ತುಮಕೂರು: ನಗರದಲ್ಲಿ ಪೊಲೀಸರ ಡ್ರೋನ್ ಕಣ್ಗಾವಲು ಬಿಗಿಯಾಗಿದ್ದು, ಅನಗತ್ಯವಾಗಿ ಬೀದಿಗೆ ಇಳಿಯುತ್ತಿರುವವರಿಗೆ ಮತ್ತಷ್ಟು ಕಡಿವಾಣ ಹಾಕಲಾಗುತ್ತಿದೆ. ಲಾಕ್ಡೌನ್ ನಿಯಮ ಸರಿಯಾಗಿ ಪಾಲನೆಯಾಗುತ್ತಿದ್ದ ಎಂಬ ಆರೋಪಗಳು ಬಂದ ಹಿನ್ನೆಲೆಯಲ್ಲಿ ಸ್ವತಃ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ. ವಂಶಿಕೃಷ್ಣ ಅವರು ಬೀದಿಗಳಿದು ಡ್ರೋನ್ ಚಲಾಯಿಸುವ ಮೂಲಕ ಪೊಲೀಸರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು.
ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರದಂತೆ ತಡೆಯಲು ಹಾಗೂ ಮುಂಜಾಗ್ರತಾ ಕ್ರಮವಾಗಿ ನಗರದ ವಿವಿಧೆಡೆ ಡ್ರೋನ್ ಮೂಲಕ ನಿಗಾ ಇರಿಸಲಾಗಿದೆ. ಮಂಗಳವಾರ ಶೆಟ್ಟಿಹಳ್ಳಿ ಗೇಟ್ ಬಳಿ ಡ್ರೋನ್ ಕ್ಯಾಮೆರಾದಿಂದ ಸಂಚಾರದ ಮಾಹಿತಿ ಪಡೆದ ಅವರು, ಕಾಲ್ನಡಿಗೆಯಲ್ಲಿ ಸಂಚರಿಸಿ ಅನವಶ್ಯಕವಾಗಿ ವಾಹನದಲ್ಲಿ ತಿರುಗಾಡುತ್ತಿದ್ದವರ ವಿಚಾರಣೆ ಮಾಡಿದರು.
ಬಳಿಕ ಶೆಟ್ಟಿಹಳ್ಳಿ ಅಂಡರ್ಪಾಸ್ ಮೂಲಕ ರಸ್ತೆ ಬದಿಗಳಲ್ಲಿ ತರಕಾರಿ ಮಾರುವವರು ಹಾಗೂ ಗ್ರಾಹಕರಿಗೆ ಸಾಮಾಜಿಕ ಅಂತರದ ಬಗ್ಗೆ ತಿಳುವಳಿಕೆ ಮೂಡಿಸಿದರು. ನಗರದಲ್ಲಿ ಲಾಕ್ಡೌನ್ ಆರಂಭವಾದಗಿನಿಂದಲೂ ನಿಯಮಿತವಾಗಿ ಡ್ರೋನ್ ಕಣ್ಗಾವಲು ಇರಿಸಲಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತಿದೆ.
ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ ಅವರು ನಗರದಲ್ಲಿ ಡ್ರೋನ್ ಚಲಾಯಿಸುವ ಮೂಲಕ ಜನ ಸಂಚಾರದ ಮಾಹಿತಿ ಪಡೆದುಕೊಂಡರು.
ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಗೆ ಬರದಂತೆ ತಡೆಯಲು ಹಾಗೂ ಮುಂಜಾಗ್ರತಾ ಕ್ರಮವಾಗಿ ನಗರದ ವಿವಿಧೆಡೆ ಡ್ರೋನ್ ಮೂಲಕ ನಿಗಾ ಇರಿಸಲಾಗಿದೆ. ಮಂಗಳವಾರ ಶೆಟ್ಟಿಹಳ್ಳಿ ಗೇಟ್ ಬಳಿ ಡ್ರೋನ್ ಕ್ಯಾಮೆರಾದಿಂದ ಸಂಚಾರದ ಮಾಹಿತಿ ಪಡೆದ ಅವರು, ಕಾಲ್ನಡಿಗೆಯಲ್ಲಿ ಸಂಚರಿಸಿ ಅನವಶ್ಯಕವಾಗಿ ವಾಹನದಲ್ಲಿ ತಿರುಗಾಡುತ್ತಿದ್ದವರ ವಿಚಾರಣೆ ಮಾಡಿದರು.
ಬಳಿಕ ಶೆಟ್ಟಿಹಳ್ಳಿ ಅಂಡರ್ಪಾಸ್ ಮೂಲಕ ರಸ್ತೆ ಬದಿಗಳಲ್ಲಿ ತರಕಾರಿ ಮಾರುವವರು ಹಾಗೂ ಗ್ರಾಹಕರಿಗೆ ಸಾಮಾಜಿಕ ಅಂತರದ ಬಗ್ಗೆ ತಿಳುವಳಿಕೆ ಮೂಡಿಸಿದರು. ನಗರದಲ್ಲಿ ಲಾಕ್ಡೌನ್ ಆರಂಭವಾದಗಿನಿಂದಲೂ ನಿಯಮಿತವಾಗಿ ಡ್ರೋನ್ ಕಣ್ಗಾವಲು ಇರಿಸಲಾಗಿದ್ದು, ಕಾನೂನು ಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸಲಾಗುತ್ತಿದೆ.
ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ ಅವರು ನಗರದಲ್ಲಿ ಡ್ರೋನ್ ಚಲಾಯಿಸುವ ಮೂಲಕ ಜನ ಸಂಚಾರದ ಮಾಹಿತಿ ಪಡೆದುಕೊಂಡರು.