ಆ್ಯಪ್ನಗರ

ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆ; ಸಿರಾದಲ್ಲಿ ವಿಜಯೋತ್ಸವ

ವಿಂಗ್‌ ಕಮಾಂಡರ್‌ ಅಭಿನಂದನ್‌ ಶುಕ್ರವಾರ ಪಾಕಿಸ್ತಾನದಿಂದ ಬಿಡುಗಡೆಯಾಗಿ ಭಾರತಕ್ಕೆ ವಾಪಸಾದ ಹಿನ್ನೆಲೆಯಲ್ಲಿ ಸಿರಾ ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಸರ್ಕಲ್‌ನಲ್ಲಿ ಮಾಜಿ ಸೈನಿಕ ದೇವರಾಜು ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.

Vijaya Karnataka 2 Mar 2019, 5:00 am
ಸಿರಾ: ವಿಂಗ್‌ ಕಮಾಂಡರ್‌ ಅಭಿನಂದನ್‌ ಶುಕ್ರವಾರ ಪಾಕಿಸ್ತಾನದಿಂದ ಬಿಡುಗಡೆಯಾಗಿ ಭಾರತಕ್ಕೆ ವಾಪಸಾದ ಹಿನ್ನೆಲೆಯಲ್ಲಿ ಸಿರಾ ನಗರದ ಕೊಲ್ಲಾಪುರದಮ್ಮ ದೇವಸ್ಥಾನದ ಸರ್ಕಲ್‌ನಲ್ಲಿ ಮಾಜಿ ಸೈನಿಕ ದೇವರಾಜು ಅವರ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
Vijaya Karnataka Web wing commander abhinandan release vijayotsav in sira
ವಿಂಗ್‌ ಕಮಾಂಡರ್‌ ಅಭಿನಂದನ್‌ ಬಿಡುಗಡೆ; ಸಿರಾದಲ್ಲಿ ವಿಜಯೋತ್ಸವ


ಮಾಜಿ ಸೈನಿಕ ದೇವರಾಜು ಮಾತನಾಡಿ, ಇದು ಭಯೋತ್ಪಾದನೆ ನಿಗ್ರಹ ವಿಷಯದಲ್ಲಿ ಭಾರತ ನಡೆಸಿದ ಹೋರಾಟಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಿಕ್ಕಿದ ದೊಡ್ಡಮಟ್ಟದ ರಾಜತಾಂತ್ರಿಕ ಗೆಲುವಾಗಿದೆ. ನಮ್ಮ ಸೈನಿಕರನ್ನು ಮುಟ್ಟಿದರೆ ಯಾವ ರೀತಿ ಉತ್ತರ ನೀಡುತ್ತೇವೆ ಎಂಬುವುನ್ನು ಭಾರತ ಇಂದು ಪಾಕಿಸ್ತಾನಕ್ಕೆ ತಿಳಿಸಿಕೊಟ್ಟಿದೆ. ದೇಶದ ಗಡಿಗಾಗಿ ಹೋರಾಟ ನಡೆಸುವ ಸೈನಿಕರಿಗೆ ಎಂದೆಂದಿಗೂ ದೇಶದ ಜನತೆಯ ಬೆಂಬಲವಿರುತ್ತದೆ ಎಂದರು.

ವಿಜಯೋತ್ಸವದಲ್ಲಿ ನಗರಸಭೆ ಸದಸ್ಯ ಮಂಜುನಾಥ್‌, ಶಿಕ್ಷ ಕರಾದ ಮೋಹನ್‌, ಚೌಟಪ್ಪ, ರಂಗನಾಥ್‌, ವಕೀಲ ಜಗದೀಶ್‌, ಸ್ಥಳೀಯರಾದ ಕಾಮರಾಜ್‌, ಪವರ್‌ ಸೇಟ್‌, ರಘು, ವೆಂಕಟೇಶ್‌, ಧನಂಜಯ, ಅನಂತು, ಗೋವಿಂದರಾಜು, ಸೋಮಶೇಖರಯ್ಯ, ಶೋಭಮ್ಮ ಸೇರಿದಂತೆ ಹಲವರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ