ಆ್ಯಪ್ನಗರ

ಪಾವಗಡದಲ್ಲಿ ಮಹಿಳೆಯರ ಹೊತ್ತೊಯ್ದು ಅತ್ಯಾಚಾರ

ನಿಡಗಲ್ಲು ಗ್ರಾಮದಲ್ಲಿ ಮಹಿಳೆಯರನ್ನು ಅಪಹರಿಸಿ, ಅತ್ಯಾಚಾರ ನಡೆಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಸ್ಪಿಗೆ ಸೂಚನೆ ನೀಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಹೇಳಿದ್ದಾರೆ.

Vijaya Karnataka Web 2 Mar 2018, 2:16 pm
ಪಾವಗಡ: ತಾಲೂಕಿನ ನಿಡಗಲ್ಲು ಗ್ರಾಮದಲ್ಲಿ ಮಹಿಳೆಯರನ್ನು ಅಪಹರಿಸಿ, ಅತ್ಯಾಚಾರ ನಡೆಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಎಸ್ಪಿಗೆ ಸೂಚನೆ ನೀಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಹೇಳಿದ್ದಾರೆ.
Vijaya Karnataka Web women kidnap and rape in pavagada
ಪಾವಗಡದಲ್ಲಿ ಮಹಿಳೆಯರ ಹೊತ್ತೊಯ್ದು ಅತ್ಯಾಚಾರ


ಕಳೆದ ಹಲವು ವರ್ಷಗಳಿಂದ ಈ ರೀತಿಯ ದೌರ್ಜನ್ಯ ನಡೆಯುತ್ತಿದೆ. ವಿಧವೆಯರು, ವಿವಾಹಿತರು ಸೇರಿದಂತೆ ಒಂಟಿಯಾಗಿ ಸಿಗುವ ಮಹಿಳೆಯರೇ ಇವರ ಟಾರ್ಗೆಟ್.
ಸ್ಥಳೀಯ ಜನರನ್ನು ಈ ಕಿರಾತಕರು ಭಯದ ನೆರಳಲ್ಲಿ ಇಟ್ಟಿದ್ದು, ಕೈಗೆ ಸಿಕ್ಕ ಮಹಿಳೆಯರನ್ನು ಹೊತ್ತೊಯ್ದು, ಅತ್ಯಾಚಾರ ಎಸಗಿ ವಾರದ ಬಳಿಕ ಕರೆ ತಂದು ಬಿಡುತ್ತಿದ್ದಾರಂತೆ ಎಂದು ನಾಗಲಕ್ಷ್ಮಿ ಬಾಯಿ ತಿಳಿಸಿದ್ದಾರೆ.

ಫೆ.28 ರಂದು ಸ್ಥಳಕ್ಕೆ ಭೇಟಿ ನೀಡಿದ್ದನಾಗ ಲಕ್ಷ್ಮಿ ಬಾಯಿ ಎದುರು ಸ್ಥಳೀಯರು ಅಳಲು ತೋಡಿಕೊಂಡಿದ್ದಾರೆ. ಕೆಲದಿನಗಳ ಹಿಂದೆ ಅಂಗನವಾಡಿ ಕಾರ್ಯಕರ್ತೆಯೊಬ್ಬ ರನ್ನು ಕಿರಾತಕರು ಅಪಹರಿಸಲು ಯತ್ನಿಸಿದ್ದು, ತಪ್ಪಿಸಿಕೊಂಡು ಬಂದ ಆಕೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಉತ್ತರ ಪ್ರದೇಶ, ಬಿಹಾರ ಮಾದರಿಯಲ್ಲಿ ಹೆಣ್ಣು ಮಕ್ಕಳನ್ನು ಹೊತ್ತೊಯ್ದು ಅತ್ಯಾಚಾರ ನಡೆಸಲಾಗುತ್ತಿದೆ. ಅಂಗನವಾಡಿ ಟೀಚರ್ ಪಾತ್ರೆ ತೊಳೆಯುವಾಗ ಗಂಡನ‌ ಎದುರೇ ಎಳೆದಾಡಿದ ಕಿರಾತಕರು ನಡುಸ್ತೆಯಲ್ಲೆ ರೇಪ್ ಮಾಡುವ ಬೆದರಿಕೆಯೊಡ್ಡಿದ್ದರು. ನಿಡುಗಲ್ಲುವಿನ ಹೆಣ್ಣು ಮಕ್ಕಳನ್ನು ಐದಾರು ದಿನ ಹೊತ್ತುಕೊಂಡು ಹೋಗಿ ವಾಪಸ್‌ ಬಿಡುತ್ತಾರೆ. ಈ ಬಗ್ಗೆ ಪೊಲೀಸರು ಸಹ ದೂರು ದಾಖಲಿಸಿಕೊಳ್ಳುವುದಿಲ್ಲವಂತೆ. ಈ ಸತ್ಯ ಹೇಳಲು ಅಲ್ಲಿನ ಹೆಣ್ಣು ಮಕ್ಕಳು ಹೆದರುತ್ತಿದ್ದಾರೆ. ಇಂತಹ ಐದು ಪ್ರಕರಣಗಳು ಸದ್ಯಕ್ಕೆ ಬೆಳಕಿಗೆ ಬಂದಿವೆ ಎಂದು ನಾಗಲಕ್ಷ್ಮಿ ಬಾಯಿ ತಿಳಿಸಿದ್ದಾರೆ.

ರಾಮಕೃಷ್ಣ, ಸುನಿಲ್, ದೇವರಾಜ್, ಮತ್ತು ಶಾರದ ಎಂಬವರಿಂದ ಈ ಕೃತ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ. ವಿವರ ಪಡೆದು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ನಾಗಲಕ್ಷ್ಮಿ ಬಾಯಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ