ಜನರಿಗೆ ಹತ್ತಿರವಾಗುವ ಖಾತೆ ಕೇಳಿದ್ದೇನೆ: ನೂತನ ಸಚಿವ ಮಾಧುಸ್ವಾಮಿ
ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ ಅಸಮಾಧಾನ ಸಹಜ. ಮುಂದೆ ಎಲ್ಲವೂ ಸರಿಹೋಗಲಿದೆ. ಯಾರೂ ತೀಕ್ಷ್ಣ ವಾಗಿ ಅಸಮಾಧನಗೊಂಡಿಲ್ಲ. ಕೆಲವರಿಂದ ಪಕ್ಷ ಪ್ರಯೋಜನ ತೆಗೆದುಕೊಂಡಿದೆ. ಅಂಥವರಿಗೆ ನಿಗಮ ಮಂಡಳಿ ಜವಾಬ್ದಾರಿ ಕೊಡಬಹುದು ಎಂದು ತಿಳಿಸಿದರು.
Vijaya Karnataka Web 20 Aug 2019, 7:30 pm
ತುಮಕೂರು: ಸಿದ್ದಗಂಗಾ ಮಠದ ಶ್ರೀಗಳಾದ ಶಿವಕುಮಾರ ಸ್ವಾಮೀಜಿಗಳು ಇಲ್ಲದಿರುವುದು ಈ ಸಂದರ್ಭದಲ್ಲಿ ಕಾಡುತ್ತಿದೆ ಎಂದು ನೂತನ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ನೂತನ ಸಚಿವ ಜೆ.ಸಿ.ಮಾಧುಸ್ವಾಮಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶ್ರಿಗಳು ಇಲ್ಲದಿರುವುದು ಕಾಡುತ್ತಿದೆ. ಅವರ ಆಶೀರ್ವಾದಿಂದ ಬೆಳೆದವರು ನಾವು. ಈಗ ಸಚಿವನಾಗಿದ್ದೇನೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.
ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಸಮರ್ಪಕ ವಾಗಿ ಹರಿಸುವ ಕನಸಿದೆ. ಎತ್ತಿನಹೊಳೆ ಯೋಜನೆ ನೀರನ್ನೂ ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಲೋಕಸಭಾ
ಚುನಾವಣೆ ಸಂದರ್ಭದಲ್ಲಿ ನೀರಾವರಿ ಬಗ್ಗೆ ಆಶ್ವಾಸನೆ ಕೊಟ್ಟಿದ್ದೇವೆ. ಆ ಭರವಸೆ ಈಡೇರಿಸಲು ಹೆಚ್ಚಿನ ಆಸಕ್ತಿ ವಹಿಸಲಾಗುವುದು. ಈ ಬಾರಿ ಹೇಮಾವತಿ ನೀರು ಸಮರ್ಪಕವಾಗಿ ಬರುತ್ತಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಗ್ರಾಮೀಣ ಜನರಿಗೆ ಹತ್ತಿತವಾಗುವಂತಹ ಖಾತೆ ಕೇಳಿದ್ದೆನೆ ಮುಖ್ಯಮಂತ್ರಿಗಳು ಯಾವ ಖಾತೆ ಕೊಡುತ್ತಾರೆ ಗೊತ್ತಿಲ್ಲ. ನೋಡೋಣ ಎಂದು ಜೆಸಿ ಮಾಧುಸ್ವಾಮಿ ಹೇಳಿದರು.
ನೂತನ ಸಚಿವ ಜೆ.ಸಿ.ಮಾಧುಸ್ವಾಮಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಶ್ರಿಗಳು ಇಲ್ಲದಿರುವುದು ಕಾಡುತ್ತಿದೆ. ಅವರ ಆಶೀರ್ವಾದಿಂದ ಬೆಳೆದವರು ನಾವು. ಈಗ ಸಚಿವನಾಗಿದ್ದೇನೆ. ಯಾವ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದರು.
ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಸಮರ್ಪಕ ವಾಗಿ ಹರಿಸುವ ಕನಸಿದೆ. ಎತ್ತಿನಹೊಳೆ ಯೋಜನೆ ನೀರನ್ನೂ ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು. ಲೋಕಸಭಾ
ಚುನಾವಣೆ ಸಂದರ್ಭದಲ್ಲಿ ನೀರಾವರಿ ಬಗ್ಗೆ ಆಶ್ವಾಸನೆ ಕೊಟ್ಟಿದ್ದೇವೆ. ಆ ಭರವಸೆ ಈಡೇರಿಸಲು ಹೆಚ್ಚಿನ ಆಸಕ್ತಿ ವಹಿಸಲಾಗುವುದು. ಈ ಬಾರಿ ಹೇಮಾವತಿ ನೀರು ಸಮರ್ಪಕವಾಗಿ ಬರುತ್ತಿದೆ ಎಂದು ಮಾಧುಸ್ವಾಮಿ ತಿಳಿಸಿದರು.
ಗ್ರಾಮೀಣ ಜನರಿಗೆ ಹತ್ತಿತವಾಗುವಂತಹ ಖಾತೆ ಕೇಳಿದ್ದೆನೆ ಮುಖ್ಯಮಂತ್ರಿಗಳು ಯಾವ ಖಾತೆ ಕೊಡುತ್ತಾರೆ ಗೊತ್ತಿಲ್ಲ. ನೋಡೋಣ ಎಂದು ಜೆಸಿ ಮಾಧುಸ್ವಾಮಿ ಹೇಳಿದರು.