ಆ್ಯಪ್ನಗರ

ಡ್ರೋನ್‌ ಹಿಡಿದು ರಸ್ತೆಗೆ ಬಂದ ತುಮಕೂರಿನ ಎಸ್ಪಿ ವಂಶಿಕೃಷ್ಣ

ಅನಗತ್ಯ ಓಡಾಟಕ್ಕೆ ಮತ್ತಷ್ಟು ಬ್ರೇಕ್‌, ವರ್ತಕರಿಗೆ ಸಾಮಾಜಿಕ ಅಂತರದ ಪಾಠ ಹೇಳುತ್ತಿರುವ ತುಮಕೂರು ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಅವರು ಬೀದಿಗಳಿದು ಡ್ರೋನ್‌ ಚಲಾಯಿಸುವ ಮೂಲಕ ಪೊಲೀಸರ ಕಾರ್ಯಾಚರಣೆಯ ಮೇಲ್ವಿಚಾರಣೆ

Vijaya Karnataka Web 9 Apr 2020, 2:50 pm
ತುಮಕೂರು: ನಗರದಲ್ಲಿ ಪೊಲೀಸರ ಡ್ರೋನ್‌ ಕಣ್ಗಾವಲು ಬಿಗಿಯಾಗಿದ್ದು, ಅನಗತ್ಯವಾಗಿ ಬೀದಿಗೆ ಇಳಿಯುತ್ತಿರುವವರಿಗೆ ಮತ್ತಷ್ಟು ಕಡಿವಾಣ ಹಾಕಲಾಗುತ್ತಿದೆ. ಲಾಕ್‌ಡೌನ್‌ ನಿಯಮ ಸರಿಯಾಗಿ ಪಾಲನೆಯಾಗುತ್ತಿದ್ದ ಎಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಅವರು ಬೀದಿಗಳಿದು ಡ್ರೋನ್‌ ಚಲಾಯಿಸುವ ಮೂಲಕ ಪೊಲೀಸರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.
Vijaya Karnataka Web Tumkur SP
ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಡಾ. ಕೆ. ವಂಶಿಕೃಷ್ಣ


ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರದಂತೆ ತಡೆಯಲು ಹಾಗೂ ಮುಂಜಾಗ್ರತಾ ಕ್ರಮವಾಗಿ ನಗರದ ವಿವಿಧೆಡೆ ಡ್ರೋನ್‌ ಮೂಲಕ ನಿಗಾ ಇರಿಸಲಾಗಿದೆ. ಮಂಗಳವಾರ ಶೆಟ್ಟಿಹಳ್ಳಿ ಗೇಟ್‌ ಬಳಿ ಡ್ರೋನ್‌ ಕ್ಯಾಮೆರಾದಿಂದ ಸಂಚಾರದ ಮಾಹಿತಿ ಪಡೆದ ಅವರು, ಕಾಲ್ನಡಿಗೆಯಲ್ಲಿ ಸಂಚರಿಸಿ ಅನವಶ್ಯಕವಾಗಿ ವಾಹನದಲ್ಲಿ ತಿರುಗಾಡುತ್ತಿದ್ದವರ ವಿಚಾರಣೆ ಮಾಡಿದರು.

ಬಳಿಕ ಶೆಟ್ಟಿಹಳ್ಳಿ ಅಂಡರ್‌ಪಾಸ್‌ ಮೂಲಕ ರಸ್ತೆ ಬದಿಗಳಲ್ಲಿ ತರಕಾರಿ ಮಾರುವವರು ಹಾಗೂ ಗ್ರಾಹಕರಿಗೆ ಸಾಮಾಜಿಕ ಅಂತರದ ಬಗ್ಗೆ ತಿಳುವಳಿಕೆ ಮೂಡಿಸಿದರು. ನಗರದಲ್ಲಿ ಲಾಕ್‌ಡೌನ್‌ ಆರಂಭವಾದಗಿನಿಂದಲೂ ನಿಯಮಿತವಾಗಿ ಡ್ರೋನ್‌ ಕಣ್ಗಾವಲು ಇರಿಸಲಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತಿದೆ.

ಜಿಲ್ಲಾಪೊಲೀಸ್‌ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ ಅವರು ನಗರದಲ್ಲಿ ಡ್ರೋನ್‌ ಚಲಾಯಿಸುವ ಮೂಲಕ ಜನ ಸಂಚಾರದ ಮಾಹಿತಿ ಪಡೆದುಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ