ಆ್ಯಪ್ನಗರ

ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ತೊಂದರೆಯಿಲ್ಲ: ಡಾ. ಪರಮೇಶ್‌

ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಗಳು ಕಾಣಿಸ್ತಿಲ್ಲ, ಪ್ರತಿನಿತ್ಯದಂತೆ ಮಾನಿಟರಿಂಗ್ ಮಾಡಿದೆವು. ಬೆಳಗ್ಗೆ ರಕ್ತ‌ ತಪಾಸಣೆ ಮಾಡಿದ್ದೆವು ಎಂದು ತಿಳಿಸಿದ್ದಾರೆ.

Vijaya Karnataka Web 5 Jan 2019, 9:02 pm
ತುಮಕೂರು: ಸಿದ್ದಗಂಗಾ ಆಸ್ಪತ್ರೆಯಿಂದ ಶಿವಕುಮಾರ ಶ್ರೀಗಳ ಆರೋಗ್ಯದ ಸ್ಥಿತಿಗತಿ ಕುರಿತು ಶನಿವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಶ್ರೀಗಳ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ ಎಂದಿದ್ದಾರೆ.
Vijaya Karnataka Web shree shree


ಶ್ರೀಗಳ ಆಪ್ತ ವೈದ್ಯ ಡಾ. ಪರಮೇಶ್ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದು, ಶ್ರೀಗಳ ಆರೋಗ್ಯದಲ್ಲಿ ಯಾವುದೇ ರೀತಿಯ ತೊಂದರೆಗಳು ಕಾಣಿಸ್ತಿಲ್ಲ, ಪ್ರತಿನಿತ್ಯದಂತೆ ಮಾನಿಟರಿಂಗ್ ಮಾಡಿದೆವು. ಬೆಳಗ್ಗೆ ರಕ್ತ‌ ತಪಾಸಣೆ ಮಾಡಿದ್ದೆವು ಎಂದು ತಿಳಿಸಿದ್ದಾರೆ.

ಬಿಪಿ, ಆಕ್ಸಿಜನ್ ರೆಸ್ಪಿರೇಟರಿ, ಕಿಡ್ನಿ ನಾರ್ಮಲ್ ಆಗಿವೆ, ಶ್ವಾಸಕೋಶದಲ್ಲಿ ಸಂಪುರ್ಣವಾಗಿ ಸೊಂಕು ಕಡಿಮೆಯಾಗಿದೆ ಎಂದು ನಮಗನಿಸ್ತಿಲ್ಲ. ಸ್ಕ್ಯಾನ್ ಮಾಡಿ ಎರಡೂ ಲಂಗ್ಸ್‌ನಲ್ಲೂ ಫ್ಲೂರಲ್ ಟ್ಯಾಪ್ ಮಾಡಿ ನೀರನ್ನ ತೆಗೆದಿದ್ದೇವೆ ಎಂದು ವೈದ್ಯರು ಹೇಳಿದ್ದಾರೆ.

ಇನ್ನೂ ಎರಡು ವಾರಗಳಾದ್ರೂ ಶ್ರಿಗಳಿಗೆ ಚಿಕಿತ್ಸೆ ಬೇಕಾಗುತ್ತದೆ. ಶುಕ್ರವಾರಕ್ಕಿಂತ ಶನಿವಾರ ಆಲ್ಬಮಿನ್ ಪ್ರೋಟಿನ್ ಇಂಜೆಕ್ಷನ್ ಜಾಸ್ತಿ ನೀಡಿದ್ದೇವೆ, ಶುಕ್ರವಾರ 2.3 ಇದ್ದದ್ದು ಶನಿವಾರ 2.6 ಆಗಿದೆ. 3ಕ್ಕಿಂತ ಜಾಸ್ತಿ ಬಂದರೆ ಬೇಗ ಗುಣಮುಖರಾಗ್ತಾರೆ. ಕಾಳುಗಳನ್ನ ಬೇಯಿಸಿ ಆ ನೀರಿಗೆ ಕಾಳು ಮಿಕ್ಸ್ ಮಾಡಿ ಕೋಡಲಾಗುತ್ತಿದೆ. ಪಪ್ಪಾಯಿ, ಬಾಳೆ ಹಣ್ಣಗಳನ್ನು ದ್ರವ ರೂಪದಲ್ಲಿ ಶ್ರೀಗಳಿಗೆ ನೀಡಲಾಗ್ತಿದೆ ಎಂದು ಡಾ, ಪರಮೇಶ್ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ