ಆ್ಯಪ್ನಗರ

ನಾವೆಲ್ಲ ಸಂಸಾರಸ್ಥರು; ಒಂದು ವಾರನೂ ಹೆಂಡತಿಯನ್ನು ಬಿಟ್ಟು ಇರಲ್ಲ: ಸಚಿವ ಈಶ್ವರಪ್ಪ

ತುರುವೇಕೆರೆಯ ವಿರಕ್ತ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಚಿವ ಈಶ್ವರಪ್ಪ ನಾವೆಲ್ಲ ಸಂಸಾರಸ್ಥರು. ಒಂದು ವಾರ ಹೆಂಡ್ತಿನ ಬಿಟ್ಟು ಇರಲ್ಲ ಎಂದಿದ್ದಾರೆ. ಸನ್ಯಾಸಿಗಳ ಎದುರೇ ಸಚಿವರು ಭಾಷಣ ಮಾಡುವಾಗ ಈ ರೀತಿ ಹೇಳಿಕೆ ನೀಡಿದ್ದಾರೆ.

Vijaya Karnataka Web 12 Nov 2019, 4:45 pm
ತುಮಕೂರು: ಸರ್ವ ಸಂಗ ಪರಿತ್ಯಾಗಿಗಳ ಮುಂದೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೆಂಡತಿ ಕುರಿತು ಮಾತುಗಳನ್ನಾಡಿದ್ದಾರೆ. ತುರುವೇಕೆರೆಯಲ್ಲಿ ನಡೆಯುತ್ತಿರುವ ವಿರಕ್ತ ಮಠದ ಕಾರ್ಯಕ್ರಮದಲ್ಲಿ ಈಶ್ವರಪ್ಪ ಈ ಹಾಸ್ಯಭರಿತ ಹೇಳಿಕೆ ನೀಡಿದ್ದಾರೆ.
Vijaya Karnataka Web ks eshwarappa


ಈ ಸುದ್ದಿ ಓದಿ: ಸಿದ್ದರಾಮಯ್ಯ ಮತ್ತೆ ಸಿಎಂ ಆಗಲು ತಿರುಕನ ಕನಸು ಕಾಣುತ್ತಿದ್ದಾರೆ: ಈಶ್ವರಪ್ಪ ವ್ಯಂಗ್ಯ

ನಾವೆಲ್ಲ ಸಂಸಾರಸ್ಥರು. ಒಂದು ವಾರನೂ ಹೆಂಡತಿಯನ್ನು ಬಿಟ್ಟು ಇರಲ್ಲ ಎಂದು ಸ್ವಾಮೀಜಿಗಳ ಮುಂದೆ ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಭಾಷಣ ಮಾಡುವ ವೇಳೆ ಈಶ್ವರಪ್ಪ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಬಿಡ್ತೀವಾ? ಎಂದೂ ನಂತರ ಹೇಳಿ ಹಾಸ್ಯ ಮಾಡಿದ್ದಾರೆ.

ಇದನ್ನೂ ಓದಿ: ಯಾವ ಕಾರಣಕ್ಕೂ ಮೋಡ ಬಿತ್ತನೆ ಮುಂದುವರಿಸಬಾರದು: ಈಶ್ವರಪ್ಪ ಆಗ್ರಹ

ಬಳಿಕ, ಸ್ವಾಮೀಜಿಗಳ ಬಗ್ಗೆ ಮಾತನಾಡಿದ ಸಚಿವ ಈಶ್ವರಪ್ಪ, ಸ್ವಾಮೀಜಿಗಳು ಮದುವೆಯನ್ನೇ ಆಗಲ್ಲ. ಸ್ವಾಮೀಜಿ ಆಗುವ ಮುನ್ನ ಬ್ರಹ್ಮಚರ್ಯ ಅನುಸರಿಸ್ತಾರೆ. ಇಂಥವರನ್ನು ನಾವು ತ್ಯಾಗಿಗಳು ಅನ್ನುತ್ತೇವೆ. ನಾವೆಲ್ಲ ಭೋಗಿಗಳು. ನಮ್ಮ ಜೀವನದ ಎಲ್ಲಾ‌ ಆನಂದವನ್ನು ನಾವು ಕಾಣುತ್ತೇವೆ ಎಂದೂ ತುರುವೇಕೆರೆಯಲ್ಲಿ ಹೇಳಿದ್ದಾರೆ.

Episode 26 Highlights: ಎರಡನೇ ಮದುವೆ ಬಗ್ಗೆ ಹೇಳಿದ ಆರ್‌ ಜೆ ಪೃಥ್ವಿ

ಇನ್ನು, ತ್ಯಾಗಿಗಳು ಆನಂದ ಅನುಭವಿಸಿದಂತಹ ಭೋಗಿಗಳಿಗೆ ಇನ್ನೂ ಒಳ್ಳೆದಾಗಲಿ ಎಂದು ಆಶೀರ್ವಾದ ಮಾಡುತ್ತಾರೆ ಎಂದು ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ನಡೆಯುತ್ತಿರುವ ವಿರಕ್ತ ಮಠದ ಕಾರ್ಯಕ್ರಮದ ಭಾಷಣದಲ್ಲಿ ಈಶ್ವರಪ್ಪ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ