ಆ್ಯಪ್ನಗರ

ತುಮಕೂರು ರಸ್ತೆಯಲ್ಲಿ ಸಿದ್ಧಗಂಗಾ ಶ್ರೀ ಪುತ್ಥಳಿ ಸ್ಥಾಪನೆ

ಇತ್ತೀಚಿಗೆ ಶಿವೈಕ್ಯರಾದ ಸಿದ್ಧಗಂಗಾ ಮಠಾಧೀಶ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರನ್ನು ತುಮಕೂರು ರಸ್ತೆಗೆ ನಾಮಕರಣ ಮಾಡುವ ಜತೆಗೆ ಆ ರಸ್ತೆಯ ಸೂಕ್ತ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸುವ ತೀರ್ಮಾನವನ್ನು ಸೋಮವಾರ ಮಂಡಿಸಲಾದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ-ಬಿಬಿಎಂಪಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

Vijaya Karnataka 19 Feb 2019, 3:02 pm
ಬೆಂಗಳೂರು: ಇತ್ತೀಚಿಗೆ ಶಿವೈಕ್ಯರಾದ ಸಿದ್ಧಗಂಗಾ ಮಠಾಧೀಶ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರನ್ನು ತುಮಕೂರು ರಸ್ತೆಗೆ ನಾಮಕರಣ ಮಾಡುವ ಜತೆಗೆ ಆ ರಸ್ತೆಯ ಸೂಕ್ತ ಸ್ಥಳದಲ್ಲಿ ಪುತ್ಥಳಿ ಸ್ಥಾಪಿಸುವ ತೀರ್ಮಾನವನ್ನು ಸೋಮವಾರ ಮಂಡಿಸಲಾದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ-ಬಿಬಿಎಂಪಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
Vijaya Karnataka Web siddaganga seer statue in tumkur road bbmp decides in budget
ತುಮಕೂರು ರಸ್ತೆಯಲ್ಲಿ ಸಿದ್ಧಗಂಗಾ ಶ್ರೀ ಪುತ್ಥಳಿ ಸ್ಥಾಪನೆ


ಯಶವಂತಪುರ ವೃತ್ತದಿಂದ ಕೆನ್ನ ಮೆಟಲ್‌ ಕಾರ್ಖಾನೆ ಬಳಿ ಕೊನೆವರೆಗಿನ ರಸ್ತೆಗೆ ಸಿದ್ಧಗಂಗಾ ಶ್ರೀಯವರ ಹೆಸರು ಇಡಲಾಗುತ್ತದೆ. ಅಲ್ಲದೆ ಪುತ್ಥಳಿ ಸ್ಥಾಪನೆಗೆ 5 ಕೋಟಿ ರೂ. ಅನುದಾನ ಒದಗಿಸಲಾಗುತ್ತದೆ.

ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆಗಳಿಗೆ ಪ್ರತಿ ವರ್ಷ ಸಿದ್ಧಗಂಗಾ ಶ್ರೀಗಳ ಹೆಸರಿನಲ್ಲಿ ಹೊಸದಾಗಿ ಪ್ರಶಸ್ತಿ ನೀಡಲಾಗುತ್ತದೆ. ಬಡ ವರ್ಗದ ವಿದ್ಯಾರ್ಥಿಗಳು, ವಿಕಲಚೇತನ ಮಕ್ಕಳು, ಬುದ್ಧಿಮಾಂದ್ಯ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಹಾಗೂ ಸಮಾಜ ಸೇವೆಯಲ್ಲಿ ಶಿಕ್ಷಣಕ್ಕಾಗಿ ಉನ್ನತ ಮಟ್ಟದ ಸೇವೆ ಒದಗಿಸುವ ಶಿಕ್ಷಣ ಸಂಸ್ಥೆ ಹಾಗೂ ಸಂಘಗಳಿಗೆ ನಗದು ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಇದಕ್ಕಾಗಿ 2019-20ನೇ ಸಾಲಿನಲ್ಲಿ 25 ಲಕ್ಷ ರೂ. ಅನುದಾನ ಒದಗಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ