ಆ್ಯಪ್ನಗರ

ಬಿಜೆಪಿಯ ಆಂತರಿಕ ಕಲಹ, ಜೆಡಿಎಸ್‌ನ ದೌರ್ಬಲ್ಯಗಳು ನನ್ನ ಗೆಲುವಿಗೆ ಸಹಕಾರಿ: ರಮೇಶ್ ಬಾಬು

ತುರುವೇಕೆರೆಯಲ್ಲಿ ಸುಮಾರು 1600 ಮತದಾರರಿದ್ದಾರೆ. ನಾನು 2017ರಲ್ಲಿಇದೇ ಕ್ಷೇತ್ರದಲ್ಲಿ ಗೆದ್ದಾಗ ಕೆಲಸ ಮಾಡಲು ನನಗೆ ಕೇವಲ 6 ತಿಂಗಳ ಅಧಿಕಾರ ಮಾತ್ರ ಸಿಕ್ಕಿತ್ತು. ಆದ್ದರಿಂದ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಮತ್ತೊಮ್ಮೆ ತಮ್ಮ ಆಶೀರ್ವಾದ ಬೇಕಿದೆ. ಪ್ರವಾಸದ ವೇಳೆ ನನ್ನ ಗೆಲುವಿಗೆ ಪೂರಕವಾದ ವಾತಾವರಣ ಕಂಡುಬರುತ್ತಿದ್ದು ನನ್ನ ಗೆಲುವು ಖಚಿತ ಎಂದು ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ಬಾಬು ವಿಶ್ವಾಸ ವ್ಯಕ್ತಪಡಿಸಿದರು.

Vijaya Karnataka Web 21 Oct 2020, 8:34 am
ತುರುವೇಕೆರೆ: ಬಿಜೆಪಿಯಲ್ಲಿನ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ಜೆಡಿಎಸ್‌ನ ದೌರ್ಬಲ್ಯಗಳು ನನ್ನ ಗೆಲುವಿಗೆ ಸಹಕಾರಿಯಾಗಲಿವೆ ಎಂದು ಆಗ್ನೇಯ ಪದವೀಧರ ಕೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ಬಾಬು ವಿಶ್ವಾಸ ವ್ಯಕ್ತಪಡಿಸಿದರು.
Vijaya Karnataka Web ramesh-babu


ಪಟ್ಟಣದ ವಿರಕ್ತ ಮಠದ ಆವರಣದಲ್ಲಿ ಮಂಗಳವಾರ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ ನಡೆಸಿ ಮಾತನಾಡಿದ ಅವರು, 28 ಸಾವಿರ ಮತದಾರರಿರುವ ದೊಡ್ಡ ಕ್ಷೇತ್ರ ತುಮಕೂರು ಜಿಲ್ಲೆಯಾಗಿದ್ದು, ಅದರಲ್ಲಿ ತುರುವೇಕೆರೆಯಲ್ಲಿ ಸುಮಾರು 1600 ಮತದಾರರಿದ್ದಾರೆ. ನಾನು 2017ರಲ್ಲಿಇದೇ ಕ್ಷೇತ್ರದಲ್ಲಿ ಗೆದ್ದಾಗ ಕೆಲಸ ಮಾಡಲು ನನಗೆ ಕೇವಲ 6 ತಿಂಗಳ ಅಧಿಕಾರ ಮಾತ್ರ ಸಿಕ್ಕಿತ್ತು. ಆದ್ದರಿಂದ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಕೆಲಸ ಮಾಡಲು ಮತ್ತೊಮ್ಮೆ ತಮ್ಮ ಆಶೀರ್ವಾದ ಬೇಕಿದೆ. ಪ್ರವಾಸದ ವೇಳೆ ನನ್ನ ಗೆಲುವಿಗೆ ಪೂರಕವಾದ ವಾತಾವರಣ ಕಂಡುಬರುತ್ತಿದ್ದು ನನ್ನ ಗೆಲುವು ಖಚಿತ ಎಂದರು.

ತುಮಕೂರಿನಲ್ಲಿ ಕೊರೊನಾ ತಪಾಸಣೆಗೆ ಹೆದರಿ ರಾತ್ರೋರಾತ್ರಿ ಊರು ಬಿಡುತ್ತಿದ್ದಾರೆ ಗ್ರಾಮಸ್ಥರು..!

ಚುನಾವಣೆ ಕ್ಷೇತ್ರ ಬಹು ವಿಸ್ತಾರವಾದ್ದರಿಂದ ಹಾಗೂ ಸಮಯದ ಅಭಾವದಿಂದ ಎಲ್ಲ ಮತದಾರರನ್ನೂ ನೇರವಾಗಿ ಸಂಪರ್ಕಿಸಲು ಸಾಧ್ಯವಾಗದ ಕಾರಣ, ಸಾಮಾಜಿಕ ಜಾಲತಾಣ, ಕಾರ್ಯಕರ್ತರು ಮತ್ತು ಸ್ನೇಹಿತರ ಮೂಲಕ ಮತದಾರರನ್ನು ಸಂಪರ್ಕಿಸಲಾಗುತ್ತಿದೆ. ನಾನು ಗೆದ್ದು ನಿರುದ್ಯೋಗಿ ಪದವೀಧರರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗುತ್ತೇನೆ ಎಂದರು.

ತನ್ನ ಕರು ಕೆಚ್ಚಲಿಗೆ ಬಾಯಾಕಿದರೆ ಹಸು ಹಾಲು ಕೊಡುತ್ತದೆ, ಹಾಗೆಯೇ ಶಿರಾ ಜನತೆ ಬಿಜೆಪಿಗೆ ಮತ ಹಾಕುತ್ತಾರೆ; ಸಿಟಿ ರವಿ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಗುಡ್ಡೇನಹಳ್ಳಿ ಪ್ರಸನ್ನ, ನಾಗೇಶ್‌, ತಾಪಂ ಉಪಾಧ್ಯಕ್ಷ ಭೈರಪ್ಪ, ಸದಸ್ಯರಾದ ಮಂಜುನಾಥ್‌, ನಂಜೇಗೌಡ, ಮುಖಂಡರಾದ ನಂಜುಂಡಪ್ಪ, ದಾನಿಗೌಡ, ಜೋಗಿಪಾಳ್ಯ ಶಿವರಾಜ್‌, ಕೃಷ್ಣಮೂರ್ತಿ, ನಾಗರಾಜು, ಸ್ವರ್ಣಕುಮಾರ್‌, ಶ್ರೀಕಾಂತರಾಜ್‌ ಅರಸ್‌ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ