ಆ್ಯಪ್ನಗರ

ಸಚಿವರ ನೇತೃತ್ವದ ತಂಡ ತೆಂಗಿನ ನಾರಿನ ಉದ್ಯಮಗಳಿಗೆ ಭೇಟಿ

ತೆಂಗು ನಾರಿನ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡಿನ ತೆಂಗಿನ ನಾರಿನ ಉದ್ಯಮಗಳಿಗೆ ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ನೇತೃತ್ವದ ತಂಡ ಮಂಗಳವಾರ ಭೇಟಿ ನೀಡಿ ಅಧ್ಯಯನ ನಡೆಸಿದರು.

Vijaya Karnataka 26 Sep 2018, 5:15 pm
ತುಮಕೂರು: ತೆಂಗು ನಾರಿನ ಉತ್ಪನ್ನಗಳಲ್ಲಿ ಮುಂಚೂಣಿಯಲ್ಲಿರುವ ತಮಿಳುನಾಡಿನ ತೆಂಗಿನ ನಾರಿನ ಉದ್ಯಮಗಳಿಗೆ ಸಣ್ಣ ಕೈಗಾರಿಕೆ ಸಚಿವ ಎಸ್‌.ಆರ್‌.ಶ್ರೀನಿವಾಸ್‌ ನೇತೃತ್ವದ ತಂಡ ಮಂಗಳವಾರ ಭೇಟಿ ನೀಡಿ ಅಧ್ಯಯನ ನಡೆಸಿದರು.
Vijaya Karnataka Web the minister led team visited coconut linen industries
ಸಚಿವರ ನೇತೃತ್ವದ ತಂಡ ತೆಂಗಿನ ನಾರಿನ ಉದ್ಯಮಗಳಿಗೆ ಭೇಟಿ


ತೆಂಗಿನ ನಾರಿನ ಉತ್ಪನ್ನಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿರುವ ತಮಿಳುನಾಡಿನ ಪೊಲಾಚಿ ಸಿಂಗನಲ್ಲೂರು, ಕೊಟ್ಟೂರು, ಪ್ರದೇಶಗಳಲ್ಲಿನ ತೆಂಗಿನ ನಾರಿನ ಉತ್ಪನ್ನ ಘಟಕಗಳಿಗೆ ಭೇಟಿ ನೀಡಿ ಗುಣಮಟ್ಟದ ತೆಂಗಿನ ನಾರಿನ ಉತ್ಪನ್ನಗಳಾದ ಕಾಯರ್‌ ಹಾಸಿಗೆ, ಮ್ಯಾಟಿಂಗ್‌, ರಬ್ಬರ್ಯೆಸ್ಡ್‌ ಕಾಯರ್‌ ಹಾಸಿಗೆ, ಕಾಯರ್‌ ಕಾಂಪೋಸಿಟ್‌ ಬೋರ್ಡ್‌ಗಳಿಂದ ಶಾಲಾ ಡೆಸ್ಕ್‌, ಟೇಬಲ್‌ ಉತ್ಪಾದಿಸುವ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿದರು.

ತೆಂಗಿನ ನಾರಿನ ಉದ್ದಿಮೆಯಿಂದ ಗ್ರಾಮೀಣ ಭಾಗದ ಜನರಿಗೆ ಸ್ಥಳೀಯವಾಗಿ ಲಭ್ಯವಾಗುವ ತೆಂಗಿನನಾರಿನ ಕಚ್ಚಾ ವಸ್ತುಗಳನ್ನು ಉಪಯೋಗಿಸಿಕೊಂಡು ಗುಣ ಮಟ್ಟದ ನಾರಿನ ಉತ್ಪನ್ನಗಳನ್ನು ತಯಾರಿಸುವ ನಿಟ್ಟಿನಲ್ಲಿ ತಮಿಳುನಾಡು ಉದ್ದಿಮೆಗಳು ಅನುಸರಿಸುತ್ತಿರುವ ಮಾರ್ಗೋಪಾಯಗಳನ್ನು ಅಧ್ಯಯನ ನಡೆಸಿದರು.

ಈ ಅಧ್ಯಯನ ತಂಡದಲ್ಲಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಸಿ.ಎನ್‌.ಬಾಲಕೃಷ್ಣ, ಮಾಜಿ ಶಾಸಕ ತಿಮ್ಮರಾಯಪ್ಪ ಹಾಗೂ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ದಿ ಮಂಡಳಿ ಅಧ್ಯಕ್ಷ ಪುಟ್ಟರಾಜು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ