ಆ್ಯಪ್ನಗರ

ಇ-ತಂತ್ರಾಂಶದಲ್ಲಿ ದೋಷವಿಲ್ಲದ ಮಾಹಿತಿ ದಾಖಲಿಸಿ

ಜನನ, ಮರಣ ಹಾಗೂ ನಿರ್ಜೀವ ಜನನಗಳ ಮಾಹಿತಿಯನ್ನು ಇ- ತಂತ್ರಾಂಶದಲ್ಲಿ ಯಾವುದೇ ದೋಷವಿಲ್ಲದಂತೆ ದಾಖಲು ಮಾಡಬೇಕೆಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ. ರಾಜಣ್ಣ ಅವರು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸೂಚನೆ ನೀಡಿದರು.

Vijaya Karnataka 16 Feb 2019, 5:00 am
ತುಮಕೂರು: ಜನನ, ಮರಣ ಹಾಗೂ ನಿರ್ಜೀವ ಜನನಗಳ ಮಾಹಿತಿಯನ್ನು ಇ- ತಂತ್ರಾಂಶದಲ್ಲಿ ಯಾವುದೇ ದೋಷವಿಲ್ಲದಂತೆ ದಾಖಲು ಮಾಡಬೇಕೆಂದು ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎಂ. ರಾಜಣ್ಣ ಅವರು ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಸೂಚನೆ ನೀಡಿದರು.
Vijaya Karnataka Web tumkur put correct information in e data
ಇ-ತಂತ್ರಾಂಶದಲ್ಲಿ ದೋಷವಿಲ್ಲದ ಮಾಹಿತಿ ದಾಖಲಿಸಿ


ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ಅಡಿಯಲ್ಲಿ 'ಇ-ತಂತ್ರಾಂಶದ ಅಡಿಯಲ್ಲಿ ಜನನ, ಮರಣ ಮತ್ತು ನಿರ್ಜೀವ ಜನನಗಳ ಘಟನೆಗಳನ್ನು ಎಂಟ್ರಿ ಮಾಡುವ ಕುರಿತು ಹಮ್ಮಿಕೊಂಡಿದ್ದ ತರಬೇತಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನೋಂದಣಿ ಮಾಡಿರುವುದರಲ್ಲಿ ಸಾಕಷ್ಟು ತಪ್ಪುಗಳು ಕಂಡುಬಂದಿವೆ. ಅದರಿಂದ ಪರಿಪೂರ್ಣ ಮಾಹಿತಿ ಲಭ್ಯವಾಗದೆ, ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಹಾಗಾಗಿ ಎಲ್ಲರೂ ಸಮರ್ಪಕವಾಗಿ ದೋಷವಿಲ್ಲದಂತೆ ಮಾಹಿತಿ ನೋಂದಣಿ ಮಾಡಬೇಕು ಎಂದು ಸೂಚಿಸಿದರು.

ಇ-ತಂತ್ರಾಂಶದ ಮೂಲಕ ಸುಲಲಿತ ಜನನ ಮರಣಗಳ ನೋಂದಣಿ ಕೈಗೆತ್ತಿಕೊಳ್ಳಲಾಗಿದೆ. ಅದಾಗ್ಯೂ ಸಣ್ಣ-ಪುಟ್ಟ ತಪ್ಪುಗಳಾಗಿದ್ದು, ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ತರಬೇತಿ ಏರ್ಪಡಿಸಲಾಗಿದೆ ಎಂದ ಅವರು, ಪ್ರತಿಯೊಬ್ಬರೂ ಜನನ ಮರಣದ ಮಾಹಿತಿಯನ್ನು ನೋಂದಾಯಿಸುವಂತೆ ಸೂಚಿಸಿದರು.

ಸರಕಾರದಿಂದ ಲಭ್ಯವಾಗುವ ನಾನಾ ಸೌಲಭ್ಯಗಳಿಗೆ ಜನನ, ಮರಣ ನೋಂದಣಿ ಪ್ರಮಾಣ ಪತ್ರ ಕಡ್ಡಾಯವಾಗಿದ್ದು, ಜನನ ಮತ್ತು ಮರಣದ ಮಾಹಿತಿ ಇ-ತಂತ್ರಾಂಶದಲ್ಲಿ ನೋಂದಣಿಯಾಗದಿದ್ದಲ್ಲಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ಹಾಗಾಗಿ ಯಾವುದೇ ಜನನ, ಮರಣ ಘಟನೆಗಳನ್ನು ಬಿಡದೆ ದಾಖಲಿಸಬೇಕು ಎಂದು ತಿಳಿಸಿದರು.

ಡಾಟಾ ಎಂಟ್ರಿ ಆಪರೇಟರ್‌ಗಳಿಗೆ ಜನನ, ಮರಣ ಮತ್ತು ನಿರ್ಜೀವ ಜನನಗಳ ಘಟನೆಗಳನ್ನು ನೋಂದಣಿ ಮಾಡುವ ಬಗ್ಗೆ ತರಬೇತಿ ನೀಡಿದ ಸಹಾಯಕ ಸಾಂಖ್ಯಿಕ ಅಧಿಕಾರಿ ಬಿ.ಲೋಕೇಶ್‌ಕುಮಾರ್‌, ಎಂಟ್ರಿ ಮಾಡಿದ ಮಾಹಿತಿಗಳನ್ನು ಸೇವ್‌ ಮಾಡುವುದರ ಮೂಲಕ ಪರಿಶೀಲನೆಗಾಗಿ ಹಾಗೂ ಅನುಮೋದನೆಗಾಗಿ ನೋಂದಣಾಧಿಕಾರಿಗಳು / ಉಪ ನೋಂದಣಾಧಿಕಾರಿಗಳಿಗೆ ಕಳುಹಿಸಬೇಕು. ಅಧಿಕಾರಿಗಳು ಅನುಮೋದನೆ ಮಾಡಿ ತಮ್ಮ ಡಿಜಿಟಲ್‌ ಸಹಿ ಮಾಡಿದ ನಂತರ ಡಾಟಾ ಎಂಟ್ರಿ ಆಪರೇಟರ್‌ಗಳು ಜನನ-ಮರಣ ಪ್ರಮಾಣ ಪತ್ರಗಳನ್ನು ಸೃಜಿಸಬೇಕು ಎಂದು ಹೇಳಿದರು.

ಈ ವೇಳೆ ಸಹಾಯಕ ನಿರ್ದೇಶಕಿ ಬಿ.ಇ. ಸುವರ್ಣ, ತಾಲೂಕು ಯೋಜನಾಧಿಕಾರಿ ಡಿ. ರಂಗಸ್ವಾಮಿ, ವಿಷಯ ನಿರ್ವಾಹಕ ಟಿ.ಆರ್‌. ಶಿವಕುಮಾರ್‌ ಸೇರಿದಂತೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳು, ಡೆಟಾ ಎಂಟ್ರಿ ಆಪರೇಟರ್‌ಗಳು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ