ಆ್ಯಪ್ನಗರ

ಮತದಾನ ಹೆಚ್ಚಾದರೂ ಕಡಿಮೆಯಾದರೂ ಬಿಜೆಪಿಗೆ ಲಾಭ - ಬಿವೈ ವಿಜಯೇಂದ್ರ!

ವಿಶೇಷವಾಗಿ ಯುವಕರು ಹಾಗೂ ಮಹಿಳೆಯರು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದ್ದು, ಶೇಕಡವಾರು ಮತದಾನ ಹೆಚ್ಚಾದರೂ ಕಡಿಮೆಯಾದರೂ ಬಿಜೆಪಿಗೆ ಲಾಭವಾಗಲಿದೆ ಎಂದು ವಿಜಯೇಂದ್ರ ವಿಶ್ಲೇಷಿಸಿದ್ದಾರೆ.

Vijaya Karnataka 3 Nov 2020, 6:17 pm
ತುಮಕೂರು: ಕಳೆದ ಮೂರು ವಾರಗಳಿಂದ ಶಿರಾ ಕ್ಷೇತ್ರದಲ್ಲಿ ಇದ್ದುಕೊಂಡು ಪಕ್ಷದ ಎಲ್ಲಾ ಮುಖಂಡರು ಮತ ಕೇಳಿದ್ದೇವೆ.
Vijaya Karnataka Web by vijayendra
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ

ಇಂದು (ಮಂಗಳವಾರ) ಅತಿ ಹೆಚ್ಚು ಮತದಾನ ಆಗಿರುವುದನ್ನ ನೋಡಿ ಸಂತೋಷವಾಗಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ.

ಶಿರಾ ಉಪಚುನಾವಣೆ ಹಿನ್ನೆಲೆಯಲ್ಲಿ ತುಮಕೂರು ತಾಲೂಕಿನ ಬೆಳ್ಳಾವಿ ಕ್ರಾಸ್ ಬಳಿ ವಿಜಯೇಂದ್ರ ಹೇಳಿಕೆ. ಮಾತನಾಡಿದ ಅವರು, ವಿಶೇಷವಾಗಿ ಯುವಕರು ಹಾಗೂ ಮಹಿಳೆಯರು ಅತ್ಯಂತ ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಶೇಕಡವಾರು ಮತದಾನ ಹೆಚ್ಚಾದರೂ ಕಡಿಮೆಯಾದರೂ ಬಿಜೆಪಿಗೆ ಲಾಭ ಎಂದು ವಿಶ್ಲೇಷಿಸಿದರು.

ನಾವು ಅಂದುಕೊಂಡ ಅಂತರಕ್ಕಿಂತ ಹೆಚ್ಚಿನ ಅಂತರದಲ್ಲಿ ಮತದಾರರು ನಮ್ಮನ್ನು ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ. ಹಿಂದೆ ಬಿಜೆಪಿ ನಗರ ಪ್ರದೇಶಕ್ಕೆ ಸೀಮಿತ ಅಂತ ಹೇಳುತ್ತಿದ್ದರು. ಆದರೆ ಈಗ ಟ್ರೆಂಡ್ ಬದಲಾಗಿದೆ. ಎಲ್ಲಾ ಪ್ರದೇಶ ಹಾಗೂ ಜಾತಿಗಳು ಬಿಜೆಪಿಯನ್ನು ಬೆಂಬಲಿಸುತ್ತಿವೆ ಎಂದು ಅವರು ತಿಳಿಸಿದರು.

ಆರ್‌.ಆರ್‌ ನಗರ, ಶಿರಾ ಬೈಎಲೆಕ್ಷನ್: ನೀರಸ ಮತದಾನ, ಅಭ್ಯರ್ಥಿಗಳಿಗೆ ಕಾಡ್ತಿದೆ ಆತಂಕ
ಶಿರಾ ಕ್ಷೇತ್ರದಲ್ಲಿ ಸರಿ ಸುಮಾರು ಶೇ.85ರಷ್ಟು ಮತದಾನವಾಗುವ ಸಾಧ್ಯತೆ ಇದೆ. ಇಲ್ಲಿ ನಿಶ್ಚಿತವಾಗಿ ಬಿಜೆಪಿ ಗೆಲುವು ಸಾಧಿಸಲಿದೆ. ಚುನಾವಣೆ ಆರಂಭದ ದಿನದಲ್ಲಿ 5-6 ಸಾವಿರ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿತ್ತು. ಮತದಾನಕ್ಕೆ ಐದಾರು ದಿನ ಬಾಕಿ ಇರುವಾಗ 10-15 ಸಾವಿರ ಅಂತರದಲ್ಲಿ ಗೆಲ್ಲುವ ವಿಶ್ವಾಸ ಮೂಡಿತು. ಇಂದು ಮತದಾನವಾಗಿದ್ದು, 20-25 ಸಾವಿರದ ಅಂತರದಲ್ಲಿ ಗೆಲ್ಲುವ ಸುಳಿವು ಸಿಕ್ಕಿದೆ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ