ಆ್ಯಪ್ನಗರ

ಶಾರ್ಟ್‌ ಸರ್ಕೀಟ್‌; ಲಕ್ಷಾಂತರ ರೂ. ಮೌಲ್ಯದ ಜೌಷಧ ಬೆಂಕಿಗಾಹುತಿ

ವಿದ್ಯುತ್‌ ಶಾರ್ಟ್‌ ಸರ್ಕೀಟ್‌ ಸಂಭವಿಸಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಪ್ತ ಮೆಡಿಕಲ್‌ ಮತ್ತು ಜನರಲ್‌ ಸ್ಟೋರ್‌ನಲ್ಲಿದ್ದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಜೌಷಧ ಹಾಗೂ ಜನರ ನಿತ್ಯಬಳಕೆಯ ಮಾರಾಟದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.

Vijaya Karnataka 14 Nov 2018, 5:00 am
ಸಿರಾ: ವಿದ್ಯುತ್‌ ಶಾರ್ಟ್‌ ಸರ್ಕೀಟ್‌ ಸಂಭವಿಸಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಗುಪ್ತ ಮೆಡಿಕಲ್‌ ಮತ್ತು ಜನರಲ್‌ ಸ್ಟೋರ್‌ನಲ್ಲಿದ್ದ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಜೌಷಧ ಹಾಗೂ ಜನರ ನಿತ್ಯಬಳಕೆಯ ಮಾರಾಟದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಸಿರಾ ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದೆ.
Vijaya Karnataka Web short circuit medicines burn
ಶಾರ್ಟ್‌ ಸರ್ಕೀಟ್‌; ಲಕ್ಷಾಂತರ ರೂ. ಮೌಲ್ಯದ ಜೌಷಧ ಬೆಂಕಿಗಾಹುತಿ


ಟಿ.ಎಸ್‌.ಮಂಜುನಾಥ್‌ ಎಂಬುವರಿಗೆ ಸೇರಿದ ಗುಪ್ತ ಮೆಡಿಕಲ್‌ ಮತ್ತು ಜನರಲ್‌ ಸ್ಟೋರ್‌ನಲ್ಲಿ ಹೆಚ್ಚು ಜೌಷಧ ದಾಸ್ತಾನು ಇತ್ತು. 28 ಲಕ್ಷ ರೂ. ಮೌಲ್ಯದ ಜನ ಬಳಕೆ ಜೌಷಧ ಮತ್ತು ಪಶು ಜೌಷಧಗಳು ಇದ್ದವು ಎನ್ನಲಾಗಿದೆ. ಇದಲ್ಲದೆ 1 ಲಕ್ಷ ರೂ. ಮೌಲ್ಯದ ರೆಪ್ರಿಜ್‌ರೇಟರ್‌, 4 ಲಕ್ಷ ರೂ. ಮೌಲ್ಯದಷ್ಟಿದ್ದ ಇನ್ನಿತರೆ ವಸ್ತುಗಳು ಸಹ ಸುಟ್ಟು ಹೋಗಿವೆ. ಕಟ್ಟಡಕ್ಕೂ ಹಾನಿಯಾಗಿದೆ.

ಮಾಲೀಕ ಟಿ.ಎಸ್‌.ಮಂಜುನಾಥ್‌ ಸೋಮವಾರ ರಾತ್ರಿ 9 ಗಂಟೆಗೆ ಅಂಗಡಿ ಮುಚ್ಚಿ ಮನೆಗೆ ಹೋಗಿದ್ದರು. ತಡರಾತ್ರಿ ಬೀಟ್‌ನಲ್ಲಿದ್ದ ಪೊಲೀಸರು ಮೆಡಿಕಲ್‌ ಸ್ಟೋರ್‌ನಿಂದ ದಟ್ಟ ಹೊಗೆ ಬರುತ್ತಿದ್ದನ್ನು ಗಮನಿಸಿ ಮಂಜುನಾಥ್‌ಗೆ ಮೊಬೈಲ್‌ ಮೂಲಕ ಕರೆ ಮಾಡಿ ತಿಳಿಸಿದ್ದಾರೆ. ಜತೆಗೆ ಅಗ್ನಿಶಾಮಕ ವಾಹನಕ್ಕೂ ಕರೆ ಮಾಡಿದ್ದಾರೆ. ತಡರಾತ್ರಿ ಜನ ಇಲ್ಲದ ಕಾರಣ ಬೆಂಕಿ ನಂದಿಸಲೂ ಸಾಧ್ಯವಾಗಿಲ್ಲ. ಇನ್ನು ಅಗ್ನಿ ಶಾಮಕ ವಾಹನ ಬರುವಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆಗೆ ಮೆಡಿಕಲ್‌ನಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟುಹೋಗಿದ್ದವು ಎನ್ನಲಾಗಿದೆ. ಪರಿಶೀಲನೆ ನಡೆಸಿದ ಪಿಎಸ್‌ಐ ನಿರ್ಮಲಾ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ