ಪ್ರಸನ್ನ ದೊಡ್ಡಗುಣಿ
ನಿಟ್ಟೂರು (ತುಮಕೂರು): ಲಾಕ್ಡೌನ್ ನಂತರ ನಗರದಲ್ಲಿ ಹಲವು ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕರು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗುತ್ತಿದ್ದು, ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ. ಗುಬ್ಬಿ ತಾಲೂಕಿನ ಅಂಕಾಪುರದ ಬಿಬಿಎಂ ಪದವೀಧರ ಬಸವರಾಜು, ದಾಬಸ್ಪೇಟೆ ಕೈಗಾರಿಕೆಯೊಂದರಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದರು. ಲಾಕ್ಡೌನ್ ನಂತರ ಕೆಲಸ ಕಳೆದುಕೊಂಡು ಇರುವ ಅಲ್ಪ ಭೂಮಿಯಲ್ಲೇ ಏಕೆ ಕೃಷಿ ಮಾಡಬಾರದು ಎಂದು ನಿರ್ಧರಿಸಿ ತರಕಾರಿ ಬೆಳೆಯಲು ಶುರು ಮಾಡಿ, ಆದಾಯದ ನಿರೀಕ್ಷೆಯಲ್ಲಿದ್ದಾರೆ.
ಸೊಪ್ಪು, ಬೆಂಡೇಕಾಯಿ, ಟೊಮ್ಯಾಟೊ ಬೆಳೆಯುತ್ತಿದ್ದು, ಆದಾಯ ಕಾಣುತ್ತಿದ್ದಾರೆ. ಅವರೇ ಸ್ವತಃ ಹಳ್ಳಿಗಳಿಗೆ ಹೋಗಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಹೆಚ್ಚಿನ ಲಾಭ ಬರುತ್ತಿದೆ ಎನ್ನುತ್ತಾರೆ ಬಸವರಾಜು.
ನೌಕರಿಯಲ್ಲಿದ್ದಾಗ 15 ಸಾವಿರ ರೂ. ಸಿಗುತ್ತಿತ್ತು. ಈಗ 3 ತಿಂಗಳ ಅವಧಿಯಲ್ಲಿ ಸುಮಾರು 80 ಸಾವಿರ ರೂ. ದುಡಿದಿದ್ದೇನೆ. ಮುಂದೆ ನಗರದತ್ತ ಹೋಗುವುದಿಲ್ಲ. ಇಲ್ಲಿಯೇ ಕುಟುಂಬದ ಜತೆ ಇದ್ದು ಕೃಷಿ ಕೆಲಸ ಮಾಡುತ್ತೇನೆ ಎನ್ನುತ್ತಾರೆ.
ಲಾಕ್ಡೌನ್ನಿಂದ ಊರಿಗೆ ಹೋದ ವಲಸೆ ಕಾರ್ಮಿಕರಿಗೆ ನಗರಕ್ಕೆ ಮರಳುವ ತವಕ..! ಸಮೀಕ್ಷೆಯಲ್ಲಿ ಬಹಿರಂಗ
ನಗರದಲ್ಲಿ ಒತ್ತಡದ ಬದುಕು ಸಾಕಾಗಿದೆ. ಮನೆಯ ಮಕ್ಕಳ ಜತೆ ಮಾತನಾಡಲು ಆಗದ ಸ್ಥಿತಿಯಲ್ಲಿ ಬದುಕಬೇಕಾ ಎನಿಸಿಬಿಟ್ಟಿದೆ. ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೆ. ಮನೆಯ ಕಡೆ ನೋಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಈಗ ಮನೆಯಲ್ಲೇ ಇರುವುದರಿಂದ ಕುಟುಂಬದ ಜತೆ ಕಾಲ ಕಳೆಯಲು ಸಾಧ್ಯವಾಗುತ್ತಿದೆ ಎಂದು ಬಸವರಾಜು ಹೇಳಿದರು.
ಸಾವಯುವ ಕೃಷಿಯತ್ತ ಮುಖ ಮಾಡಿದ್ದೇನೆ. ಎಲ್ಲಿಯೂ ನಗರದಲ್ಲಿ ಹೋಗಿ ಮಾರುಕಟ್ಟೆಗೆ ನೀಡಿಲ್ಲ. ನಾನೇ ಖುದ್ದು ಮಾರಾಟ ಮಾಡುತ್ತಿದ್ದು, ಲಾಭ ಬರುತ್ತಿದೆ. ಬೆಳಗ್ಗೆ 6 ರಿಂದ 10ರ ತನಕ ಸುತ್ತಮುತ್ತಲ ಗ್ರಾಮಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದೇನೆ. ಇದರಿಂದ ದುಡಿಮೆ ಮತ್ತು ಲಾಭ ನೋಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಬಸವರಾಜು.
'ಕೊರೊನಾ' ವೈರಸ್ ಭೀತಿ: ಬೆಂಗಳೂರು ಬಿಟ್ಟು ಬಂದೋರ ಕೈಹಿಡಿಯಿತು ಬೇಸಾಯ
ಕುಟುಂಬದವರೇ ಸೇರಿ ಕೆಲಸ ಮಾಡುತ್ತಿದ್ದೇವೆ. ಅಡಿಕೆ ತೋಟದ ಮಧ್ಯೆ 2 ಸಾವಿರ ಟೊಮ್ಯಾಟೊ ಗಿಡಗಳನ್ನು ಹಾಕಿದ್ದೆ. 2,200 ಕೆಜಿ ಬಂದಿತ್ತು. 30 ಸಾವಿರ ರೂ. ಖರ್ಚು ಬಂದಿತ್ತು. ಲಾಭ 50 ಸಾವಿರ ರೂ. ಬಂದಿದೆ 3 ತಿಂಗಳಿಗೆ ಎಂದು ಲೆಕ್ಕ ಬಿಚ್ಚಿಡುತ್ತಾರೆ.
ಬೆಂಡೆ 40 ದಿನಕ್ಕೆ ಬಂದಿದೆ. 2 ಸಾವಿರ ರೂ. ಖರ್ಚು ಬಂದಿದೆ. ಸದ್ಯಕ್ಕೆ 10 ಸಾವಿರ ರೂ. ಸಿಕ್ಕಿದ್ದು, ಇನ್ನೂ ಮುಂದಿನ ಒಂದು ತಿಂಗಳಲ್ಲಿ 8-10 ಸಾವಿರ ರೂ. ಬರಬಹುದು. 2 ದಿನಕ್ಕೊಮೆ ಕಟಾವು ಮಾಡುತ್ತೇವೆ. ಸಾವಯುವ ಗೊಬ್ಬರ ಬಳಕೆ ಮಾಡುತ್ತಿದ್ದೇವೆ. ಹಸು ಗಂಜಲ, ಸಗಣಿ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟನ್ನು ಮಿಶ್ರಣ ಮಾಡಿ, ಅದನ್ನೇ ಗೊಬ್ಬರದ ರೀತಿ ನೀಡಲಾಗುತ್ತಿದೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುತ್ತಿದ್ದೇನೆ ಎನ್ನುತ್ತಾರೆ ಬಸವರಾಜು.
ನಾನು ಓದಿರುವುದು ಬಿಬಿಎಂ. ಅಲ್ಲಿ ಮಾರ್ಕೆಟಿಂಗ್ ಬಗ್ಗೆ ಪಾಠ ಓದುತ್ತಿದ್ದೆವು. ಆಗ ಎಷ್ಟೊಂದು ಸರಳವಾಗಿರುತ್ತೆ ಅಂದುಕೊಂಡಿದ್ದೆವು. ಆದರೆ ಫೀಲ್ಡ್ನಲ್ಲಿ ಕೆಲಸ ಮಾಡಿದಾಗ ಓದಿಗೂ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗೊತ್ತಾಯ್ತು ಅಂತಾರೆ ಯುವ ರೈತ ಬಸವರಾಜು.
ನಿರುದ್ಯೋಗಿಗಳ ಆಪದ್ಭಾಂಧವ ಮನರೇಗಾ: ಹಾಸನದಲ್ಲಿ ಜುಲೈ ಅಂತ್ಯಕ್ಕೆ 22.55 ಲಕ್ಷ ಮಾನವ ದಿನ ಪೂರ್ಣ
ನಿಟ್ಟೂರು (ತುಮಕೂರು): ಲಾಕ್ಡೌನ್ ನಂತರ ನಗರದಲ್ಲಿ ಹಲವು ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದ ಯುವಕರು ತಮ್ಮ ಸ್ವಗ್ರಾಮಗಳಿಗೆ ಹಿಂದಿರುಗುತ್ತಿದ್ದು, ಕೃಷಿ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ.
ಸೊಪ್ಪು, ಬೆಂಡೇಕಾಯಿ, ಟೊಮ್ಯಾಟೊ ಬೆಳೆಯುತ್ತಿದ್ದು, ಆದಾಯ ಕಾಣುತ್ತಿದ್ದಾರೆ. ಅವರೇ ಸ್ವತಃ ಹಳ್ಳಿಗಳಿಗೆ ಹೋಗಿ ತರಕಾರಿ ವ್ಯಾಪಾರ ಮಾಡುತ್ತಿದ್ದು, ಹೆಚ್ಚಿನ ಲಾಭ ಬರುತ್ತಿದೆ ಎನ್ನುತ್ತಾರೆ ಬಸವರಾಜು.
ನೌಕರಿಯಲ್ಲಿದ್ದಾಗ 15 ಸಾವಿರ ರೂ. ಸಿಗುತ್ತಿತ್ತು. ಈಗ 3 ತಿಂಗಳ ಅವಧಿಯಲ್ಲಿ ಸುಮಾರು 80 ಸಾವಿರ ರೂ. ದುಡಿದಿದ್ದೇನೆ. ಮುಂದೆ ನಗರದತ್ತ ಹೋಗುವುದಿಲ್ಲ. ಇಲ್ಲಿಯೇ ಕುಟುಂಬದ ಜತೆ ಇದ್ದು ಕೃಷಿ ಕೆಲಸ ಮಾಡುತ್ತೇನೆ ಎನ್ನುತ್ತಾರೆ.
ಲಾಕ್ಡೌನ್ನಿಂದ ಊರಿಗೆ ಹೋದ ವಲಸೆ ಕಾರ್ಮಿಕರಿಗೆ ನಗರಕ್ಕೆ ಮರಳುವ ತವಕ..! ಸಮೀಕ್ಷೆಯಲ್ಲಿ ಬಹಿರಂಗ
ನಗರದಲ್ಲಿ ಒತ್ತಡದ ಬದುಕು ಸಾಕಾಗಿದೆ. ಮನೆಯ ಮಕ್ಕಳ ಜತೆ ಮಾತನಾಡಲು ಆಗದ ಸ್ಥಿತಿಯಲ್ಲಿ ಬದುಕಬೇಕಾ ಎನಿಸಿಬಿಟ್ಟಿದೆ. ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದೆ. ಮನೆಯ ಕಡೆ ನೋಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಈಗ ಮನೆಯಲ್ಲೇ ಇರುವುದರಿಂದ ಕುಟುಂಬದ ಜತೆ ಕಾಲ ಕಳೆಯಲು ಸಾಧ್ಯವಾಗುತ್ತಿದೆ ಎಂದು ಬಸವರಾಜು ಹೇಳಿದರು.
ಸಾವಯುವ ಕೃಷಿಯತ್ತ ಮುಖ ಮಾಡಿದ್ದೇನೆ. ಎಲ್ಲಿಯೂ ನಗರದಲ್ಲಿ ಹೋಗಿ ಮಾರುಕಟ್ಟೆಗೆ ನೀಡಿಲ್ಲ. ನಾನೇ ಖುದ್ದು ಮಾರಾಟ ಮಾಡುತ್ತಿದ್ದು, ಲಾಭ ಬರುತ್ತಿದೆ. ಬೆಳಗ್ಗೆ 6 ರಿಂದ 10ರ ತನಕ ಸುತ್ತಮುತ್ತಲ ಗ್ರಾಮಗಳಿಗೆ ಹೋಗಿ ಮಾರಾಟ ಮಾಡುತ್ತಿದ್ದೇನೆ. ಇದರಿಂದ ದುಡಿಮೆ ಮತ್ತು ಲಾಭ ನೋಡಲು ಸಾಧ್ಯವಾಗುತ್ತಿದೆ ಎನ್ನುತ್ತಾರೆ ಬಸವರಾಜು.
'ಕೊರೊನಾ' ವೈರಸ್ ಭೀತಿ: ಬೆಂಗಳೂರು ಬಿಟ್ಟು ಬಂದೋರ ಕೈಹಿಡಿಯಿತು ಬೇಸಾಯ
ಕುಟುಂಬದವರೇ ಸೇರಿ ಕೆಲಸ ಮಾಡುತ್ತಿದ್ದೇವೆ. ಅಡಿಕೆ ತೋಟದ ಮಧ್ಯೆ 2 ಸಾವಿರ ಟೊಮ್ಯಾಟೊ ಗಿಡಗಳನ್ನು ಹಾಕಿದ್ದೆ. 2,200 ಕೆಜಿ ಬಂದಿತ್ತು. 30 ಸಾವಿರ ರೂ. ಖರ್ಚು ಬಂದಿತ್ತು. ಲಾಭ 50 ಸಾವಿರ ರೂ. ಬಂದಿದೆ 3 ತಿಂಗಳಿಗೆ ಎಂದು ಲೆಕ್ಕ ಬಿಚ್ಚಿಡುತ್ತಾರೆ.
ಬೆಂಡೆ 40 ದಿನಕ್ಕೆ ಬಂದಿದೆ. 2 ಸಾವಿರ ರೂ. ಖರ್ಚು ಬಂದಿದೆ. ಸದ್ಯಕ್ಕೆ 10 ಸಾವಿರ ರೂ. ಸಿಕ್ಕಿದ್ದು, ಇನ್ನೂ ಮುಂದಿನ ಒಂದು ತಿಂಗಳಲ್ಲಿ 8-10 ಸಾವಿರ ರೂ. ಬರಬಹುದು. 2 ದಿನಕ್ಕೊಮೆ ಕಟಾವು ಮಾಡುತ್ತೇವೆ. ಸಾವಯುವ ಗೊಬ್ಬರ ಬಳಕೆ ಮಾಡುತ್ತಿದ್ದೇವೆ. ಹಸು ಗಂಜಲ, ಸಗಣಿ, ಬೆಲ್ಲ, ದ್ವಿದಳ ಧಾನ್ಯದ ಹಿಟ್ಟನ್ನು ಮಿಶ್ರಣ ಮಾಡಿ, ಅದನ್ನೇ ಗೊಬ್ಬರದ ರೀತಿ ನೀಡಲಾಗುತ್ತಿದೆ. ಹಾಗಾಗಿ ಕಡಿಮೆ ಖರ್ಚಿನಲ್ಲಿ ಕೃಷಿ ಮಾಡುತ್ತಿದ್ದೇನೆ ಎನ್ನುತ್ತಾರೆ ಬಸವರಾಜು.
ನಾನು ಓದಿರುವುದು ಬಿಬಿಎಂ. ಅಲ್ಲಿ ಮಾರ್ಕೆಟಿಂಗ್ ಬಗ್ಗೆ ಪಾಠ ಓದುತ್ತಿದ್ದೆವು. ಆಗ ಎಷ್ಟೊಂದು ಸರಳವಾಗಿರುತ್ತೆ ಅಂದುಕೊಂಡಿದ್ದೆವು. ಆದರೆ ಫೀಲ್ಡ್ನಲ್ಲಿ ಕೆಲಸ ಮಾಡಿದಾಗ ಓದಿಗೂ ಕೆಲಸಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಗೊತ್ತಾಯ್ತು ಅಂತಾರೆ ಯುವ ರೈತ ಬಸವರಾಜು.
ನಿರುದ್ಯೋಗಿಗಳ ಆಪದ್ಭಾಂಧವ ಮನರೇಗಾ: ಹಾಸನದಲ್ಲಿ ಜುಲೈ ಅಂತ್ಯಕ್ಕೆ 22.55 ಲಕ್ಷ ಮಾನವ ದಿನ ಪೂರ್ಣ