ಆ್ಯಪ್ನಗರ

ಖಾಸಗಿ ಕಾನ್ವೆಂಟ್‌ ಶಾಲೆಯನ್ನೂ ಮೀರಿಸುತ್ತದೆ ಈ ಅಂಗನವಾಡಿ ಕೇಂದ್ರ

ನಾವು ಮಾಡುವ ಕೆಲಸದಲ್ಲಿ ಭಾವನಾತ್ಮಕ ಒಡನಾಡವಿಟ್ಟುಕೊಂಡರೆ, ಅದರಿಂದ ಉತ್ತಮ ಫಲ ಸಿಗುವುದರಲ್ಲಿ ಅನುಮಾನವಿಲ್ಲ ಎಂಬುದನ್ನು ಸಿರಾ ತಾಲೂಕಿನ ಗೌಡಗೆರೆ ಹೋಬಳಿಯ ದೇವರಹಳ್ಳಿಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ತೋರಿಸಿಕೊಟ್ಟಿದ್ದಾರೆ.

Vijaya Karnataka 14 Mar 2019, 5:00 am
ಸಿರಾ: ನಾವು ಮಾಡುವ ಕೆಲಸದಲ್ಲಿ ಭಾವನಾತ್ಮಕ ಒಡನಾಡವಿಟ್ಟುಕೊಂಡರೆ, ಅದರಿಂದ ಉತ್ತಮ ಫಲ ಸಿಗುವುದರಲ್ಲಿ ಅನುಮಾನವಿಲ್ಲ ಎಂಬುದನ್ನು ಸಿರಾ ತಾಲೂಕಿನ ಗೌಡಗೆರೆ ಹೋಬಳಿಯ ದೇವರಹಳ್ಳಿಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ತೋರಿಸಿಕೊಟ್ಟಿದ್ದಾರೆ.
Vijaya Karnataka Web sira devarahalli anganavadi centre performing well
ಖಾಸಗಿ ಕಾನ್ವೆಂಟ್‌ ಶಾಲೆಯನ್ನೂ ಮೀರಿಸುತ್ತದೆ ಈ ಅಂಗನವಾಡಿ ಕೇಂದ್ರ


ಇಚ್ಛಾಶಕ್ತಿಯಿದ್ದರೆ ಇದು ಎಲ್ಲರಿಗೂ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಈ ಅಂಗನವಾಡಿ ಕಾರ್ಯಕರ್ತೆ ಸಿ.ರತ್ಮಮ್ಮ ಸಾಕ್ಷಿಯಾಗಿದ್ದು, ಆಸಕ್ತಿ ಮತ್ತು ಸಮಾಜದ ಸಹಭಾಗಿತ್ವದೊಂದಿಗೆ ನಿಷ್ಠೆಯಿಂದ ಕರ್ತವ್ಯ ಮಾಡಿ ಪ್ರತಿಷ್ಠಿತ ಕಾನ್ವೆಂಟ್‌ಗಿಂತ ಅಂಗನವಾಡಿ ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಮಾಡಿದ್ದಾರೆ. ಇದಕ್ಕೆ ತಕ್ಕಂತೆ ಮಕ್ಕಳ ಪೋಷಕರು ಸಹಕಾರ ನೀಡಿದ್ದು, ಕಾನ್ವೆಂಟ್‌ ಮಾದರಿಯಲ್ಲಿ ನಮ್ಮ ಮಕ್ಕಳು ಇರಬೇಕೆಂಬ ಉದ್ದೇಶದಿಂದ ಮಕ್ಕಳಿಗೆ ಪಾಲಕರು ಶೂ, ಬೆಲ್ಟ್‌, ಸಮವಸ್ತ್ರ, ಪುಟಾಣಿ ಚೇರ್‌ ಕೊಟ್ಟು ಅಭಿವೃದ್ಧಿಪಡಿಸಲು ಸಹಕಾರ ನೀಡುತ್ತಿರುವುದು ಗ್ರಾಮೀಣ ಪ್ರದೇಶದಲ್ಲಿನ ಪೋಷಕರ ಶಿಕ್ಷ ಣಾಸಕ್ತಿಗೆ ಸಾಕ್ಷೀಕರಿಸುತ್ತದೆ.

ಸ್ತ್ರೀಶಕ್ತಿ ಬಲವರ್ಧನೆ: ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಮೂಲಕ 2000ನೇ ಸಾಲಿನಲ್ಲಿ ದೇವರಹಳ್ಳಿಯಲ್ಲಿ 8 ಸ್ತ್ರೀಶಕ್ತಿ ಸ್ವಸಹಾಯ ಸಂಘಗಳನ್ನು ಸ್ಥಾಪಿಸಿದ ಅಂಗನವಾಡಿ ಕಾರ್ಯಕರ್ತೆ ಸಿ.ರತ್ನಮ್ಮ, ಹಲವಾರು ಮಹಿಳಾ ಪ್ರಧಾನ ಕುಟುಂಬಗಳ ಆರ್ಥಿಕ ಸ್ವಾವಲಂಬನೆಗೆ ಪ್ರೇರಣೆಯಾಗಿದ್ದು, ಇಂದಿಗೂ ಸಹ ಈ ಸಂಘಗಳು ಯಶಸ್ವಿಯಾಗಿ ನಡೆಯುವಂತೆ ಮಾಡಿದ್ದಾರೆ. ಸ್ತ್ರೀಶಕ್ತಿಯಿಂದ ಆರ್ಥಿಕವಾಗಿ ಸದೃಢಗೊಂಡಿರುವ ಸದಸ್ಯರು ಹೈನುಗಾರಿಕೆ, ಸಣ್ಣ ಕೈಗಾರಿಕೆಗಳಿಂದ ಪ್ರಗತಿಯತ್ತ ಮುನ್ನಡೆಯುತ್ತಿರುವುದು ಈ ಕಾರ್ಯಕರ್ತೆಯ ಪ್ರಾಮಾಣಿಕ ಸೇವೆಗೆ ಸಂದ ಗೌರವ.

ಸಮಾಜದ, ಸಹಭಾಗಿತ್ವ: ಅಂಗನವಾಡಿಯಲ್ಲಿ 3-6 ವರ್ಷದವರೆಗಿನ 27 ಮಕ್ಕಳಿದ್ದು, ಶೈಕ್ಷ ಣಿಕ ಚಟುವಟಿಕೆ ಕನ್ನಡದ ಜತೆಗೆ ಆಂಗ್ಲ ಮಾಧ್ಯಮ ಮಾದರಿ ಗುಣಮಟ್ಟದ ಶಿಕ್ಷ ಣ ಮಕ್ಕಳಿಗೆ ಸಿಗುತ್ತಿರುವುದರಿಂದ ಪಾಲಕರು 2 ಕಿ.ಮೀ. ದೂರದ ತೋಟದ ಮನೆಗಳಿಂದ ಮಕ್ಕಳನ್ನು ಕರೆತಂದು ಈ ಅಂಗನವಾಡಿಗೆ ಬಿಟ್ಟು ಹೋಗುತ್ತಾರೆ. ಕಳೆದ 2 ದಶಕಗಳಿಂದ ಇಲ್ಲಿ ಕಲಿತ ಮಕ್ಕಳು ಕಾನ್ವೆಂಟ್‌ನತ್ತ ಕಣ್ಣೆತ್ತಿಯೂ ನೋಡದೆ ಇರುವುದು ಅಂಗನವಾಡಿ ಕಾರ್ಯಕರ್ತೆಯ ಕಾರ್ಯದಕ್ಷ ತೆಗೆ ಹಿಡಿದ ಕನ್ನಡಿಯಾಗಿದೆ.

ಮನೆ ಬಾಗಿಲಿಗೆ, ಮಾತೃಪೂರ್ಣ: ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಸೇವನೆಗೆ ಅಂಗನವಾಡಿ ಕೇಂದ್ರಕ್ಕೆ ಬರಲು ಸಾಧ್ಯವಾಗದ ಬಾಣಂತಿಯರಿಗೆ ಮನೆ ಬಾಗಿಲಿಗೆ ಅನ್ನ ನೀಡುವ ಕಾರ್ಯಕರ್ತೆಯ ಪ್ರಾಮಾಣಿಕತೆ ಜನರ ಮೆಚ್ಚುಗೆ ಗಳಿಸಿದ್ದು, ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೂ ಸಿ.ರತ್ನಮ್ಮ ಮಾದರಿಯಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ: ಅಂಗನವಾಡಿ ಕಾರ್ಯಕರ್ತೆಯಾಗಿ 29 ವರ್ಷದಿಂದ ದೇವರಹಳ್ಳಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿ.ರತ್ನಮ್ಮ ಅವರ ಸಾಧನೆ ಗುರುತಿಸಿ ಜಿಲ್ಲಾಡಳಿತ 2000-01ನೇ ಸಾಲಿನಲ್ಲಿ ಉತ್ತಮ ಅಂಗನವಾಡಿ ಕಾರ್ಯಕರ್ತೆ ಪ್ರಶಸ್ತಿ ನೀಡಿ ಗೌರವಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ