ಆ್ಯಪ್ನಗರ

ಎತ್ತಿನಹೊಳೆ, ಹೇಮಾವತಿ ಕನಸಿನ ಯೋಜನೆಗಳು

ಭದ್ರಾ ಮೇಲ್ದಂಡೆ ಯೋಜನೆ ಎತ್ತಿನಹೊಳೆ ಹಾಗೂ ಹೇಮಾವತಿ ಕುಡಿವ ನೀರಿನ ಯೋಜನೆಗಳು ನನ್ನ ಕನಸಿನ ಯೋಜನೆಗಳು ಎಂದು ಮಾಚಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

Vijaya Karnataka 3 Jul 2018, 5:00 am
ಚಿಕ್ಕನಾಯಕನಹಳ್ಳಿ: ಭದ್ರಾ ಮೇಲ್ದಂಡೆ ಯೋಜನೆ ಎತ್ತಿನಹೊಳೆ ಹಾಗೂ ಹೇಮಾವತಿ ಕುಡಿವ ನೀರಿನ ಯೋಜನೆಗಳು ನನ್ನ ಕನಸಿನ ಯೋಜನೆಗಳು ಎಂದು ಮಾಚಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.
Vijaya Karnataka Web yettinhole hemavati dreams project jayachandra
ಎತ್ತಿನಹೊಳೆ, ಹೇಮಾವತಿ ಕನಸಿನ ಯೋಜನೆಗಳು


ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ಹಿನ್ನೆಡೆಯಾಗಿದೆ. ಆದರೂ ಕಾರ್ಯಕರ್ತರು ಹಾಗೂ ಅಸಂಖ್ಯಾತ ಬೆಂಬಲಿಗರಿಗೆ ಧೈರ್ಯ ತುಂಬಲು ಬಂದಿದ್ದೇನೆ. ಪ್ರತಿ ಸೋಮವಾರ ಚಿಕ್ಕನಾಯಕನಹಳ್ಳಿ ಭೇಟಿ ನೀಡಿ ಜನರ ಹಾಗೂ ಕಾರ್ಯಕರ್ತರ ಕಷ್ಟ ದುಃಖಗಳಿಗೆ ಸ್ಪಂದಿಸಲು ಭೇಟಿ ನೀಡುತ್ತೇನೆ ಎಂದರು

ಸಿರಾ ಹಾಗೂ ಚಿ.ನಾ.ಹಳ್ಳಿ ಎರಡು ವಿಧಾನಸಭೆ ಕ್ಷೇತ್ರಗಳು ನನಗೆ ಎರಡು ಕಣ್ಣುಗಳಿದ್ದಂತೆ ಎಂದ ಅವರು, ಹೇಮಾವತಿ ನಾಲೆಯಿಂದ ಜಿಲ್ಲೆಗೆ 24.90 ಟಿಎಂಸಿ ನೀರು ಬಳಸಿಕೊಳ್ಳಬೇಕಾಗಿತ್ತು. ಈಗ ನಾವು 18ರಿಂದ 19 ಟಿಎಂಸಿ ನೀರು ಬಳಸಿಕೊಳ್ಳುತ್ತಿದ್ದೇವೆ. ಆದ್ದರಿಂದ ನಮ್ಮ ಪೂರ್ಣ ಪ್ರಮಾಣದ ನೀರನ್ನು ಬಳಸಿಕೊಳ್ಳಲು ನಾಲಾ ಅಗಲೀಕರಣಕ್ಕೆ 625 ಕೋಟಿ ರೂ. ಖರ್ಚು ಮಾಡಿ ನಾಲಾ ಆಧುನಿಕರಣಗೊಳಿಸಿದುದ್ದರಿಂದ ಈಗ ನಮಗೆ ಅಲಾರ್ಟ್‌ ಆಗಿರುವ ಪೂರ್ಣ ಪ್ರಮಾಣದ ನೀರನ್ನು ಬಳಸಿಕೊಳ್ಳಬಹುದು. ನೀರಾವರಿ ಯೋಜನೆಗಳು ಜಾರಿಯಲ್ಲಿರುವ ಕಾಮಗಾರಿಗಳಿಗೆ ಯಾರು ವಿಷ ಹಿಂಡುವ ಕೆಲಸ ಮಾಡಬಾರದು ಎಂದರು.

ಭದ್ರಾ ಮೇಲ್ದಂಡೆ ಯೋಜನೆಯಿಂದ ಬೆಳ್ಳಾರದವರೆಗೆ ಕಾಲುವೆ ಮಾಡಿ, ಇದರ ಡಿಟೇಲ್‌ ಪ್ರಾಜೆಕ್ಟ್ ಬಂದ ನಂತರ ಸಿರಾ ತಾಲೂಕಿನ ಬುಕ್ಕಾಪಟ್ಟಣ ದೊಡ್ಡಅಗ್ರಹಾರ, ರಾಮಲಿಂಗಾಪುರ ಹಾಗೂ ಸಣ್ಣ ಪುಟ್ಟ ಕೆರೆಗಳಿಗೆ ನೀರು ತುಂಬಬಹುದು ಎಂಬುದು ಗೊತ್ತಾಗಲಿದೆ ಎಂದು ಅವರು, ರಾಜಕಾರಣಿಗಳು ಮಠಗಳ ಬೆಳವಣಿಗೆಗೆ ಸಹಕರಿಸುತ್ತಾರೆ, ಆದರೆ ಮಠಗಳು ರಾಜಕಾರಣ ಮಾಡಬಾರದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಪಂ ಸದಸ್ಯ ಸಿದ್ದರಾಮಯ್ಯ, ಮಾಜಿ ಶಾಸಕ ಬಿ.ಲಕ್ಕಪ್ಪ , ಪುರಸಭೆ ಮಾಜಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್‌, ಕ್ಷೇತ್ರ ಕಾಂಗ್ರೆಸ್‌ ಅಧ್ಯಕ್ಷ ಸಿ.ಬಸವರಾಜು, ಧನುಷ್‌ ರಂಗನಾಥ್‌, ಪುರಸಭೆ ನಾಮಿನಿ ಸದಸ್ಯ ಕೆ.ಜಿ.ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ