿ ಸಂಸಾರದ ವಿಚಾರವಾಗಿ ಜಗಳ ತಗೆದು ಪ್ರಕಾಶ್‌ ಅವರನ್ನು ಬಸ್‌ನಿಂದ ಕೆಳಗೆ ಇಳಿಸಿಕೊಂಡಿದ್ದಾರೆ. ಬಳಿಕ ಸವೀರ್‍ಸ್‌ ರಸ್ತೆಗೆ ಕರೆದುಕೊಂಡು ಹೋಗಿ ಕಣ್ಣಿಗೆ ಕಾರದ ಪುಡಿ ಎರಚಿ, ಚಾಕುವಿಂದ ಚುಚ್ಚಿ ಅವರ ಬಳಿಯಿದ್ದ ನಗದು ಹಾಗೂ ಚೆಕ್‌ ದೋಚಿ ಪರಾರಿಯಾಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ