ತುಮಕೂರು : ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಅರ್ಚಕನೋರ್ವ ಕುಡಗೋಲಿನಿಂದ ಕೊಚ್ಚಿದ್ದಲ್ಲದೆ, ಚಾಕುವಿನಿಂದ ಇರಿದು ಕೊಲೆಗೈಯ್ಯಲು ಯತ್ನಿಸಿದ್ದಾನೆ. ಯುವತಿಗೆ ಗಂಭೀರ ಗಾಯವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಘಟನೆ ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಭಟ್ಟರಹಳ್ಳಿ ಗ್ರಾಮದಲ್ಲಿ ನಡೆದಿದೆ. ಭಟ್ಟರಹಳ್ಳಿ ಗ್ರಾಮದ ಕಲ್ಲೆಗೌಡ, ನಳೀನಾಕ್ಷಿ ಎಂಬ ದಂಪತಿ ಮಗಳು 17 ವರ್ಷದ ಜೀವಿತ ಹಲ್ಲೆಗೊಳಗಾದ ಬಾಲಕಿ. ಇದೇ ಗ್ರಾಮದ ಸಿದ್ರಾಮಯ್ಯ ಅಲಿಯಾಸ್ ದೊಡ್ಡೇಗೌಡ ಎಂಬುವರ ಮಗ ವಿನಯ್(25) ದುಷ್ಕೃತ್ಯ ನಡೆಸಿದ ಯುವಕ.
ಪ್ರೀತಿ ನಿರಾಕರಿಸಿದ್ದಕ್ಕೆ ಅಪ್ರಾಪ್ತ ಬಾಲಕಿಯನ್ನು ಕುಡಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನಿಸಿದ ದೇವಸ್ಥಾನದ ಅರ್ಚಕ!
Temple Priest Tried To kill Minor Girl : ಪ್ರೀತಿಗಾಗಿ ತಮ್ಮ ಪ್ರಾಣವನ್ನೇ ಕೊಡುವವರಿದ್ದಾರೆ. ಇಲ್ಲೊಬ್ಬ ತನ್ನ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಪ್ರಾಪ್ತ ಬಾಲಕಿಯನ್ನು ಕೊಡಲಿಯಿಂದ ಕೊಚ್ಚಿ ಹತ್ಯೆಗೆ ಯತ್ನಿಸಿದ್ದಾನೆ. ಅಲ್ಲದೇ, ಈತ ದೇವಸ್ಥಾನದ ಅರ್ಚಕನಾಗಿದ್ದು, ಕೆಲ ದಿನಗಳಿಂದ ಬಾಲಕಿಯ ಹಿಂದೆ ಬಿದ್ದು ಪ್ರೀತಿಸುವಂತೆ ಕಾಡುತ್ತಿದ್ದನಂತೆ. ಸದ್ಯ ಬಾಲಕಿ ಸಾವು ಬದುಕಿನ ನಡುವೆ ಹೋರಾಡುತ್ತಿದೆ.
ಹೈಲೈಟ್ಸ್:
- ಪ್ರೀತಿ ನಿರಾಕರಿಸಿದಳೆಂಬ ಕಾರಣಕ್ಕೆ ಅಪ್ರಾಪ್ತ ಬಾಲಕಿ ಮೇಲೆ ಅರ್ಚಕನೋರ್ವ ಕುಡಗೋಲಿನಿಂದ ಕೊಚ್ಚಿ ಕೊಲೆಗೆ ಯತ್ನ.
- ಮನೆ ಮುಂದೆಯೇ ಏಕಾಏಕಿ ಬಂದು ಮಾರಣಾಂತಿಕ ಹಲ್ಲೇ ಮಾಡಿರುವ ವಿನಯ್.
- ತಂದೆ ಕಳೆದುಕೊಂಡು ತಾಯಿ ಆಶ್ರಯದಲ್ಲಿ ಬೆಳೆಯುತ್ತಿದ್ದ ಬಾಲಕಿ ಈ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.