ಆ್ಯಪ್ನಗರ

ತರೀಕೆರೆಯಲ್ಲಿ ಪೊಲೀಸರಿಂದ ಗಣಪತಿ ವಿಸರ್ಜನೆ, 144 ಸೆಕ್ಷನ್‌ ಜಾರಿ

ತರೀಕೆರೆಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಮಂಗಳವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷ ನ್‌ ಜಾರಿಗೊಳಿಸಲಾಗಿದೆ.

Vijaya Karnataka Web 19 Sep 2018, 8:08 am
ತರೀಕೆರೆ: ಹಿಂದೂ ಮಹಾಸಭಾ ಗಣಪತಿಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. ಆದರೆ ಪೊಲೀಸರ ಸಕಾಲಿಕ ಮಧ್ಯಪ್ರವೇಶದಿಂದ ಪರಿಸ್ಥಿತಿಗೆ ವಿಕೋಪಕ್ಕೆ ಹೋಗುವುದು ತಪ್ಪಿತು.
Vijaya Karnataka Web 1


ತರೀಕೆರೆಯಲ್ಲಿ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಮಂಗಳವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷ ನ್‌ ಜಾರಿಗೊಳಿಸಲಾಗಿದೆ.

ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ಕಾರ್ಯಕರ್ತರು ಮಂಗಳವಾರ ಶೋಭಾಯಾತ್ರೆ ನಡೆಸಿ ಹಿಂದೂ ಮಹಾಸಭಾ ಗಣಪತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆ ಪಟ್ಟಣದ ಕೋಡಿಕ್ಯಾಂಪ್‌ ಪ್ರಾರ್ಥನಾ ಮಂದಿರದ ಬಳಿ ಬಂದಾಗ ಕೆಲ ದುಷ್ಕರ್ಮಿಗಳು ಕಲ್ಲು ತೂರಿದ ಕಾರಣ ಮೆರವಣಿಗೆಯಲ್ಲಿದ್ದವರೂ ಪ್ರತಿಯಾಗಿ ಕಲ್ಲು ತೂರಿದರು. ಕೂಡಲೇ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು. ಅಲ್ಲದೇ ಆಯ್ದ ಕಾರ‍್ಯಕರ್ತರೊಂದಿಗೆ ಪೊಲೀಸರೇ ಗಣಪತಿಯನ್ನು ರಾಮಣ್ಣ ಕೆರೆಯಲ್ಲಿ ವಿಸರ್ಜಿಸುವ ಮೂಲಕ ಉತ್ಸವವನ್ನು ಸಮಾಪನಗೊಳಿಸಿದರು.

ರಸ್ತೆ ತಡೆ

ಹಿಂದೂ ಮಹಾಸಭಾ ಗಣಪತಿ ವಿಸರ್ಜನೆಯನ್ನು ಸಂಪ್ರದಾಯದಂತೆ ಚಿಕ್ಕಕೆರೆಯಲ್ಲಿ ವಿಸರ್ಜಿಸುತ್ತೇವೆ ಎಂದು ಮೆರವಣಿಗೆಯಲ್ಲಿ ಕಾರ್ಯಕರ್ತರು ಹಠ ಹಿಡಿದಿದರು. ಆ ಜಾಗದಲ್ಲಿ ಪ್ರಾರ್ಥನಾ ಮಂದಿರ ಇರುವ ಕಾರಣ ಪೊಲೀಸರು ಸಮೀಪದ ರಾಮಣ್ಣ ಕೆರೆಯಲ್ಲಿ ಗಣಪತಿ ವಿಸರ್ಜಿಸುವಂತೆ ಮನವಿ ಮಾಡಿದರು. ಒಪ್ಪದ ಕಾರ್ಯಕರ್ತರು ರಸ್ತೆ ತಡೆ ನಡೆಸಿದ ಘಟನೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ