ತುಮಕೂರು:
ರಾಜ್ಯದ ಜನತೆ ಎದುರು ನೋಡುತ್ತಿದ್ದ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರದಲ್ಲಿ ಚೆನ್ನೈ ಆಸ್ಪತ್ರೆ ವೈದ್ಯರು ಸಿಹಿ ಸುದ್ದಿ ನೀಡಿದ್ದು, ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮಿಗಳಿಗೆ ಯಶಸ್ವಿ ಬೈಪಾಸ್ ಸರ್ಜರಿ ಮಾಡಲಾಗಿದೆ.
ಶುಕ್ರವಾರ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು ಶನಿವಾರ ಮಧ್ಯಾಹ್ನದ ವೇಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ಇದೀಗ ಕ್ಷೇಮವಾಗಿದ್ದಾರೆ. ವೈದ್ಯ ಡಾ.ಮೊಹಮ್ಮದ್ ರೇಲಾ ನೇತೃತ್ವದ ತಂಡ ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ.
ಮಠದಲ್ಲಿ ಸಂತಸದ ವಾತಾವರಣ: ಶ್ರೀಗಳ ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ಬೆನ್ನಲ್ಲೇ ಇತ್ತ ಸಿದ್ಧಗಂಗಾ ಮಠದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಆದರೆ ಪ್ರತಿ ದಿನ ಭಕ್ತರಿಂದ ತುಂಬಿ ತುಳುಕುತ್ತಿದ್ದ ಮಠ ಶನಿವಾರ ಭಕ್ತರಿಲ್ಲದೇ ಬಿಕೋ ಎನ್ನುತ್ತಿತ್ತು. ಶ್ರೀಗಳ ಅನಾರೋಗ್ಯದ ಮಾಹಿತಿ ಇಲ್ಲದೆ ಬಂದಿದ್ದ ಕೆಲವು ಭಕ್ತರು ಶ್ರೀಗಳ ದರ್ಶನವಾಗದೇ ನಿರಾಸೆಯಿಂದ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು.
ಬಿಕೋ ಎನ್ನುತ್ತಿರುವ ಮಠ: ಶನಿವಾರ ಹಾಗೂ ಭಾನುವಾರ ಬಂತೆಂದರೆ ಸಾಕು ಶ್ರೀಮಠದಲ್ಲಿ ಕಾಲಿಡಲು ಕೂಡ ಜಾಗ ಇರುತ್ತಿರಲಿಲ್ಲ. ಭಕ್ತರು ತುಂಬಿ ತುಳುಕುತ್ತಿದ್ದರು. ಬೆಳಗ್ಗೆ 11 ಗಂಟೆ ಹಾಗೂ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಶ್ರೀಗಳು ದರ್ಶನ ನೀಡಲು ಕೂರುತ್ತಿದ್ದ ಪೀಠದ ಮುಂದೆ ಭಕ್ತರು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಶನಿವಾರ ಇಡೀ ಮಠ ಭಕ್ತರಿಲ್ಲದೇ ಬಣಗುಡುತ್ತಿತ್ತು. ಬಹುತೇಕ ಭಕ್ತರಿಗೆ ಶ್ರೀಗಳು ಮಠದಲ್ಲಿಲ್ಲ ಎಂಬ ವಿಚಾರ ತಿಳಿದಿದೆ. ಹೀಗಾಗಿಯೇ ಮಠದ ಕಡೆಗೆ ಬರುವ ಭಕ್ತರ ಸಂಖ್ಯೆ ಕೂಡ ಕಡಿಮೆಯಾಗಿದೆ.
ಭಕ್ತರು ಸಹಕರಿಸಿ:
ಚೆನ್ನೈ ಆಸ್ಪತ್ರೆಯಿಂದ ಶ್ರೀಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿರುವ ವಿಚಾರ ಕೇಳಿ ಇಡೀ ಸಿದ್ಧಗಂಗಾಮಠದಲ್ಲಿ ಹರುಷದ ವಾತಾವರಣ ತುಂಬಿತುಳುಕುತ್ತಿದೆ. ಶ್ರೀಗಳು ಇನ್ನೂ 8ರಿಂದ 10 ದಿನ ಕಾಲ ಭಕ್ತರಿಗೆ ದರ್ಶನ ನೀಡಲು ಬರುವುದಿಲ್ಲ. ಅಲ್ಲಿವರೆಗೂ ಭಕ್ತರು ಸಹಕರಿಸಬೇಕು ಎಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಅವರು ಮನವಿ ಮಾಡಿದ್ದಾರೆ.
ಶ್ರೀಗಳ ದೇಹದಲ್ಲಿ ಈಗಾಗಲೇ 11 ಸ್ಟೆಂಟ್ಗಳನ್ನು ಅಳವಡಿಸಿದ್ದು, ಮುಂದೆ ಹೊಸ ಸ್ಟೆಂಟ್ಗಳನ್ನ ಅಳವಡಿಸುವುದಾಗಲೀ ಅಥವಾ ಈಗಿರುವ ಸ್ಟೆಂಟ್ಗಳನ್ನು ತೆಗೆಯುವುದಾಗಲಿ ಮಾಡುವುದು ಕಷ್ಟಕರ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಆದರೆ ಸ್ಟೆಂಟ್ನ ಕಾರ್ಯವೈಖರಿ ಕ್ಷೀಣಿಸುತ್ತಾ ಬಂದಾಗಲೆಲ್ಲಾ ಶ್ರೀಗಳ ಪಿತ್ತಕೋಶದಲ್ಲಿ ಸೋಂಕು ಉಂಟಾಗುತ್ತಿತ್ತು. ಆ ಹಿನ್ನೆಲೆಯಲ್ಲೇ ಚೆನ್ನೈನ ಲಿವರ್ ತಜ್ಞ ಡಾ.ಮೊಹಮ್ಮದ್ ರೇಲಾ ಅವರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಗಳಿಗೆ ಸೋಂಕು ಉಂಟಾಗದಂತೆ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಸಮಸ್ಯೆಯನ್ನು ದೂರಾಗಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಶ್ರೀಗಳನ್ನು ವಿಶೇಷ ಐಸಿಯು ಕೊಠಡಿಗೆ ಶಿಫ್ಟ್ ಮಾಡಲಾಗಿದೆ. ಶ್ರೀಗಳು ಸಂಪೂರ್ಣ ಚೇತರಿಕೆ ಕಂಡು ವಿಶ್ರಾಂತಿ ಪಡೆಯುತ್ತಿದ್ದಾರೆ.
- ಡಾ.ರವೀಂದ್ರ, ಶ್ರೀಗಳಿಗೆ ಈ ಹಿಂದೆ ಚಿಕಿತ್ಸೆ ನೀಡುತ್ತಿದ್ದ ಬಿಜಿಎಸ್ ವೈದ್ಯ (ಚೆನ್ನೈನಲ್ಲಿ ಹೇಳಿದ್ದು)
ರಾಜ್ಯದ ಜನತೆ ಎದುರು ನೋಡುತ್ತಿದ್ದ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರದಲ್ಲಿ ಚೆನ್ನೈ ಆಸ್ಪತ್ರೆ ವೈದ್ಯರು ಸಿಹಿ ಸುದ್ದಿ ನೀಡಿದ್ದು, ಸಿದ್ಧಗಂಗಾ ಮಠದ ಹಿರಿಯ ಶ್ರೀ ಡಾ.ಶಿವಕುಮಾರ ಸ್ವಾಮಿಗಳಿಗೆ ಯಶಸ್ವಿ ಬೈಪಾಸ್ ಸರ್ಜರಿ ಮಾಡಲಾಗಿದೆ.
ಶುಕ್ರವಾರ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು ಶನಿವಾರ ಮಧ್ಯಾಹ್ನದ ವೇಳೆಗೆ ಯಶಸ್ವಿ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ಇದೀಗ ಕ್ಷೇಮವಾಗಿದ್ದಾರೆ. ವೈದ್ಯ ಡಾ.ಮೊಹಮ್ಮದ್ ರೇಲಾ ನೇತೃತ್ವದ ತಂಡ ಸತತ ನಾಲ್ಕು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ.
ಮಠದಲ್ಲಿ ಸಂತಸದ ವಾತಾವರಣ: ಶ್ರೀಗಳ ಶಸ್ತ್ರ ಚಿಕಿತ್ಸೆ ಯಶಸ್ವಿಯಾದ ಬೆನ್ನಲ್ಲೇ ಇತ್ತ ಸಿದ್ಧಗಂಗಾ ಮಠದಲ್ಲಿ ಸಂತಸದ ವಾತಾವರಣ ಮನೆ ಮಾಡಿದೆ. ಆದರೆ ಪ್ರತಿ ದಿನ ಭಕ್ತರಿಂದ ತುಂಬಿ ತುಳುಕುತ್ತಿದ್ದ ಮಠ ಶನಿವಾರ ಭಕ್ತರಿಲ್ಲದೇ ಬಿಕೋ ಎನ್ನುತ್ತಿತ್ತು. ಶ್ರೀಗಳ ಅನಾರೋಗ್ಯದ ಮಾಹಿತಿ ಇಲ್ಲದೆ ಬಂದಿದ್ದ ಕೆಲವು ಭಕ್ತರು ಶ್ರೀಗಳ ದರ್ಶನವಾಗದೇ ನಿರಾಸೆಯಿಂದ ತೆರಳುತ್ತಿದ್ದ ದೃಶ್ಯ ಕಂಡು ಬಂದಿತು.
ಬಿಕೋ ಎನ್ನುತ್ತಿರುವ ಮಠ: ಶನಿವಾರ ಹಾಗೂ ಭಾನುವಾರ ಬಂತೆಂದರೆ ಸಾಕು ಶ್ರೀಮಠದಲ್ಲಿ ಕಾಲಿಡಲು ಕೂಡ ಜಾಗ ಇರುತ್ತಿರಲಿಲ್ಲ. ಭಕ್ತರು ತುಂಬಿ ತುಳುಕುತ್ತಿದ್ದರು. ಬೆಳಗ್ಗೆ 11 ಗಂಟೆ ಹಾಗೂ ಮಧ್ಯಾಹ್ನ ಮೂರು ಗಂಟೆ ವೇಳೆಗೆ ಶ್ರೀಗಳು ದರ್ಶನ ನೀಡಲು ಕೂರುತ್ತಿದ್ದ ಪೀಠದ ಮುಂದೆ ಭಕ್ತರು ಸಾಲುಗಟ್ಟಿ ನಿಲ್ಲುತ್ತಿದ್ದರು. ಆದರೆ ಶನಿವಾರ ಇಡೀ ಮಠ ಭಕ್ತರಿಲ್ಲದೇ ಬಣಗುಡುತ್ತಿತ್ತು. ಬಹುತೇಕ ಭಕ್ತರಿಗೆ ಶ್ರೀಗಳು ಮಠದಲ್ಲಿಲ್ಲ ಎಂಬ ವಿಚಾರ ತಿಳಿದಿದೆ. ಹೀಗಾಗಿಯೇ ಮಠದ ಕಡೆಗೆ ಬರುವ ಭಕ್ತರ ಸಂಖ್ಯೆ ಕೂಡ ಕಡಿಮೆಯಾಗಿದೆ.
ಭಕ್ತರು ಸಹಕರಿಸಿ:
ಚೆನ್ನೈ ಆಸ್ಪತ್ರೆಯಿಂದ ಶ್ರೀಗಳಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿರುವ ವಿಚಾರ ಕೇಳಿ ಇಡೀ ಸಿದ್ಧಗಂಗಾಮಠದಲ್ಲಿ ಹರುಷದ ವಾತಾವರಣ ತುಂಬಿತುಳುಕುತ್ತಿದೆ. ಶ್ರೀಗಳು ಇನ್ನೂ 8ರಿಂದ 10 ದಿನ ಕಾಲ ಭಕ್ತರಿಗೆ ದರ್ಶನ ನೀಡಲು ಬರುವುದಿಲ್ಲ. ಅಲ್ಲಿವರೆಗೂ ಭಕ್ತರು ಸಹಕರಿಸಬೇಕು ಎಂದು ಸಿದ್ಧಗಂಗಾ ಮಠದ ಆಡಳಿತಾಧಿಕಾರಿ ವಿಶ್ವನಾಥಯ್ಯ ಅವರು ಮನವಿ ಮಾಡಿದ್ದಾರೆ.
ಶ್ರೀಗಳ ದೇಹದಲ್ಲಿ ಈಗಾಗಲೇ 11 ಸ್ಟೆಂಟ್ಗಳನ್ನು ಅಳವಡಿಸಿದ್ದು, ಮುಂದೆ ಹೊಸ ಸ್ಟೆಂಟ್ಗಳನ್ನ ಅಳವಡಿಸುವುದಾಗಲೀ ಅಥವಾ ಈಗಿರುವ ಸ್ಟೆಂಟ್ಗಳನ್ನು ತೆಗೆಯುವುದಾಗಲಿ ಮಾಡುವುದು ಕಷ್ಟಕರ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದರು. ಆದರೆ ಸ್ಟೆಂಟ್ನ ಕಾರ್ಯವೈಖರಿ ಕ್ಷೀಣಿಸುತ್ತಾ ಬಂದಾಗಲೆಲ್ಲಾ ಶ್ರೀಗಳ ಪಿತ್ತಕೋಶದಲ್ಲಿ ಸೋಂಕು ಉಂಟಾಗುತ್ತಿತ್ತು. ಆ ಹಿನ್ನೆಲೆಯಲ್ಲೇ ಚೆನ್ನೈನ ಲಿವರ್ ತಜ್ಞ ಡಾ.ಮೊಹಮ್ಮದ್ ರೇಲಾ ಅವರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶ್ರೀಗಳಿಗೆ ಸೋಂಕು ಉಂಟಾಗದಂತೆ ನಾಲ್ಕು ಗಂಟೆಗಳ ಶಸ್ತ್ರ ಚಿಕಿತ್ಸೆ ನಡೆಸುವ ಮೂಲಕ ಸಮಸ್ಯೆಯನ್ನು ದೂರಾಗಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಬಳಿಕ ಶ್ರೀಗಳನ್ನು ವಿಶೇಷ ಐಸಿಯು ಕೊಠಡಿಗೆ ಶಿಫ್ಟ್ ಮಾಡಲಾಗಿದೆ. ಶ್ರೀಗಳು ಸಂಪೂರ್ಣ ಚೇತರಿಕೆ ಕಂಡು ವಿಶ್ರಾಂತಿ ಪಡೆಯುತ್ತಿದ್ದಾರೆ.
- ಡಾ.ರವೀಂದ್ರ, ಶ್ರೀಗಳಿಗೆ ಈ ಹಿಂದೆ ಚಿಕಿತ್ಸೆ ನೀಡುತ್ತಿದ್ದ ಬಿಜಿಎಸ್ ವೈದ್ಯ (ಚೆನ್ನೈನಲ್ಲಿ ಹೇಳಿದ್ದು)