ಆ್ಯಪ್ನಗರ

ಜುಲೈನಲ್ಲಿ ಕೈಗಾರಿಕೆ ವಸ್ತುಪ್ರದರ್ಶನ

ಮುಂಬರುವ ಜುಲೈ ತಿಂಗಳಲ್ಲಿ ಕಾಸಿಯಾ ಮತ್ತು ಚೇಂಬರ್‌ ಆಫ್‌ ಕಾರ್ಮಸ್‌ ಹಾಗೂ ವಸಂತನರಸಾಪುರ ಸಂಘದ ಸಹಯೋಗತ್ವದಲ್ಲಿ ಕೈಗಾರಿಕೆ ವಸ್ತುಪ್ರದರ್ಶನ ನಡೆಸಲಾಗುವುದು ಎಂದು ಕಾಸಿಯಾ ಅಧ್ಯಕ್ಷ ಬಸವರಾಜ್‌ ತಿಳಿಸಿದರು.

Vijaya Karnataka 30 Mar 2019, 5:00 am
ತುಮಕೂರು: ಮುಂಬರುವ ಜುಲೈ ತಿಂಗಳಲ್ಲಿ ಕಾಸಿಯಾ ಮತ್ತು ಚೇಂಬರ್‌ ಆಫ್‌ ಕಾರ್ಮಸ್‌ ಹಾಗೂ ವಸಂತನರಸಾಪುರ ಸಂಘದ ಸಹಯೋಗತ್ವದಲ್ಲಿ ಕೈಗಾರಿಕೆ ವಸ್ತುಪ್ರದರ್ಶನ ನಡೆಸಲಾಗುವುದು ಎಂದು ಕಾಸಿಯಾ ಅಧ್ಯಕ್ಷ ಬಸವರಾಜ್‌ ತಿಳಿಸಿದರು.
Vijaya Karnataka Web tumkur industrial exhibition in july says kassia president
ಜುಲೈನಲ್ಲಿ ಕೈಗಾರಿಕೆ ವಸ್ತುಪ್ರದರ್ಶನ


ಬಟವಾಡಿಯ ಎಪಿಎಂಸಿ ಯಾರ್ಡ್‌ ಆವರಣದಲ್ಲಿರುವ ಟಿಡಿಸಿಸಿಐ ಕಟ್ಟಡದಲ್ಲಿ ತುಮಕೂರು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಕಾಸಿಯಾ ಮತ್ತು ವಸಂತನಾರಸಪುರ ಕೈಗಾರಿಕಾ ಸಂಘದ ವತಿಯಿಂದ ನಡೆದ ಕೈಗಾರಿಕೋದ್ಯಮಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಕೈಗಾರಿಕೆಗಳು ಎದುರಿಸುತ್ತಿರುವ ಹಲವು ಸಮಸ್ಯೆ ಕುರಿತು ಸಂವಾದ ನಡೆಸಿದರು.

ವಸಂತನರಸಾಪುರ ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್‌ ಮಾತನಾಡಿ, ತುಮಕೂರು ನಗರದ ಆಸ್ತಿ ತೆರಿಗೆಯು ರಾಜ್ಯದಲ್ಲಿಯೇ ಹೆಚ್ಚಿದೆ. ತುಮಕೂರು ಸ್ಮಾಟ್‌ಸಿಟಿಯಾಗಿದೆ. ಅದರ ಅಭಿವೃದ್ಧಿಯ ಯೋಜನೆಗೆ ಚೇಂಬರ್‌ ಸಹಕರಿಸುತ್ತದೆ. ವಸಂತನರಸಾಪುರ ಏಷ್ಯಾದಲ್ಲಿಯೇ ದೊಡ್ಡ ಕೈಗಾರಿಕಾ ಪ್ರದೇಶವಾಗಿದೆ. 14 ಸಾವಿರ ಎಕರೆ ಇದ್ದ ಕೈಗಾರಿಕಾ ಪ್ರದೇಶವನ್ನು ಸರಕಾರ ಈಗ 22 ಸಾವಿರ ಎಕರೆಗೆ ವಿಸ್ತರಿಸಿರುವುದರಿಂದ ಜಿಲ್ಲೆಗೆ ಹಲವು ಬಹುರಾಷ್ಟ್ರೀಯ ಕಂಪನಿಗಳು ಬರುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಉದ್ಯೋಗ ಅವಕಾಶಗಳು ಹೆಚ್ಚುತ್ತವೆ. ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರವನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದು ತಿಳಿಸಿದರು.

ಜಿಎಸ್‌ಟಿಯಲ್ಲಿನ ಸಮಸ್ಯೆಗಳನ್ನು ಆಡಿಟರ್‌ ಎಸ್‌.ಪ್ರಕಾಶ್‌ ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎಚ್‌.ಜಿ.ಚಂದ್ರಶೇಖರ್‌, ಕಾರ್ಯದರ್ಶಿ ಟಿ.ಜೆ.ಗಿರೀಶ್‌, ಮಾಜಿ ಅಧ್ಯಕ್ಷರಾದ ಸುಜ್ಞಾನ್‌ ಹಿರೇಮಠ್‌, ಪಿ.ಪಿ.ಮಲ್‌, ಸಾಗರನಹಳ್ಳಿ ಪ್ರಭು, ಟಿ.ಆರ್‌.ಲೋಕೇಶ್‌, ಸುರೇಂದ್ರ ಷಾ ಮತ್ತು ಕಾಸಿಯಾದ ಪದಾಧಿಕಾರಿಗಳು ಮತ್ತು ಟಿಡಿಸಿಸಿಐನ ಸದಸ್ಯರು ಹಾಗೂ ತುಮಕೂರಿನ ವರ್ತಕರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ