ಆ್ಯಪ್ನಗರ

ರೈತರಿಗೆ ನೋಟಿಸ್‌ ನೀಡುವುದು ನಿಲ್ಲಲಿ

ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲ, ಜಮೀನು ಅಭಿವೃದ್ಧಿ ಸಾಲ, ಟ್ರ್ಯಾಕ್ಟರ್‌, ಟಿಲ್ಲರ್‌ ಸಾಲಗಳು ಸೇರಿದಂತೆ ಎಲ್ಲಾ ರೀತಿಯ ಸಾಲಗಳನ್ನು ಸರಕಾರ ಕೂಡಲೇ ಮನ್ನಾ ಮಾಡಬೇಕು ಎಂದು ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷ ಕೆ.ಎಸ್‌.ಧನಂಜಯರಾಧ್ಯ ಒತ್ತಾಯಿಸಿದರು.

Vijaya Karnataka 24 Jun 2019, 5:00 am
ಸಿರಾ: ಸಹಕಾರಿ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲ, ಜಮೀನು ಅಭಿವೃದ್ಧಿ ಸಾಲ, ಟ್ರ್ಯಾಕ್ಟರ್‌, ಟಿಲ್ಲರ್‌ ಸಾಲಗಳು ಸೇರಿದಂತೆ ಎಲ್ಲಾ ರೀತಿಯ ಸಾಲಗಳನ್ನು ಸರಕಾರ ಕೂಡಲೇ ಮನ್ನಾ ಮಾಡಬೇಕು ಎಂದು ಜಿಲ್ಲಾ ರೈತ ಸಂಘ ಮತ್ತು ಹಸಿರು ಸೇನೆಯ ಗೌರವಾಧ್ಯಕ್ಷ ಕೆ.ಎಸ್‌.ಧನಂಜಯರಾಧ್ಯ ಒತ್ತಾಯಿಸಿದರು.
Vijaya Karnataka Web sira stop giving bank notices to farmers rajya raita sangha urged nationalized banks
ರೈತರಿಗೆ ನೋಟಿಸ್‌ ನೀಡುವುದು ನಿಲ್ಲಲಿ


ಅವರು ನಗರದ ಎಪಿಎಂಸಿ ಮುಂಭಾಗದಲ್ಲಿರುವ ತಮ್ಮ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸಿರಾದ ಕಾವೇರಿ ಗ್ರಾಮೀಣ ಬ್ಯಾಂಕ್‌ ಶಾಖೆಯವರು ಬೋರಸಂದ್ರ ಗ್ರಾಮದ ನಾಲ್ಕು ಜನ ರೈತರಿಗೆ ಸಾಲ ಕಟ್ಟದಿದ್ದರೆ ನಿಮ್ಮ ಜಮೀನನ್ನು ಹರಾಜು ಮಾಡುತ್ತೇವೆ ಎಂದು ನೋಟೀಸ್‌ ನೀಡಿದ್ದಾರೆ.

ಬರಗಾಲದ ಈ ಸಮಯದಲ್ಲಿ ರೈತರ ಜಮೀನನ್ನು ಹರಾಜು ಮಾಡುತ್ತೇವೆ ಎಂದು ಬೆದರಿಕೆ ಒಡ್ಡುವ ನೋಟೀಸ್‌ ನೀಡಬಾರದು. ವ್ಯವಸಾಯದ ಕೆಲಸ ಮಾಡಲು ಟ್ರ್ಯಾಕ್ಟರ್‌ ಅಗತ್ಯವಾಗಿದ್ದು, ಇದನ್ನು ಜಪ್ತಿ ಮಾಡಬಾರದು. ರೈತರಿಗೆ ತೊಂದರೆ ಕೊಡುವುದು ನಿಲ್ಲಿಸಬೇಕು. ಸರಕಾರ ಈ ಕೂಡಲೇ ಬ್ಯಾಂಕ್‌ ಅಧಿಕಾರಿಗಳಿಗೆ ತಿಳುವಳಿಕೆ ನೀಡಬೇಕು. ಈ ಕೂಡಲೇ ರೈತರ ಸಾಲದ ಒತ್ತಾಯವನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಜೂ.25ಕ್ಕೆ ಪ್ರತಿಭಟನೆ:
ಬ್ಯಾಂಕ್‌ಗಳು ರೈತರಿಗೆ ಸಾಲ ಕಟ್ಟುವಂತೆ ಒತ್ತಾಯಿಸಿ ನೋಟೀಸ್‌ ನೀಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿ ಹಾಗೂ ಈ ಬಗ್ಗೆ ಸರಕಾರವನ್ನು ಎಚ್ಚರಿಸಲು ಜೂನ್‌ 25ರಂದು ಮಂಗಳವಾರ ಬ್ಯಾಂಕ್‌ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಇದೇ ಸಮಯದಲ್ಲಿ ಧನಂಜಯರಾಧ್ಯ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಸಣ್ಣದ್ಯಾಮೇಗೌಡ, ಉಪಾಧ್ಯಕ್ಷ ಕೆ.ಲಕ್ಕಣ್ಣ, ಕಾರ್ಯದರ್ಶಿ ಹೆಚ್‌.ಎಸ್‌.ಬಸವರಾಜು, ಸಂಚಾಲಕ ಮಹಾಂತೇಶ್‌, ಖಜಾಂಚಿ ಹೆಚ್‌.ಆರ್‌.ರಂಗನಾಥ್‌, ಹಸಿರುಸೇನೆ ಅಧ್ಯಕ್ಷ ಯಳಿಯಪ್ಪ, ಕಾರ್ಯದರ್ಶಿ ಚಂದ್ರಶೇಖರ್‌, ಉಪಾಧ್ಯಕ್ಷ ವೀರೇಶ್‌ ಗೌಡ, ನಾಗೇಶ್‌ ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ