ಆ್ಯಪ್ನಗರ

ಆಸ್ಪತ್ರೆಯಲ್ಲಿದ್ದುಕೊಂಡೇ ಮಠದ ಕೃಷಿ ಚಟುವಟಿಕೆಗಳ ಮಾಹಿತಿ ಪಡೆದ ಸಿದ್ಧಗಂಗಾ ಶ್ರೀ

ಹಿಂದಿಗಿಂತಲೂ ಹೆಚ್ಚು ಲವಲವಿಕೆಯಲ್ಲಿ ಶ್ರೀ: ಶಿಷ್ಯನ ಹಣೆಗೆ ತಿಲಕವಿಟ್ಟು ಆಶೀರ್ವಾದ ಮಾಡಿದ ಸಿದ್ದಗಂಗಾ ಶ್ರೀಗಳು. ಹಿರಿಯ ಶ್ರೀಗಳು ಗುಣಮುಖರಾಗಿದ್ದಾರೆ. ಬೆಳಗ್ಗೆ ಇಷ್ಟಲಿಂಗ ಪೂಜೆ ನೆರವೇರಿಸಿದ ಅವರು ಐಸಿಯೂನಲ್ಲೆ ಕೂತು ಜನ್ಮ ಭೂಮಿಯನ್ನೂ ನೆನೆಯುತ್ತಿದ್ದಾರೆ.

Vijaya Karnataka Web 12 Dec 2018, 9:19 pm
ತುಮಕೂರು: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮಿಗಳ ಆರೋಗ್ಯ ಸುಧಾರಿಸಿದೆ.
Vijaya Karnataka Web ಸಿದ್ದಗಂಗಾ ಶ್ರೀ
ಸಿದ್ದಗಂಗಾ ಶ್ರೀ


ಶ್ರೀಗಳು ದ್ರವರೂಪದ ಆಹಾರ ಸೇವಿಸುತ್ತಿದ್ದು ಎಂದಿಗಿಂತ ಬುಧವಾರ ಹೆಚ್ಚು ಲವಲವಿಕೆಯಿಂದಿದ್ದರು. ಕಿರಿಯ ಶ್ರೀ ಸಿದ್ದಲಿಂಗ ಸ್ವಾಮಿಗಳ ಜೊತೆ ಹೆಚ್ಚು ಮಾತನಾಡಿದ ಅವರು, ಜನನಿ ಜನ್ಮ ಭೂಮಿಷ್ಚ ಸ್ವರ್ಗದಾಪಿ ಧರಿಯಸಿ ಎನ್ನುವ ನಾಣ್ಣುಡಿಯನ್ನು ಸ್ಮರಿಸಿದ್ದಾರೆ‌.

ಡಿ.7 ರಂದು ಚೆನ್ನೈ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳಿಗೆ ಡಿ.8 ರಂದು ಡಾ.ರೇಲಾ ನೇತೃತ್ವದಲ್ಲಿ ಯಶಸ್ವಿ ಪಿತ್ತಕೋಶದ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಚಿಕಿತ್ಸೆ ನಡೆದ ಒಂದೇ ಗಂಟೆಯಲ್ಲಿ ಅನಸ್ತೇಶಿಯಾದಿಂದ ಹೊರಬಂದ ಶ್ರೀಗಳು ವೈದ್ಯಲೋಕದ ಅಚ್ಚರಿಗೆ ಕಾರಣವಾಗಿದ್ದರು. ಅಂದಿನಿಂದ ಇಂದಿನವರೆಗೂ ಲಿವರ್ ಯುನಿಟ್ ಕೇರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರೀಗಳು ಬುಧವಾರ ದ್ರವರೂಪದ ಅಹಾರ ಸ್ವೀಕರಿಸಿ ಐಸಿಯೂನಲ್ಲೇ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ.

ಮಠದ ಕೃಷಿ ಕೆಲಸದ ಮಾಹಿತಿ ಕೇಳಿದ ಶ್ರೀಗಳು ಐಸಿಯೂನಲ್ಲಿದ್ದರೂ ಹಿರಿಯ ಶ್ರೀಗಳು, ಮಠದ ಕೃಷಿ ಕೆಲಸಗಳ ಬಗ್ಗೆ ಕಿರಿಯ ಶ್ರೀಗಳಿಂದ ಮಾಹಿತಿ ಪಡೆದುಕೊಂಡರು.

ಈ ಕುರಿತು ಚೆನ್ನೈನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಕಿರಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಹಿರಿಯ ಶ್ರೀಗಳು ಗುಣಮುಖರಾಗಿದ್ದಾರೆ. ಬೆಳಗ್ಗೆ ಇಷ್ಟಲಿಂಗ ಪೂಜೆ ನೆರವೇರಿಸಿದ ಅವರು ಐಸಿಯೂನಲ್ಲೆ ಕೂತು ಜನ್ಮ ಭೂಮಿಯನ್ನೂ ನೆನೆಯುತ್ತಿದ್ದಾರೆ. ಎಳನೀರು ಮತ್ತು ಹಣ್ಣಿನ ಜ್ಯೂಸ್ ಸೇವಿಸಿರುವ ಶ್ರೀಗಳಿಗೆ ಸ್ವಲ್ಪಪ್ರಮಾಣದಲ್ಲಿ ವಾಯು ವಿಹಾರ ಮಾಡಿಸಲಾಗಿದೆ.

ಇನ್ನು ಎಂದಿನಂತೆ ಮಠ ಮತ್ತು ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ. ಮಠದಲ್ಲಿ ರಾಗಿ ಕಣದ ಕೆಲಸ ಆಯಿತೇ? ಕೆಲಸ ಹೇಗಿದೆ ಎಂದು ಕೇಳಿದ್ದಾರೆ ಎಂದು ಹಿರಿಯ ಶ್ರೀಗಳೊಂದಿಗಿನ ಮಾತುಕತೆಯ ವಿವರ ನೀಡಿದರು.

ಶಿಷ್ಯನ ಹಣೆಗೆ ಭಸ್ಮ ತಿಲಕ ಇಟ್ಟ ಶ್ರೀ ಬುಧವಾರ ಮಧ್ಯಾಹ್ನ ಆಸ್ಪತ್ರೆಯಲ್ಲಿ ಶ್ರೀಗಳಿಂದ ಸ್ವಾರಸ್ಯಕರ ಘಟನೆ ನಡೆದಿದೆ. ಶಿವಪೂಜೆ‌ ನೆರವೇರಿಸಿದ ನಂತರ ಅವರ ಎದುರು ನಿಂತಿದ್ದ ಶಿಷ್ಯ ಹಾಗೂ ಚುಂಚನಹಳ್ಳಿ ಶ್ರೀ ಚನ್ನಬಸವಸ್ವಾಮೀಜಿ ಹಣೆಗೆ ವಿಭೂತಿ‌ ಧರಿಸಿರಲಿಲ್ಲದಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅವರನ್ನು ಹತ್ತಿರಕ್ಕೆ ಕರೆದ ಸಿದ್ಧಗಂಗಾ ಶ್ರೀಗಳು ಸ್ವತಃ ತಾವೇ ಕೈಯಾರೆ ಶಿಷ್ಯನ ಹಣೆಗೆ ತಿಲಕವಿಟ್ಟು ಶಿವಪೂಜೆಯ ಮಾರ್ಗದರ್ಶನ ಮಾಡಿದ್ದಾರೆ.

ಸ್ವಾಮೀಜಿಗಳ ಭೇಟಿ

ಸಂಜೆ ಆಸ್ಪತ್ರೆಗೆ ಆಗಮಿಸಿದ ಬೆಳಗಾವಿಯ ಹುಕ್ಕೇರಿ ಮಠದ ಶ್ರೀ ಚಂದ್ರಶೇಖರ ಸ್ವಾಮೀಜಿ ಹಾಗೂ ಶಿವಗಂಗೆಯ ಮಲಯ ಶ್ರೀ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ, ಸಿದ್ಧಗಂಗಾ ಶ್ರೀಗಳ ಯೋಗಕ್ಷೇಮ ವಿಚಾರಿಸಿದರು.

ಶ್ರೀಗಳಿಗೆ ಮೂರು ಕಾಲಗಳಲ್ಲಿಯೂ ಶಿವಪೂಜೆಗೆ ಅವಕಾಶ ಮಾಡಿಕೊಟ್ಟಿರುವ ವೈದ್ಯರು ರಾತ್ರಿ ಅಥವಾ ಗುರುವಾರ ವಿಶೇಷ ವಾರ್ಡ್ ಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.
ಶ್ರೀ ಚಂದ್ರಶೇಖರ ಸ್ವಾಮೀಜಿ, ಹುಕ್ಕೇರಿ ಮಠ, ಬೆಳಗಾವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ