ಆ್ಯಪ್ನಗರ

‘ಮಣ್ಣನ್ನು ರಕ್ಷಿಸಿ ಅನ್ನದಾತರನ್ನು ಉಳಿಸಿ’

ಅಭಿವೃದ್ಧಿ ನೆಪದಲ್ಲಿ ಶಕ್ತಿ ಕುಂದುತ್ತಿರುವ, ಪೌಷ್ಠಿಕಾಂಶ, ಸತ್ವ, ಅಸ್ಥಿತ್ವ ಕಳೆದುಕೊಳ್ಳುತ್ತಿರುವ ಮಣ್ಣನ್ನು ರಕ್ಷಿಸುವ ಮೂಲಕ ಅನ್ನದಾತರನ್ನು ಉಳಿಸುವ ಕೆಲಸವಾಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕೃಷಿ ಹಾಗೂ ಆಹಾರ ತಜ್ಞ ಡಾ.ಬಿ.ಪಿ.ಶಶಿಕಾಂತ್‌ ಹೇಳಿದರು.

Vijaya Karnataka 24 Nov 2018, 5:00 am
ಸೂಪರ್‌ ಸ್ಟಾರ್‌ ರೈತ ಸಾಧಕ ರೈತರಿಗೆ ವಿಕ ಪುರಸ್ಕಾರ ಕಾರ್ಯಕ್ರಮದಲ್ಲಿ ಡಾ.ಬಿ.ಪಿ.ಶಶಿಕಾಂತ್‌ ಅಭಿಮತ
Vijaya Karnataka Web save the soil and formers dr bp shashikant speech in super star farmer programme in tumkur
‘ಮಣ್ಣನ್ನು ರಕ್ಷಿಸಿ ಅನ್ನದಾತರನ್ನು ಉಳಿಸಿ’


ತುಮಕೂರು: ಅಭಿವೃದ್ಧಿ ನೆಪದಲ್ಲಿ ಶಕ್ತಿ ಕುಂದುತ್ತಿರುವ, ಪೌಷ್ಠಿಕಾಂಶ, ಸತ್ವ, ಅಸ್ಥಿತ್ವ ಕಳೆದುಕೊಳ್ಳುತ್ತಿರುವ ಮಣ್ಣನ್ನು ರಕ್ಷಿಸುವ ಮೂಲಕ ಅನ್ನದಾತರನ್ನು ಉಳಿಸುವ ಕೆಲಸವಾಗಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕೃಷಿ ಹಾಗೂ ಆಹಾರ ತಜ್ಞ ಡಾ.ಬಿ.ಪಿ.ಶಶಿಕಾಂತ್‌ ಹೇಳಿದರು.

ವಿಜಯ ಕರ್ನಾಟಕದಿಂದ ತುಮಕೂರು ವಿವಿಯ ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ನಡೆದ 'ಸೂಪರ್‌ ಸ್ಟಾರ್‌ ರೈತ' ಸಾಧಕ ರೈತರಿಗೆ ವಿಕ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರ ಉಳಿವಿಗಾಗಿ ಬರ ಬಂದರೆ ಏನು ಕ್ರಮಕೈಗೊಳ್ಳಬೇಕು. ಬರ ಬರದಂತೆ ಏನು ಯೋಜನೆ ರೂಪಿಸಿಕೊಳ್ಳಬೇಕು ಎಂಬುದರ ಕುರಿತು ಸರಕಾರಕ್ಕೆ ಎರಡು ವರ್ಷಗಳ ಹಿಂದೆಯೇ ಪತ್ರ ಬರೆದಿದ್ದೇನೆ ಎಂದ ಅವರು, ರೈತರ ಉಳಿವಿಗಾಗಿ ಅಂತರ್ಜಲ ಅಭಿವೃದ್ಧಿಗಾಗಿ ಗ್ರಾಮಗಳಲ್ಲಿನ ಕೆರೆ ಕಟ್ಟೆಗಳಲ್ಲಿ ತುಂಬಿಕೊಂಡಿರುವ ಶೇ. 70ರಷ್ಟು ಹೂಳನ್ನು ತೆಗೆಸಿ ರೈತರ ಜಮೀನಿಗೆ ಹೊಡೆಸುವ ಕಾರ್ಯಕ್ಕೆ ಸರಕಾರ ಮತ್ತು ಸಂಘ ಸಂಸ್ಥೆಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.

ಬೋರ್‌ವೆಲ್‌ ಕೊರೆಸಿ; ಎಲ್ಲಿ ಕೆರೆ ಕಟ್ಟೆಗಳು ಬರಿದಾಗಿವಿಯೋ, ಅಂತರ್ಜಲ ಕುಸಿತವಾಗಿದೆಯೋ, ರಾಸುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆಯೋ ಅಲ್ಲೆಲ್ಲಾ, ಬೋರ್‌ವೆಲ್‌ ಪಾಯಿಂಟ್‌ ಮಾಡಿ, ಬೋರ್‌ವೆಲ್‌ ತೆಗೆಸುವ ಕಾರ್ಯವಾಗಬೇಕು. ಆ ಮೂಲಕ ರಾಸುಗಳ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದರು.

ಆಳವಾಗಿ ಭೂಮಿ ಉಳುಮೆ ಮಾಡಿ; ರೈತರು ಅಂತರ್ಜಲ ಅಭಿವೃದ್ಧಿಗಾಗಿ, ಕೃಷಿ ಪ್ರಗತಿದಾಯಕ ಯಶಸ್ಸಿಗೆ ಭೂಮಿಯನ್ನು ಆಳವಾಗಿ ಉಳುಮೆ ಮಾಡಬೇಕು. ಆಳವಾಗಿ ಉಳುಮೆ ಮಾಡುವುದರಿಂದ ಹರಿಯುವ ನೀರು ನಡೆಯುತ್ತದೆ, ನಡೆಯುವ ನೀರು ನಿಲ್ಲುತ್ತದೆ, ನಿಲ್ಲುವ ನೀರು ಅಂತರ್ಜಲ ಅಭಿವೃದ್ಧಿ ಪಡಿಸುತ್ತದೆ. ಈಗಾಗಲೇ ನೀರನ್ನು ದ್ರವರೂಪದ ಚಿನ್ನ ಎಂದು ಕರೆಯಲಾಗಿದೆ. ಮುಂದೊಂದು ದಿನ ಒಂದೊಂದು ಹನಿ ನೀರಿಗೂ ಪರಿತಪಿಸಬೇಕಾಗುತ್ತದೆ. ಹಾಗಾಗಿ ಕೃಷಿ ತಜ್ಞರ ಪ್ರಕಾರ ನೀರು ಶೇಖರಿಸಿ ಅಂತರ್ಜಲ ಅಭಿವೃದ್ಧಿ ಪಡಿಸುವ ಕೆಲಸವಾಗಬೇಕಿದೆ ಎಂದರು.

ಕಾಡು ಉಳಿಸಿ; ಅಭಿವೃದ್ಧಿಯ ಹಾದಿಯಲ್ಲಿ ವಿನಾಶದ ಹಾದಿ ತಲುಪುತ್ತಿದ್ದೇವೆ. ಪ್ರಕೃತಿಯನ್ನು ಕೆಣಕಿ ನಾಶದ ಕಡೆ ನಡೆಯುತ್ತಿದ್ದೇವೆ. ಹಾಗಾಗಿ ಪ್ರಕೃತಿ ರಕ್ಷಿಸಬೇಕು. ಕಾಡನ್ನು ಉಳಿಸಬೇಕು ಎಂದ ಅವರು, ಜೇನು ಸತ್ತು ಹೋದರೆ ತಿನ್ನುವುದಕ್ಕೆ ರೇಷನ್‌ ಇರಲ್ಲ. ಚೈನಾದಲ್ಲಿ ಶೇ. 70ರಷ್ಟು ಜೇನು ಇರುವುದರಿಂದ ಅಲ್ಲಿ ಭತ್ತದ ಇಳುವರಿ ಅಧಿಕವಾಗಿದೆ. ಒಂದು ಬಾರಿ ಒಂದು ಬೆಳೆಯ ಇಳುವರಿ 80 ಕ್ವಿಂಟಾಲ್‌ ಬರುತ್ತದೆ. ಆದರೆ ನಮ್ಮಲ್ಲಿ ಕೇವಲ 18 ಕ್ವಿಂಟಾಲ್‌ ಮಾತ್ರ. ಅಲ್ಲಿನ ಒಂದು ಲೋಡ್‌ ಗೊಬ್ಬರಕ್ಕೆ ನಮ್ಮಲ್ಲಿ 12 ಕ್ವಿಂಟಾಲ್‌ ಲೋಡ್‌ ಗೊಬ್ಬರ ಸಮನಾಗಿದೆ. ರಾಸಾಯನಿಕದಿಂದ ಗೊಬ್ಬರ ಸತ್ತ್ವ ಕಳೆದುಕೊಳ್ಳುತ್ತಿದೆ. ಹಾಗಾಗಿ ಸಾವಯವ ಕೃಷಿ ಅಳವಡಿಸಿಕೊಂಡು ಗೊಬ್ಬರದ ಸತ್ತ್ವ ಹೆಚ್ಚಿಸಬೇಕು ಎಂದು ಕರೆ ನೀಡಿದರು.

ಉಪ್ಪಿನ ಪ್ರಮಾಣ ಕಡಿಮೆ ಇರಲಿ: ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಉಪಯೋಗಿಸಬೇಕು. ಇದರಿಂದ ಹೃದಯಾಘಾತ ಸಂಭವಿಸುವುದು ತಪ್ಪುತ್ತದೆ. ಮುಖ್ಯವಾಗಿ ಬೇಕರಿ ಆಹಾರ ಸೇವಿಸದೇ, ಸಾವಯವ ಪದಾರ್ಥ ಹೆಚ್ಚಾಗಿ ಬಳಕೆ ಮಾಡುವುದು ಉತ್ತಮ ಆರೋಗ್ಯಕ್ಕೆ ತುಂಬ ಉಪಯುಕ್ತವಾದುದು ಎಂದೂ ಸಹ ಶಶಿಕಾಂತ್‌ ತಿಳಿಸಿದರು.

ಬಾಕ್ಸ್‌

ರೈತರೇ ಹುಲ್ಲು ಬೆಳೆಯಲು ಅವಕಾಶ

ಬರದ ಸಂದರ್ಭದಲ್ಲಿ ಲಕ್ಷಾಂತರ ರೂ. ತೆತ್ತು ಜಾನುವಾರುಗಳಿಗಾಗಿ ಹುಲ್ಲನ್ನು ಆಂಧ್ರ, ಕೊಯಮತ್ತೂರು, ಮಹಾರಾಷ್ಟ್ರದಿಂದ ಆಮದು ಮಾಡಿಕೊಳ್ಳುತ್ತೇವೆ. ಇದರಿಂದ ರೈತ ಹಾಗೂ ಸರಕಾರದ ಬೊಕ್ಕಸಕ್ಕೂ ನಷ್ಟ. ಬದಲಿಗೆ ನಮ್ಮಲ್ಲಿಯೇ ನಾನಾ ತಳಿ ಅಭಿವೃದ್ಧಿ ಪಡಿಸಲಾಗಿದೆ. ಆ ತಳಿ ಹುಲ್ಲನ್ನು ಬೆಳೆಯಲು ರೈತರಿಗೆ ಸರಕಾರ ಅವಕಾಶ ಮಾಡಿಕೊಡಬೇಕು. ನೀರಾವರಿ ಅಳವಡಿಸಿಕೊಂಡಿರುವ ರೈತರನ್ನು ತಾಲೂಕುವಾರು, ಹೋಬಳಿವಾರು ಗುರುತಿಸಿ ಅವರಿಗೆ ಸೂಕ್ತ ಮಾಹಿತಿ ಮತ್ತು ಸೌಲಭ್ಯ ನೀಡಿ ಹುಲ್ಲು ಬೆಳೆಯಲು ವ್ಯವಸ್ಥೆ ಕಲ್ಪಿಸಬೇಕು.

- ಡಾ.ಬಿ.ಪಿ.ಶಶಿಕಾಂತ್‌, ಬೆಂಗಳೂರು ಕೃಷಿ ವಿವಿ ನಿವೃತ್ತ ಕೃಷಿ ಹಾಗೂ ಆಹಾರ ತಜ್ಞ .

23ಟಿಎಂಆರ್‌7

ವಿಜಯ ಕರ್ನಾಟಕದಿಂದ ತುಮಕೂರು ವಿವಿಯ ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಗುರುವಾರ ನಡೆದ 'ಸೂಪರ್‌ ಸ್ಟಾರ್‌ ರೈತ' ಸಾಧಕ ರೈತರಿಗೆ ವಿಕ ಪುರಸ್ಕಾರ ಕಾರ್ಯಕ್ರಮದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಕೃಷಿ ಹಾಗೂ ಆಹಾರ ತಜ್ಞ ಡಾ.ಬಿ.ಪಿ.ಶಶಿಕಾಂತ್‌ ಮಾತನಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ