ಆ್ಯಪ್ನಗರ

ಪರಮೇಶ್ವರ್‌ ಸಿಎಂ ಆದರೆ ಪೊಲೀಸರು ನಮ್ಮನ್ನು ಮೂತ್ರ ಮಾಡಲೂ ಬಿಡಲ್ಲ: ಬಸವರಾಜು ವ್ಯಂಗ್ಯ

ಸುಮಲತಾ ಒಬ್ಬ ಹೈಲಿ ಡಿಗ್ನಿಫೈಡ್‌ ಮಹಿಳಾ ಸಂಸದೆ, ಅವರು ಸಂಸತ್ತಿನಲ್ಲಿ ಮಾತನಾಡುವ ಗಾಂಭೀರ್ಯತೆ ನೋಡಿದರೆ ನಾವು ಹೆಮ್ಮೆ ಪಡಬೇಕು. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಆ ಹೆಣ್ಣುಮಗಳ ಬಗ್ಗೆ ಹಾಗೆ ಹೇಳಬಾರದಿತ್ತು ಎಂದರು.

Vijaya Karnataka Web 8 Jul 2021, 9:53 pm
ತುಮಕೂರು: ಡಾ.ಜಿ.ಪರಮೇಶ್ವರ್‌ ಮುಖ್ಯಮಂತ್ರಿಯಾದರೆ ಪೊಲೀಸರು ನಮಗೆ ಮೂತ್ರ ಮಾಡಲೂ ಬಿಡುವುದಿಲ್ಲಎಂದು ಸಂಸದ ಜಿ.ಎಸ್‌.ಬಸವರಾಜ್‌ ವ್ಯಂಗ್ಯವಾಡಿದರು.
Vijaya Karnataka Web ಜಿಎಸ್‌ ಬಸವರಾಜ್‌
ಜಿಎಸ್‌ ಬಸವರಾಜ್‌


ನಗರದಲ್ಲಿಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿಅವರ ಹೈಕಮಾಂಡ್‌ ಒಪ್ಪಿದರೆ ಡಿಕೆಶಿನೂ ಸಿಎಂ ಆಗಬಹುದು. ಆದರೆ ಡಾ.ಜಿ.ಪರಮೇಶ್ವರ್‌ ಕೇವಲ ಡಿಸಿಎಂ ಆದಾಗಲೇ ಝಿರೋ ಟ್ರಾಫಿಕ್‌ ಮಾಡಿಕೊಂಡು ಓಡಾಡುತಿದ್ದರು. ಇನ್ನೇನು ಸಿಎಂ ಆಗಿಬಿಟ್ಟರೆ ಇಡೀ ತುಮಕೂರು ಜಿಲ್ಲೆನೇ ಝಿರೋ ಮಾಡಿಬಿಡ್ತಾರೆ. ಸಿಎಂ ಬರುತ್ತಿದ್ದಾರೆ ಎಂದರೆ ಪೊಲೀಸರು ನಮ್ಮನ್ನ ಮೂತ್ರ ಮಾಡಲು ಹೋಗಲೂ ಬಿಡಲ್ಲಎಂದರು.

ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಹಾಗಾಗಿ ಯಡಿಯೂರಪ್ಪರ ಬಗ್ಗೆ ಏಕವಚನದಲ್ಲಿಮಾತನಾಡುತ್ತಾರೆ. ಜನರನ್ನು ಆಕರ್ಷಿಸಲು ಈ ರೀತಿ ಮಾತನಾಡಬಹುದು ಎಂದು ವಾಗ್ದಾಳಿ ನಡೆಸಿದರು.

ಯಡಿಯೂರಪ್ಪ ಸ್ವಂತ ಕ್ವಾಲಿಟಿ ಹೊಂದಿದ್ದಾರೆ, ಪಕ್ಷದಲ್ಲಿಹಿಡಿತ ಸಾಧಿಸಿದ್ದಾರೆ, ಪ್ರಬಲ ಸಮುದಾಯವನ್ನು ಪ್ರತಿನಿಧಿಸುತಿದ್ದಾರೆ. ಯಡಿಯೂರಪ್ಪರನ್ನು ಬಿಟ್ಟರೆ ಪರ್ಯಾಯ ನಾಯಕರು ಬಿಜೆಪಿಯಲ್ಲಿಇಲ್ಲಎಂದರು.

ಪ್ರಜ್ವಲ್‌ ರೇವಣ್ಣಗೆ ಉತ್ತಮ ಭವಿಷ್ಯ

ಹಾಸನ ಸಂಸದ, ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣಗೆ ಉತ್ತಮ ಭವಿಷ್ಯವಿದೆ. ಅವರನ್ನ ಕೇವಲ ಸುಮಲತಾ ಮಾತ್ರ ಹೊಗಳಲಿಲ್ಲ, ನಾನು ಹೊಗಳಿದ್ದೇನೆ, ಆತ ಸಂಸತ್ತಿನಲ್ಲಿಮಾತಾಡಿದ್ದು ನೋಡಿ ನಾನೂ ಬೆನ್ನು ತಟ್ಟಿ ಬಂದಿದ್ದೆನೆ, ಇದನ್ನೇ ಮುಂದುವರಿಸು ಎಂದಿದ್ದೇನೆ ಎಂದು ಜಿ.ಎಸ್‌.ಬಸವರಾಜು ಹೇಳಿದರು.

ಸುಮಲತಾ ಒಬ್ಬ ಹೈಲಿ ಡಿಗ್ನಿಫೈಡ್‌ ಮಹಿಳಾ ಸಂಸದೆ, ಅವರು ಸಂಸತ್ತಿನಲ್ಲಿ ಮಾತನಾಡುವ ಗಾಂಭೀರ್ಯತೆ ನೋಡಿದರೆ ನಾವು ಹೆಮ್ಮೆ ಪಡಬೇಕು. ಆದರೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ಆ ಹೆಣ್ಣುಮಗಳ ಬಗ್ಗೆ ಹಾಗೆ ಹೇಳಬಾರದಿತ್ತು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ