ಆ್ಯಪ್ನಗರ

'8 ದಿನಗಳಲ್ಲಿ ಸಂಪುಟ ವಿಸ್ತರಣೆ: ದಿಲ್ಲಿಗೆ ಹೋಗಿ ಬಂದ ಮೇಲೆ ನಿರ್ಧಾರ': ಸಿಎಂ ಬಿಎಸ್‌ವೈ ಪ್ರಕಟ

'ಉಪಚುನಾವಣೆಯಲ್ಲಿಗೆಲುವು ಕಂಡ 12 ಜನ ಶಾಸಕರ ಆಯ್ಕೆಯಿಂದ ರಾಜ್ಯದಲ್ಲಿ ಮೂರೂವರೆ ವರ್ಷ ನಿರಾಂತಕವಾಗಿ ಅಭಿವೃದ್ಧಿಗೆ ಆತಂಕವಿಲ್ಲದೆ ದುಡಿಯಬಹುದು' - ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ

Vijaya Karnataka Web 12 Dec 2019, 8:46 pm
ತುಮಕೂರು: ಸಚಿವ ಸಂಪುಟ ವಿಸ್ತರಣೆ ಬಗ್ಗೆ ದೆಹಲಿಗೆ ಹೋಗಿ ಬಂದ ಮೇಲೆ ನಿರ್ಧಾರ ಮಾಡಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, 8 ದಿನಗಳ ನಂತರ ಸಂಪುಟ ವಿಸ್ತರಣೆಯಾಗಲಿದೆ ಎಂದು ಗಡುವನ್ನೂ ನೀಡಿದ್ಧಾರೆ.
Vijaya Karnataka Web 8 ದಿನಗಳಲ್ಲಿ ಸಂಪುಟ ವಿಸ್ತರಣೆ: ದಿಲ್ಲಿಗೆ ಹೋಗಿ ಬಂದ ಮೇಲೆ ನಿರ್ಧಾರ: ಸಿಎಂ ಬಿಎಸ್‌ವೈ ಪ್ರಕಟ


ಕುಪ್ಪೂರು ಮಠದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ, ಉಪ ಚುನಾವಣೆಯಲ್ಲಿ ಸೋತವರಿಗೆ ಅವಕಾಶ ನೀಡುವ ವಿಚಾರವಾಗಿ ಹೈಕಮಾಂಡ್‌ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಮಾತನಾಡಿದ ಕಂದಾಯ ಸಚಿವ ಆರ್‌. ಅಶೋಕ್‌, ಡಿಸೆಂಬರ್ 20ರ ನಂತರ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ ಎಂದರು. ಸರಕಾರ ರಚನೆಯಾಗಲು ಸಹಾಯ ಮಾಡಿದವರಿಗೆ ಕೊಟ್ಟ ಮಾತಿನಂತೆ ಎಲ್ಲವೂ ನಡೆಯುತ್ತದೆ ಎಂದ ಅಶೋಕ್, ಸೋತವರಿಗೆ ಸಚಿವ ಸ್ಥಾನ ಕೊಡುವ ಬಗ್ಗೆ ಗೊತ್ತಿಲ್ಲ ಎಂದರು. ಗೆದ್ದವರಿಗೆ ಮೊದಲ ಆದ್ಯತೆ ಎಂದ ಅಶೋಕ್, ಸೋತವರ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಪಕ್ಷ ತೀರ್ಮಾನ ಮಾಡುತ್ತದೆ ಎಂದರು.

ಇದಕ್ಕೂ ಮುನ್ನ ಕುಪ್ಪೂರು ಗದ್ದಿಗೆ ಜಾತ್ರಾ ಮಹೋತ್ಸವದಲ್ಲಿ ನಡೆದ ಭಾವೈಕ್ಯ ಧರ್ಮ ಸಮ್ಮೇಳನವನ್ನು ಉದ್ಘಾಟಿಸಿದ ಸಿಎಂ ಯಡಿಯೂರಪ್ಪ, ಉಪಚುನಾವಣೆಯಲ್ಲಿಗೆಲುವು ಕಂಡ 12 ಜನ ಶಾಸಕರ ಆಯ್ಕೆಯಿಂದ ರಾಜ್ಯದಲ್ಲಿ ಮೂರೂವರೆ ವರ್ಷ ನಿರಾಂತಕವಾಗಿ ಅಭಿವೃದ್ಧಿಗೆ ಆತಂಕವಿಲ್ಲದೆ ದುಡಿಯಬಹುದು ಎಂದರು. ಈ ಮೂಲಕ ನಾಡಿನ ಜನರ ನಿರೀಕ್ಷೆಗೆ ಸ್ಪಂದಿಸುತ್ತೇವೆ ಎಂದರಲ್ಲದೆ, ನೀರಾವರಿ, ಕೈಗಾರಿಕೆ ಹಾಗೂ ಬೆಲೆ ಕುಸಿದಾಗ, ಸರಕಾರ ಬೆಂಬಲ ಬೆಲೆ ನೀಡುತ್ತದೆ, ಕುಪ್ಪೂರು ಗದ್ದಿಗೆ ಮಠದ ಅಭಿವೃದ್ಧಿಗೆ 3 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಯಡಿಯೂರಪ್ಪ ಹೇಳಿದರು.

'ಡಿಸಿಎಂ ಹುದ್ದೆ ತೆಗೆಯಲ್ಲ, ಬಿಎಸ್‌ವೈ ಪವರ್ ಕಮ್ಮಿ ಆಗಲ್ಲ'! ಶೀಘ್ರದಲ್ಲೇ ಸಂಪುಟ ವಿಸ್ತರಣೆ ಎಂದ ಕಾರಜೋಳ

ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲೂಕಿನ 96 ಕೆರೆಗಳಿಗೆ ಹೇಮಾವತಿ ನಾಲೆಯಿಂದ ನೀರು ಬಿಡುವ ಯೋಜನೆಗೆ ಸರಕಾರ 260 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದರು. ಜಿಲ್ಲೆಯ ಹೇಮಾವತಿ ನಾಲಾ ವಿಸ್ತರಣೆಗೆ ಯಡಿಯೂರಪ್ಪ 550 ಕೋಟಿ ರೂ. ಯೋಜನೆ ಮಂಜೂರು ಮಾಡಿದ್ದು, ಇದರಿಂದ ಜಿಲ್ಲೆಯಲ್ಲಿ 1200 ಕ್ಯೂಸೆಕ್‌ ನೀರಿನ ಬದಲಾಗಿ 2400 ಕ್ಯೂಸೆಕ್‌ ನೀರು ಹರಿಯಲಿದೆ. ರೈತರ ಜೀವನ ಸುಧಾರಿಸಲಿದೆ ಹಾಗೂ ಎಲ್ಲರನ್ನೂ ಜತೆಯಲ್ಲಿ ತೆಗೆದುಕೊಂಡು ಹೋಗುವಂತೆ ಮನವಿ ಮಾಡಿದರು.

ವಿಡಿಯೋ: ಸಿಎಂ ಜೊತೆ ಆಸ್ಪತ್ರೆಗೆ ಹೋದಾಗಲೂ ಸಿದ್ದು ಕಾಲೆಳೆದ ಈಶ್ವರಪ್ಪ..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ