ಆ್ಯಪ್ನಗರ

ಎಚ್ ಡಿ ಕುಮಾರಸ್ವಾಮಿಗೆ ಡಿಕೆಶಿ ಮೇಲೆ ಪ್ರೀತಿ ಇಲ್ಲ ಎಂದ ಮಾಜಿ ಸಚಿವ ಎಸ್ ಆರ್ ಶ್ರೀನಿವಾಸ

ಮಾಜಿ ಸಚಿವ ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಕ ಸಮುದಾಯದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾಗಿಯಾಗದಿರುವುದಕ್ಕೆ ಅಪಸ್ವರ ಕೇಳಿ ಬರುತ್ತಿದೆ.

Vijaya Karnataka Web 12 Sep 2019, 3:45 pm
ತುಮಕೂರು: ಮಾಜಿ ಸಚಿವ ಡಿ ಕೆ ಶಿವಕುಮಾಕ್ ಮೇಲೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಪ್ರೀತಿ ಇಲ್ಲ. ಪ್ರೀತಿ ಇದ್ದಿದ್ದರೆ ಅವರು ಕೂಡಾ ಒಕ್ಕಲಿಗ ಸಮುದಾಯದ ಹೋರಾಟಕ್ಕೆ ಬರುತ್ತಿದ್ದರು ಎಂದು ಮಾಜಿ ಎಸ್ ಆರ್ ಶ್ರೀನಿವಾಸ ಸ್ಫೋಟಕ ಹೇಳಿಕೆ ನೀಡಿದ್ದಾರೆ.
Vijaya Karnataka Web hdk


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ ಕೆ ಶಿವಕುಮಾರ್ ಬಂಧನ ಖಂಡಿಸಿ ಒಕ್ಕಲಿಗ ಸಮಾಜ ನಡೆಸಿದ ಪ್ರತಿಭಟನೆಗೆ ಕುಮಾರಸ್ವಾಮಿ ಅವರು ಬರಲೇಬೇಕು ಅಂತೇನಿಲ್ಲ. ನಮಗೆಲ್ಲ ಡಿಕೆಶಿ ಮೇಲೆ ಪ್ರೀತಿ, ಅಭಿಮಾನ ಇದ್ದು, ನಾವೆಲ್ಲ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದೇವು ಎಂದು ಹೇಳಿದರು.

ನಮ್ಮ ಸಮುದಾಯದ ಮುಖಂಡನಿಗೆ ಅನ್ಯಾಯವಾದಗ ಪ್ರತಿಭಟಿಸುವುದು ನಮ್ಮ ಕರ್ತವ್ಯ. ಆದರೆ, ನಮ್ಮದೇ ಸಮುದಾಯದವರಾದ ಕುಮಾರಸ್ವಾಮಿಗೆ ಆ ಭಾವನೆ ಇರಲಿಲ್ಲ. ಭಾವನೆ ಇದ್ದಿದ್ದರೆ ಅವರು ಸಹ ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದರು. ಪ್ರತಿಭಟನೆಗೆ ಬನ್ನಿ ಎಂದು ಆಮಂತ್ರಣ ಕೊಟ್ಟು ಕರೆಯುವ ಕಾರ್ಯಕ್ರಮ ಆಗಿರಲಿಲ್ಲ. ಸಮುದಾಯದ ಕಾರ್ಯಕ್ರಮಕ್ಕೆ ಆಮಂತ್ರಣ ಕೊಡುವಂತದ್ದು ಎಲ್ಲೂ ಇಲ್ಲ. ಪ್ರತಿಭಟನೆಗೆ ಬಂದಿದ್ದ 25 ಸಾವಿರಕ್ಕೂ ಅಧಿಕ ಜನಕ್ಕೆ ಆಮಂತ್ರಣ ಕೊಟ್ಟಿದ್ವಾ?, ಎಂದು ಪ್ರಶ್ನಿಸಿದರು.

ಒಕ್ಕಲಿಕರಲ್ಲಿ ಸ್ವಪ್ರತಿಷ್ಠೆ ಹೆಚ್ಚಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ವಕ್ಕಲಿಗರಲ್ಲಿ ಪ್ರತಿಷ್ಠೆ ಜಾಸ್ತಿಯೇ ಇದೆ. ತಿಮ್ಮೇಗೌಡ 10 ಕುರಿ ಕಡಿದರೆ, ರಾಮೇಗೌಡ 15 ಕುರಿ ಕಡಿಯುತ್ತಾನೆ. ಆದರೆ, ವ್ಯಯಕ್ತಿಕ ಪ್ರತಿಷ್ಠೆಗಳಿಂದ ಸಮುದಾಯ ಕೆಡುತ್ತಿದೆ. ಸಮುದಾಯದ ವಿಚಾರ ಬಂದಾಗ ಸ್ವಪ್ರತಿಷ್ಠೆ ಬಿಟ್ಟು ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.

ಫೋನ್ ಕದ್ದಾಲಿಕೆ

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಮಾಡಿದ್ದರೆ, ಅವರನ್ನು ಹಿಡಿದುಕೊಂಡು ಹೋಗಲಿ. ಬೇಡ ಎಂದು ಹೇಳಿದವರು ಯಾರು?, ಅವರು ಮಾಡಬಾರದನ್ನು ಮಾಡಿ ದುಡ್ಡು ಹೊಡೆದಿದ್ದರೆ, ಅವರನ್ನು ಹಿಡಿದುಕೊಂಡು ಹೋಗುತ್ತಾರೆ. ಅವರನ್ನು ಬಂಧಿಸಬಾರದೆಂದು ಕಾನೂನು ಇದೆಯಾ?, ಎದರು.

ನನ್ನ ಮಾಹಿತಿ ಪ್ರಕಾರ ಫೋನ್ ಕದ್ದಾಲಿಕೆ ಆಗಿರುವುದು ನಿಜ. ಇದಕ್ಕೆ ಯಾರು ಹೊಣೆಗಾರರೋ ಅವರಿಗೆ ಶಿಕ್ಷೆಯಾಗಬೇಕು. ನನ್ನ ಫೋನ್ ಕೂಡ ಕದ್ದಾಲಿಕೆಯಾಗಿತ್ತು. ವಿಷಯ ಗೊತ್ತಾಗುತ್ತಿದ್ದಂತೆ, ಫೋನ್ ನಂಬರ್ ಬದಲಾಯಿಸಿದೆ. ನಾನು ಕೂಡ ಸರಕಾರದ ಭಾಗವಾಗಿದ್ದರೂ, ನನ್ನ ಫೋನ್ ಕೂಡ ಕದ್ದಾಲಿಕೆಯಾಗಿದೆ ಎಂದು ಆರೋಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ