ಆ್ಯಪ್ನಗರ

ತುಮಕೂರು: ತಿಮ್ಮೇಗೌಡನಪಾಳ್ಯದ ಇಡೀ ಗ್ರಾಮಸ್ಥರಿಗೆ ಈಗ ಕೊರೊನಾ ಭಯ, ಜಿಲ್ಲಾಡಳಿತವೇ ಕಾರಣ?

ಬೆಂಗಳೂರಿಗೆ ತೆರಳಿ ಊರಿಗೆ ಬಂದ ಮಹಿಳೆಯಿಂದಾಗಿ ಇದೀಗ ಇಡೀ ತಿಮ್ಮೇಗೌಡನಪಾಳ್ಯದ ಜನರು ಆತಂಕ್ಕೀಡಾಗಿದ್ದಾರೆ. ಮಹಿಳೆಯ ಗಂಡ ಇತ್ತೀಚೆಗೆ ಸಾವನಪ್ಪಿದ್ದರು. ಇವರ ಅಂತ್ಯಕ್ರಿಯೆಯಲ್ಲಿ ಅನೇಕರು ಪಾಲ್ಗೊಂಡಿದ್ದರು. ಇದೀಗ ಮಹಿಳೆಗೆ ಕೊರೊನಾ ಪಾಸಿಟಿವ್‌ ಬಂದಿದ್ದು ಜನರ ಮನದಲ್ಲಿ ಆತಂಕ ಮನೆ ಮಾಡಿದೆ.

Vijaya Karnataka Web 2 Jul 2020, 12:01 pm
ತುಮಕೂರು: ತುಮಕೂರು ಜಿಲ್ಲಾಡಳಿತದ ವಿರುದ್ಧ ಕೊರೊನಾ ಸಂಬಂಧ ಬೇಜವಾಬ್ದಾರಿತನದ ಆರೋಪ ಕೇಳಿ ಬಂದಿದೆ. ಕೊರೊನಾ ಲಕ್ಷಣವಿದ್ದರೂ ಕ್ವಾರಂಟೈನ್ ಮಾಡದೇ ಬೇಕಾಬಿಟ್ಟಿ ವರ್ತನೆ ಮಾಡಿದ್ದಾರೆ ಅನ್ನುವ ಆರೋಪವಿದೆ. ಇದೀಗ ಜಿಲ್ಲಾಡಳಿತದ ಬೇಜವಾಬ್ದಾರಿಯಿಂದ ಇಡೀ ತುಮಕೂರು ಜಿಲ್ಲೆಯೆ ಕುಣಿಗಲ್ ತಾಲೂಕಿನ ತಿಮ್ಮೇಗೌಡನಪಾಳ್ಯದ ಗ್ರಾಮಸ್ಥರು ಭಯದಿಂದ ಕಾಲ ಕಳೆಯುವಂತಾಗಿದೆ.
Vijaya Karnataka Web jpg (42)

ಆಗಿದ್ದೇನು?
ಜೂ. 25 ರಂದು ಬೆಂಗಳೂರಿಗೆ ತೆರಳಿದ್ದ ತಿಮ್ಮೇಗೌಡನಪಾಳ್ಯದ ಮಹಿಳೆಯೊಬ್ಬರು ವಾಪಾಸ್‌ ಬಂದಿದ್ದರು. ಬೆಂಗಳೂರಿನಿಂದ ಗ್ರಾಮಕ್ಕೆ ವಾಪಸ್ ಬಂದಾಗ ಮಹಿಳೆಗೆ ಜ್ವರ ಕಾಣಿಸಿಕೊಂಡಿತ್ತು. ಮಹಿಳೆಗೆ ಜ್ವರ ಬಂದ ದಿನವೇ ತಾಲೂಕು ಆಡಳಿತಕ್ಕೂ ಗ್ರಾಮಸ್ಥರು ಮಾಹಿತಿ‌ ನೀಡಿದ್ದರು. ಕೊರೊನಾ ಲಕ್ಷಣ ಇದ್ದರೂ ಕೋವಿಡ್ ಟೆಸ್ಟ್ ಮಾಡೇ ಇಲ್ಲ. ಅವರು ಬೆಂಗಳೂರಿನಿಂದ ಬಂದ ಮೂರು ದಿನಗಳ ನಂತರ ಅಂದರೆ ಜೂ.30 ರಂದು ಮಹಿಳೆಯ ಪತಿ ಉಸಿರಾಟದ ಸಮಸ್ಯೆಯಿಂದ ಸಾವನಪ್ಪಿದರು(ಕೊರೊನಾ ಲಕ್ಷಣ).

ಅಲ್ಲೂ ಕೂಡ ಯಾವುದೇ ಕ್ರಮ ಕೈಗೊಳ್ಳದೆ ಸಂಬಂಧಿಕರು, ಗ್ರಾಮಸ್ಥರು ಸೇರಿ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಇದೀಗ ಕೊನೆ ಘಳಿಗೆಯಲ್ಲಿ ಅಧಿಕಾರಿಗಳು ಬಂದು ಮೃತ ಹಾಗು ಪತ್ನಿಯ ಸ್ವ್ಯಾಬ್ ಸಂಗ್ರಹ ಮಾಡಿಕೊಂಡು ಹೋಗಿದ್ದಾರೆ. ಜು.1 ರಂದು ಮಹಿಳೆಯೆ ಕೊರೊನಾ ಪರೀಕ್ಷೆಯ ವರದಿಯಲ್ಲಿ ಸೋಂಕು ದೃಢಪಟ್ಟಿದೆ. ಅಲ್ಲದೇ ಮೃತ ವ್ಯಕ್ತಿಯ ರಿಪೋರ್ಟ್‌ ಬರಬೇಕಿದೆ.

ಆದ್ರೆ ಮೃತ ಗಂಡನಿಗೆ ಕೊರೊನಾ ಇರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇದೀಗ ಇಡೀ ಗ್ರಾಮಸ್ಥರಿಗೆ ಕೊರೊನಾ ಆತಂಕ ಶುರುವಾಗಿದೆ. ಮಹಿಳೆಯೊಂದಿಗೆ ಗ್ರಾಮಸ್ಥರು ಪ್ರಾಥಮಿಕ ಸಂಪರ್ಕ ಹೊಂದಿರುವ ಸಾಧ್ಯತೆ ಇದೆ. ಅಲ್ಲದೇ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರದಲ್ಲಿ ಜನ ಸೇರಿರುವುದು ಕೂಡ ಆತಂಕಕ್ಕೆ ಕಾರಣವಾಗಿದೆ. ಎಲ್ಲಾದರೂ ಜಿಲ್ಲಾಡಳಿತ ಕ್ರಮ ವಹಿಸಿದ್ದರೆ ಸಮಸ್ಯೆಯಾಗುತ್ತಿಲ್ಲ ಅನ್ನುತ್ತಿದ್ದಾರೆ ಸಾರ್ವಜನಿಕರು. ಈ ಬಗ್ಗೆ ಜಿಲ್ಲಾಡಳಿತವನ್ನ ಸಂಪರ್ಕ ಮಾಡಲಾಗಿದ್ದು ಯಾವುದೇ ಪ್ರತಿಕ್ರಿಯೆ ಸಿಕ್ಕಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ