ಆ್ಯಪ್ನಗರ

ತುಮಕೂರು: 12 ವರ್ಷ ಮಗುವಿನಂತೆ ಸಾಕಿದ್ದ ಶ್ರೀಗಂಧದ ಗಿಡಕ್ಕೆ ಕನ್ನ ಹಾಕಿದ ಕಳ್ಳರು..!

ಕಳೆದ 12 ವರ್ಷದಿಂದ ಶಾಲಾ ಆವರಣದಲ್ಲಿ ಪೋಷಣೆ ಮಾಡಲಾಗಿದ್ದ ಶ್ರೀಗಂಧದ ಗಿಡವನ್ನು ರಾತ್ರೋರಾತ್ರಿ ಕಳ್ಳರ ತಂಡ ಕತ್ತರಿಸಿ ಪರಾರಿ ಆಗಿರುವ ಘಟನೆ ತುಮಕೂರಿನ ಕೊರಟಗೆರೆ ತಾಲೂಕಿನಲ್ಲಿ ನಡೆದಿದೆ. ಹೊಳವನಹಳ್ಳಿ ಗ್ರಾಮದ ಜೈನಬಿಯಾ ಶಾಲಾ ಆವರಣದಲ್ಲಿ ಶ್ರೀಗಂಧ ಬೆಳೆಯಲಾಗಿತ್ತು.

Vijaya Karnataka Web 13 Jan 2021, 8:50 pm
ಕೊರಟಗೆರೆ (ತುಮಕೂರು): ಸುಂದರ ಪರಿಸರ ನಿರ್ಮಾಣಕ್ಕಾಗಿ ಶಾಲಾ ಆವರಣದಲ್ಲಿ ಕಳೆದ 12 ವರ್ಷದಿಂದ ಪೋಷಣೆ ಮಾಡಲಾಗಿದ್ದ ಶ್ರೀಗಂಧದ ಗಿಡವನ್ನು ರಾತ್ರೋರಾತ್ರಿ ಕಳ್ಳರ ತಂಡ ಕತ್ತರಿಸಿ ಪರಾರಿ ಆಗಿರುವ ಘಟನೆ ಮಂಗಳವಾರ ಮಧ್ಯರಾತ್ರಿ ನಡೆದಿದೆ.
Vijaya Karnataka Web Sandalwood
ಶಾಲಾ ಆವರಣದಲ್ಲಿದ್ದ ಶ್ರೀಗಂಧ ಕಡಿದ ಕಳ್ಳರು


ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಗ್ರಾಮದ ಜೈನಬಿಯಾ ಶಾಲೆಯ ಆವರಣದಲ್ಲಿ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಶ್ರಮದಿಂದ ಕಳೆದ 12 ವರ್ಷದಿಂದ 3 ಶ್ರೀಗಂಧ ಮರಗಳು ಬೆಳೆಸಿದ್ದಾರೆ. ಮಂಗಳವಾರ ತಡರಾತ್ರಿ ಕಳ್ಳರ ತಂಡ ಸಾವಿರಾರು ರೂಪಾಯಿ ಬೆಲೆ ಬಾಳುವ 1 ಶ್ರೀಗಂಧ ಗಿಡವನ್ನು ಕತ್ತರಿಸಿದ್ದಾರೆ.

ಶಾಲಾ ಆವರಣದಲ್ಲಿ ಸಿಸಿಟಿವಿ ಅಳವಡಿಸಿದೆ. ಸಿಸಿಟಿವಿ ಇಲ್ಲದಿರುವ ಕಡೆಯಿಂದ ಆಗಮಿಸಿದ ಕಳ್ಳರ ತಂಡ ಶ್ರೀಗಂಧದ ಗಿಡವನ್ನು ಕತ್ತರಿಸಿಕೊಂಡು ಪರಾರಿ ಆಗಿದ್ದಾರೆ. 7 ಅಡಿ ಉದ್ದದ ತುಂಡು ಕತ್ತರಿಸಿಕೊಂಡು ಗಿಡದ ಸುಳಿಯನ್ನು ಸ್ಥಳದಲ್ಲಿಯೇ ಬಿಡಲಾಗಿದೆ.
ಕೊರಟಗೆರೆ: ಪ್ರೀತಿಸಿ ವಿವಾಹವಾದ ಮುಸ್ಲಿಂ ದಂಪತಿಯಿಂದ ರಕ್ಷಣೆಗೆ ಆಗ್ರಹಿಸಿ ವಿಡಿಯೋ!ಹೊಳವನಹಳ್ಳಿ ಜೈನಬೀಯಾ ಶಾಲೆಯ ವ್ಯವಸ್ಥಾಪಕ ವಿಜಯಕುಮಾರ್ ಮಾತನಾಡಿ 12 ವರ್ಷದಿಂದ ಕಷ್ಟಪಟ್ಟು 3 ಶ್ರೀಗಂಧ ಮರ ಬೆಳೆಸಲಾಗಿದೆ. 1 ಗಿಡ ರಾತ್ರೋರಾತ್ರಿ ಕಳ್ಳತನ ಆಗಿದೆ. ಇನ್ನೂಳಿದ 2 ಗಿಡಗಳಿಗೆ ರಕ್ಷಣೆ ಬೇಕಾಗಿದೆ. ಕೊರಟಗೆರೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದರು. ಕೊರಟಗೆರೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ