ಗಿರೀಶ ಎಸ್. ಕಲ್ಗುಡಿ ತುಮಕೂರು
ಕಾಡು ಪ್ರಾಣಿಗಳ ಹಾವಳಿಯಿಂದ ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕಳೆದುಕೊಂಡಿರುವ ರೈತರಿಗೆ ಬೆಳೆ ಹಾನಿಯಾಗಿ ವರ್ಷ ಕಳೆದರೂ ಪರಿಹಾರವೇ ದೊರಕಿಲ್ಲ. ಜಿಲ್ಲೆಯ ರೈತರು ಬರ ಪರಿಸ್ಥಿತಿ ನಡುವೆಯೂ ಸಾಲ ಮಾಡಿ ಕೀಟಬಾಧೆ, ರೋಗದಂತಹ ಹಾವಳಿಯಲ್ಲೂಬೆಳೆ ರಕ್ಷಿಸಿಕೊಂಡು ಬೆಳೆದ ಬೆಳೆ ಕೊನೆ ಕ್ಷಣದಲ್ಲಿ ಕಾಡುಪ್ರಾಣಿಗಳ ದಾಳಿಗೆ ತುತ್ತಾಗುತ್ತಿದೆ.
ಆದರೆ, ಕಾಡುಪ್ರಾಣಿಗಳ ದಾಳಿಗೆ ಒಳಗಾದ ಬೆಳೆಗೆ ಪರಿಹಾರ ಸಿಗದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿಶೇಂಗಾ, ಮೆಕ್ಕೆಜೋಳ, ಭತ್ತ, ರಾಗಿ ಸೇರಿದಂತೆ ವಿವಿಧ ಬೆಳೆಗಳು ಕಾಡುಪ್ರಾಣಿಗಳಿಗೆ ತುತ್ತಾಗುತ್ತಿವೆ. ಆನೆ ಸೇರಿದಂತೆ ಇತರೆ ಕಾಡು ಪ್ರಾಣಿಗಳ ದಾಳಿಗೆ ಹಾನಿಯಾದ ಬೆಳೆಗಳ 378 ಪ್ರಕರಣಗಳಿಗೆ ಒಟ್ಟು 2,888,715 ರೂ. ಪರಿಹಾರ ರೈತರಿಗೆ ಬಿಡುಗಡೆಯಾಗಬೇಕಾಗಿದೆ.
ಪರಿಹಾರಕ್ಕಾಗಿ ಕಾದು ಕುಳಿತ ರೈತ
ಪ್ರಾಣಿಗಳ ದಾಳಿಗೆ ಬೆಳೆ ತುತ್ತಾಗಿ ವರ್ಷ ಕಳೆದು ಮತ್ತೊಮ್ಮೆ ಮುಂಗಾರು ವರ್ಷ ಪ್ರಾರಂಭವಾಗಿದೆ. ಪುನಃ ಬೆಳೆ ಬೆಳೆಯಲು ರೈತರು ಸಿದ್ಧವಾಗಿದ್ದರೂ ಅವರಿಗೆ ಪರಿ ಹಾರ ಮಾತ್ರ ಸಿಕ್ಕಿಲ್ಲ. ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ವರ್ಷದಿಂದಲೂ ಪರಿಹಾರಕ್ಕಾಗಿ ರೈತರು ಕಾದುಕುಳಿತಿದ್ದಾರೆ. ಬಹುತೇಕ ರೈತರು ಅರಣ್ಯ ಇಲಾಖೆಗೆ ಅಲೆದು ಸುಸ್ತಾಗಿದ್ದಾರೆ.
ಶೀಘ್ರ ಪರಿಹಾರ ಕೊಡಲು ಸಾಧ್ಯವಾಗದಿದ್ದರೆ ಯಾವ ಪುರುಷಾರ್ಥಕ್ಕೆ ಪರಿಹಾರ ಕೊಡುತ್ತೇವೆಂದು ಅರ್ಜಿ ಹಾಕಿಸಿಕೊಳ್ಳುತ್ತಾರೆಂದು ಇಲಾಖೆ ಮತ್ತು ಸರಕಾರದ ವಿರುದ್ಧ ಶಪಿಸುತ್ತಿದ್ದಾರೆ.
ಇ-ಪರಿಹಾರ ಇದ್ದೂ ವ್ಯರ್ಥ
ಕಾಡು ಪ್ರಾಣಿಗಳ ದಾಳಿಗೆ ತುತ್ತಾದ ಬೆಳೆಗಳಿಗೆ ಶೀಘ್ರ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜಾರಿಗೆ ತಂದಿರುವ ನೂತನ ಇ-ಪರಿಹಾರ ಯೋಜನೆ ಇದ್ದೂ ಇಲ್ಲದಂತಾಗಿದೆ. ಇ-ಕಾಂಪನ್ಸೇಷನ್ ಯೋಜನೆ ಜಾರಿಗೆ ಬಂದ ನಂತರ ಅರ್ಜಿ ಸಲ್ಲಿಕೆಯಾದ ಕೆಲವೇ ದಿನ ಅಥವಾ ತಿಂಗಳಲ್ಲಿಯೇ ಪರಿಹಾರ ಸಿಗುತ್ತದೆ ಎಂಬ ಮಹದಾಸೆ ರೈತರಲ್ಲಿಮೂಡಿತ್ತು. ಆದರೆ, ವರ್ಷವಾದರೂ ಪರಿಹಾರ ಬಾರದ ಹಿನ್ನೆಲೆಯಲ್ಲಿರೈತರ ಪಾಲಿಗೆ ಇ-ಕಾಂಪನ್ಸೇಷನ್ ಇದ್ದೂ ವ್ಯರ್ಥವಾಗಿದೆ.
ಕಾಡು ಪ್ರಾಣಿಗಳ ಹಾವಳಿಯಿಂದ ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕಳೆದುಕೊಂಡಿರುವ ರೈತರಿಗೆ ಬೆಳೆ ಹಾನಿಯಾಗಿ ವರ್ಷ ಕಳೆದರೂ ಪರಿಹಾರವೇ ದೊರಕಿಲ್ಲ. ಜಿಲ್ಲೆಯ ರೈತರು ಬರ ಪರಿಸ್ಥಿತಿ ನಡುವೆಯೂ ಸಾಲ ಮಾಡಿ ಕೀಟಬಾಧೆ, ರೋಗದಂತಹ ಹಾವಳಿಯಲ್ಲೂಬೆಳೆ ರಕ್ಷಿಸಿಕೊಂಡು ಬೆಳೆದ ಬೆಳೆ ಕೊನೆ ಕ್ಷಣದಲ್ಲಿ ಕಾಡುಪ್ರಾಣಿಗಳ ದಾಳಿಗೆ ತುತ್ತಾಗುತ್ತಿದೆ.
ಆದರೆ, ಕಾಡುಪ್ರಾಣಿಗಳ ದಾಳಿಗೆ ಒಳಗಾದ ಬೆಳೆಗೆ ಪರಿಹಾರ ಸಿಗದೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿಶೇಂಗಾ, ಮೆಕ್ಕೆಜೋಳ, ಭತ್ತ, ರಾಗಿ ಸೇರಿದಂತೆ ವಿವಿಧ ಬೆಳೆಗಳು ಕಾಡುಪ್ರಾಣಿಗಳಿಗೆ ತುತ್ತಾಗುತ್ತಿವೆ. ಆನೆ ಸೇರಿದಂತೆ ಇತರೆ ಕಾಡು ಪ್ರಾಣಿಗಳ ದಾಳಿಗೆ ಹಾನಿಯಾದ ಬೆಳೆಗಳ 378 ಪ್ರಕರಣಗಳಿಗೆ ಒಟ್ಟು 2,888,715 ರೂ. ಪರಿಹಾರ ರೈತರಿಗೆ ಬಿಡುಗಡೆಯಾಗಬೇಕಾಗಿದೆ.
ಪರಿಹಾರಕ್ಕಾಗಿ ಕಾದು ಕುಳಿತ ರೈತ
ಪ್ರಾಣಿಗಳ ದಾಳಿಗೆ ಬೆಳೆ ತುತ್ತಾಗಿ ವರ್ಷ ಕಳೆದು ಮತ್ತೊಮ್ಮೆ ಮುಂಗಾರು ವರ್ಷ ಪ್ರಾರಂಭವಾಗಿದೆ. ಪುನಃ ಬೆಳೆ ಬೆಳೆಯಲು ರೈತರು ಸಿದ್ಧವಾಗಿದ್ದರೂ ಅವರಿಗೆ ಪರಿ ಹಾರ ಮಾತ್ರ ಸಿಕ್ಕಿಲ್ಲ. ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿ ವರ್ಷದಿಂದಲೂ ಪರಿಹಾರಕ್ಕಾಗಿ ರೈತರು ಕಾದುಕುಳಿತಿದ್ದಾರೆ. ಬಹುತೇಕ ರೈತರು ಅರಣ್ಯ ಇಲಾಖೆಗೆ ಅಲೆದು ಸುಸ್ತಾಗಿದ್ದಾರೆ.
ಶೀಘ್ರ ಪರಿಹಾರ ಕೊಡಲು ಸಾಧ್ಯವಾಗದಿದ್ದರೆ ಯಾವ ಪುರುಷಾರ್ಥಕ್ಕೆ ಪರಿಹಾರ ಕೊಡುತ್ತೇವೆಂದು ಅರ್ಜಿ ಹಾಕಿಸಿಕೊಳ್ಳುತ್ತಾರೆಂದು ಇಲಾಖೆ ಮತ್ತು ಸರಕಾರದ ವಿರುದ್ಧ ಶಪಿಸುತ್ತಿದ್ದಾರೆ.
ಇ-ಪರಿಹಾರ ಇದ್ದೂ ವ್ಯರ್ಥ
ಕಾಡು ಪ್ರಾಣಿಗಳ ದಾಳಿಗೆ ತುತ್ತಾದ ಬೆಳೆಗಳಿಗೆ ಶೀಘ್ರ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಜಾರಿಗೆ ತಂದಿರುವ ನೂತನ ಇ-ಪರಿಹಾರ ಯೋಜನೆ ಇದ್ದೂ ಇಲ್ಲದಂತಾಗಿದೆ. ಇ-ಕಾಂಪನ್ಸೇಷನ್ ಯೋಜನೆ ಜಾರಿಗೆ ಬಂದ ನಂತರ ಅರ್ಜಿ ಸಲ್ಲಿಕೆಯಾದ ಕೆಲವೇ ದಿನ ಅಥವಾ ತಿಂಗಳಲ್ಲಿಯೇ ಪರಿಹಾರ ಸಿಗುತ್ತದೆ ಎಂಬ ಮಹದಾಸೆ ರೈತರಲ್ಲಿಮೂಡಿತ್ತು. ಆದರೆ, ವರ್ಷವಾದರೂ ಪರಿಹಾರ ಬಾರದ ಹಿನ್ನೆಲೆಯಲ್ಲಿರೈತರ ಪಾಲಿಗೆ ಇ-ಕಾಂಪನ್ಸೇಷನ್ ಇದ್ದೂ ವ್ಯರ್ಥವಾಗಿದೆ.