ಅಶೋಕ್ ಆರ್.ಪಿ.
ತುಮಕೂರು: ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಭಾರೀ ಕುಸಿತ ದಾಖಲಿಸಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲೇ 16ನೇ ಸ್ಥಾನದಲ್ಲಿದ್ದ ತುಮಕೂರು ಜಿಲ್ಲೆ, ಈ ಸಾಲಿನಲ್ಲಿ 23ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇದಕ್ಕೆ ಕಾರಣಗಳೇನು ಎಂಬ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಅಧಿಕಾರಿಗಳು ಕೊರೊನಾ ಕಡೆಗೆ ಬೆರಳು ತೋರಿಸುತ್ತಿದ್ದಾರೆ..! ನೂತನವಾಗಿ ಬಂದಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಕೆ. ನರಸಿಂಹಮೂರ್ತಿ ಅವರೂ ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಕೊರೊನಾ ವೈರಸ್ನಿಂದಾಗಿ ಇಂಗ್ಲಿಷ್ ವಿಷಯ ಪರೀಕ್ಷೆ ಬರೆಯಲು ಸುಮಾರು ಎರಡು ತಿಂಗಳು ಅಂತರವಿದ್ದ ಕಾರಣ, ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ ಜಿಲ್ಲೆಯು ಕೆಳಗಿಳಿದಿದೆ. ಬರುವ ವರ್ಷದಲ್ಲಿ ಜಿಲ್ಲೆಯನ್ನು ಮೇಲ್ಪಂಕ್ತಿಗೆ ತರಲು ಶ್ರಮಿಸಲಾಗುವುದು ಎನ್ನುತ್ತಾರವರು. ಆದರೆ ಉಳಿದ ವಿಷಯಗಳಲ್ಲಿ ಏಕೆ ಜಿಲ್ಲೆಗೆ ಸರಿಯಾದ ಫಲಿತಾಂಶ ಬಂದಿಲ್ಲ ಎನ್ನುವ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.
ಸಾಧಕರ ಪಟ್ಟಿಯೂ ಇಲ್ಲ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡು ಎರಡು ದಿನ ಕಳೆದರೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಜಿಲ್ಲೆಯ ಸಾಧಕ ವಿದ್ಯಾರ್ಥಿಗಳ ಕುರಿತು ಮಾಹಿತಿ ಇಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, ವಾಣಿಜ್ಯ, ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರ ಪಟ್ಟಿ ಮಾತ್ರ ಮಾಡಿದ್ದೇವೆ. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರ ಮಾಹಿತಿ ಇಲ್ಲ. ಮರು ಎಣಿಕೆ, ಮರು ಮೌಲ್ಯಮಾಪನದಲ್ಲಿ ಅಂಕಗಳ ವ್ಯತ್ಯಾಸವಾಗುತ್ತದೆ. ಹಾಗಾಗಿ ಮೂರು ವಿಭಾಗದಲ್ಲಿ ತಲಾ ಒಬ್ಬರನ್ನು ಮಾತ್ರ ಗುರುತಿಸಿದ್ದೇವೆ ಎನ್ನುತ್ತಾರೆ ಡಿಡಿಪಿಯು.
ದ್ವಿತೀಯ ಪಿಯುಸಿ ಆರ್ಟ್ಸ್ ಪಾಸ್ ಆದವರಿಗೆ ಬೆಸ್ಟ್ ಕೋರ್ಸ್ಗಳ ಆಯ್ಕೆಗಳು ಇಲ್ಲಿವೆ?
ಮರು ಮೌಲ್ಯಮಾಪನ, ಮರು ಎಣಿಕೆಯಲ್ಲಿ ಏನೇ ಬದಲಾವಣೆ ಆಗಬಹುದು ಅಥವಾ ಆಗದಿರಬಹುದು, ಆದರೆ ಈಗ ಸಾಧನೆ ಮಾಡಿರುವ 6 ಮಂದಿ ವಿದ್ಯಾರ್ಥಿಗಳನ್ನು ಗುರುತಿಸಲಾಗದಷ್ಟು ಜಡತ್ವ ಈ ಇಲಾಖೆಗೆ ಏಕೆ ಎನ್ನುವುದು ಪ್ರಶ್ನೆಯಾಗಿದೆ.
ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸದಿದ್ದಲ್ಲಿ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾದರೂ ಹೇಗೆ ಬರುತ್ತದೆ ಎನ್ನುವುದನ್ನು ಪಿಯು ಇಲಾಖೆ ಅರ್ಥ ಮಾಡಿಕೊಳ್ಳಬೇಕಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೀಡಿದಷ್ಟು ಆದ್ಯತೆ ಪಿಯು ವಿದ್ಯಾರ್ಥಿಗಳಿಗೆ ನೀಡಿಲ್ಲ. ಅಧಿಕಾರಿಗಳು, ಉಪನ್ಯಾಸಕರ ವೈಫಲ್ಯ, ವಿದ್ಯಾರ್ಥಿಗಳ ಸಾಮರ್ಥ್ಯ ಈ ಎಲ್ಲಾ ಕಾರಣದಿಂದಾಗಿ ಫಲಿತಾಂಶ ಕುಸಿದಿರಬಹುದು. ಒಟ್ಟಿನಲ್ಲಿ ಮುಂದಿನ ಬಾರಿ ಉತ್ತಮ ಫಲಿತಾಂಶ ಪಡೆಯಲು ಇಲಾಖೆಗೆ ಈಗಿನಿಂದಲೇ ಟಾನಿಕ್ ನೀಡಬೇಕಿದೆ.
ಪಿಯುಸಿ ಫಲಿತಾಂಶ ಕುಸಿತಕ್ಕೆ ಸುರೇಶ್ ಕುಮಾರ್ ಹೊಣೆ! ಸಿದ್ದರಾಮಯ್ಯ ಆರೋಪ
ಜಿಲ್ಲೆಯ ಟಾಪರ್ಗಳಿವರು:
ವಿಜ್ಞಾನ ವಿಭಾಗದಲ್ಲಿ ಕುಣಿಗಲ್ ಜ್ಞಾನ ಭಾರತಿ ಪಿಯು ಕಾಲೇಜಿನ ಅಲ್ಮಾಸ್ ಭಾನು 594 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ವಿದ್ಯಾನಿಧಿ ಪಿಯು ಕಾಲೇಜಿನ ತರುಣ್ 594 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ತಿಪಟೂರು ಬಸವೇಶ್ವರ ಪಿಯು ಕಾಲೇಜಿನ ರಾಜಕುಮಾರ್ ರಾಥೋಡ್ 586 ಅಂಕಗಳನ್ನು ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ಬಡತನದಲ್ಲಿಅರಳಿದ ಪ್ರತಿಭೆ:
ಸಿರಾ ತಾಲೂಕಿನ ತಾವರೆಕೆರೆ ಗ್ರಾಮದ ಶ್ರೀ ಸಿದ್ಧಾರ್ಥ ಪಿಯು ಕಾಲೇಜಿನ ಬಡ ವಿದ್ಯಾರ್ಥಿನಿ ಭೂಮಿಕಾ ವಾಣಿಜ್ಯ ವಿಭಾಗದಲ್ಲಿ 570 (ಶೇ.95) ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾಳೆ. ಕರಿಯಾಲ ಗ್ರಾಮದ ಬಡ ಕುಟುಂಬದ ಈಕೆಯ ಸಾಧನೆಗೆ ಗ್ರಾಮಸ್ಥರು ತಲೆ ದೂಗಿದ್ದಾರೆ.
ಇದೇ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಹುಣಸೆಹಳ್ಳಿ ಗ್ರಾಮದ ಆಶಾರಾಣಿ 560 ಅಂಕಗಳನ್ನು ಪಡೆದು (ಶೇ.93.5) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಗ್ರಾಮ ಲೆಕ್ಕಾಧಿಕಾರಿಯಾಗಬೇಕು ಎಂಬುದು ಈಕೆಯ ಕನಸಾಗಿತ್ತು. ಆದರೆ ಈಗ ತೆಗೆದುಕೊಂಡಿರುವ ಅಂಕ ಕಡಿಮೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾಳಾದರೂ ಪದವಿ ಕಲಿಯುವ ಆಸೆ ಹೊಂದಿದ್ದಾಳೆ.
ದ್ವಿತೀಯ ಪಿಯು ಇಂಗ್ಲಿಷ್ನಲ್ಲೇ ಹೆಚ್ಚು ವಿದ್ಯಾರ್ಥಿಗಳು ಫೇಲ್.. ಏಕೆ ಗೊತ್ತೇ?
ತುಮಕೂರು: ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಭಾರೀ ಕುಸಿತ ದಾಖಲಿಸಿದೆ. ಕಳೆದ ಶೈಕ್ಷಣಿಕ ವರ್ಷದಲ್ಲಿ ರಾಜ್ಯದಲ್ಲೇ 16ನೇ ಸ್ಥಾನದಲ್ಲಿದ್ದ ತುಮಕೂರು ಜಿಲ್ಲೆ, ಈ ಸಾಲಿನಲ್ಲಿ 23ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಇದಕ್ಕೆ ಕಾರಣಗಳೇನು ಎಂಬ ಬಗ್ಗೆ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಅಧಿಕಾರಿಗಳು ಕೊರೊನಾ ಕಡೆಗೆ ಬೆರಳು ತೋರಿಸುತ್ತಿದ್ದಾರೆ..!
ಸಾಧಕರ ಪಟ್ಟಿಯೂ ಇಲ್ಲ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡು ಎರಡು ದಿನ ಕಳೆದರೂ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ಜಿಲ್ಲೆಯ ಸಾಧಕ ವಿದ್ಯಾರ್ಥಿಗಳ ಕುರಿತು ಮಾಹಿತಿ ಇಲ್ಲ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದರೆ, ವಾಣಿಜ್ಯ, ಕಲಾ ಮತ್ತು ವಿಜ್ಞಾನ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರ ಪಟ್ಟಿ ಮಾತ್ರ ಮಾಡಿದ್ದೇವೆ. ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದವರ ಮಾಹಿತಿ ಇಲ್ಲ. ಮರು ಎಣಿಕೆ, ಮರು ಮೌಲ್ಯಮಾಪನದಲ್ಲಿ ಅಂಕಗಳ ವ್ಯತ್ಯಾಸವಾಗುತ್ತದೆ. ಹಾಗಾಗಿ ಮೂರು ವಿಭಾಗದಲ್ಲಿ ತಲಾ ಒಬ್ಬರನ್ನು ಮಾತ್ರ ಗುರುತಿಸಿದ್ದೇವೆ ಎನ್ನುತ್ತಾರೆ ಡಿಡಿಪಿಯು.
ದ್ವಿತೀಯ ಪಿಯುಸಿ ಆರ್ಟ್ಸ್ ಪಾಸ್ ಆದವರಿಗೆ ಬೆಸ್ಟ್ ಕೋರ್ಸ್ಗಳ ಆಯ್ಕೆಗಳು ಇಲ್ಲಿವೆ?
ಮರು ಮೌಲ್ಯಮಾಪನ, ಮರು ಎಣಿಕೆಯಲ್ಲಿ ಏನೇ ಬದಲಾವಣೆ ಆಗಬಹುದು ಅಥವಾ ಆಗದಿರಬಹುದು, ಆದರೆ ಈಗ ಸಾಧನೆ ಮಾಡಿರುವ 6 ಮಂದಿ ವಿದ್ಯಾರ್ಥಿಗಳನ್ನು ಗುರುತಿಸಲಾಗದಷ್ಟು ಜಡತ್ವ ಈ ಇಲಾಖೆಗೆ ಏಕೆ ಎನ್ನುವುದು ಪ್ರಶ್ನೆಯಾಗಿದೆ.
ಸಾಧಕ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸದಿದ್ದಲ್ಲಿ ಇತರೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾದರೂ ಹೇಗೆ ಬರುತ್ತದೆ ಎನ್ನುವುದನ್ನು ಪಿಯು ಇಲಾಖೆ ಅರ್ಥ ಮಾಡಿಕೊಳ್ಳಬೇಕಿದೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ನೀಡಿದಷ್ಟು ಆದ್ಯತೆ ಪಿಯು ವಿದ್ಯಾರ್ಥಿಗಳಿಗೆ ನೀಡಿಲ್ಲ. ಅಧಿಕಾರಿಗಳು, ಉಪನ್ಯಾಸಕರ ವೈಫಲ್ಯ, ವಿದ್ಯಾರ್ಥಿಗಳ ಸಾಮರ್ಥ್ಯ ಈ ಎಲ್ಲಾ ಕಾರಣದಿಂದಾಗಿ ಫಲಿತಾಂಶ ಕುಸಿದಿರಬಹುದು. ಒಟ್ಟಿನಲ್ಲಿ ಮುಂದಿನ ಬಾರಿ ಉತ್ತಮ ಫಲಿತಾಂಶ ಪಡೆಯಲು ಇಲಾಖೆಗೆ ಈಗಿನಿಂದಲೇ ಟಾನಿಕ್ ನೀಡಬೇಕಿದೆ.
ಪಿಯುಸಿ ಫಲಿತಾಂಶ ಕುಸಿತಕ್ಕೆ ಸುರೇಶ್ ಕುಮಾರ್ ಹೊಣೆ! ಸಿದ್ದರಾಮಯ್ಯ ಆರೋಪ
ಜಿಲ್ಲೆಯ ಟಾಪರ್ಗಳಿವರು:
ವಿಜ್ಞಾನ ವಿಭಾಗದಲ್ಲಿ ಕುಣಿಗಲ್ ಜ್ಞಾನ ಭಾರತಿ ಪಿಯು ಕಾಲೇಜಿನ ಅಲ್ಮಾಸ್ ಭಾನು 594 ಅಂಕಗಳನ್ನು ಪಡೆದು ಜಿಲ್ಲೆಗೆ ಟಾಪರ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ವಿದ್ಯಾನಿಧಿ ಪಿಯು ಕಾಲೇಜಿನ ತರುಣ್ 594 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ತಿಪಟೂರು ಬಸವೇಶ್ವರ ಪಿಯು ಕಾಲೇಜಿನ ರಾಜಕುಮಾರ್ ರಾಥೋಡ್ 586 ಅಂಕಗಳನ್ನು ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ಬಡತನದಲ್ಲಿಅರಳಿದ ಪ್ರತಿಭೆ:
ಸಿರಾ ತಾಲೂಕಿನ ತಾವರೆಕೆರೆ ಗ್ರಾಮದ ಶ್ರೀ ಸಿದ್ಧಾರ್ಥ ಪಿಯು ಕಾಲೇಜಿನ ಬಡ ವಿದ್ಯಾರ್ಥಿನಿ ಭೂಮಿಕಾ ವಾಣಿಜ್ಯ ವಿಭಾಗದಲ್ಲಿ 570 (ಶೇ.95) ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾಳೆ. ಕರಿಯಾಲ ಗ್ರಾಮದ ಬಡ ಕುಟುಂಬದ ಈಕೆಯ ಸಾಧನೆಗೆ ಗ್ರಾಮಸ್ಥರು ತಲೆ ದೂಗಿದ್ದಾರೆ.
ಇದೇ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಹುಣಸೆಹಳ್ಳಿ ಗ್ರಾಮದ ಆಶಾರಾಣಿ 560 ಅಂಕಗಳನ್ನು ಪಡೆದು (ಶೇ.93.5) ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ. ಪಿಯುಸಿಯಲ್ಲಿ ಉತ್ತಮ ಅಂಕ ಪಡೆದು ಗ್ರಾಮ ಲೆಕ್ಕಾಧಿಕಾರಿಯಾಗಬೇಕು ಎಂಬುದು ಈಕೆಯ ಕನಸಾಗಿತ್ತು. ಆದರೆ ಈಗ ತೆಗೆದುಕೊಂಡಿರುವ ಅಂಕ ಕಡಿಮೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾಳಾದರೂ ಪದವಿ ಕಲಿಯುವ ಆಸೆ ಹೊಂದಿದ್ದಾಳೆ.
ದ್ವಿತೀಯ ಪಿಯು ಇಂಗ್ಲಿಷ್ನಲ್ಲೇ ಹೆಚ್ಚು ವಿದ್ಯಾರ್ಥಿಗಳು ಫೇಲ್.. ಏಕೆ ಗೊತ್ತೇ?