ಆ್ಯಪ್ನಗರ

ಜಾತಿ ಧೋರಣೆ ಖಂಡಿಸಿ ಯುವಕ ಆತ್ಮಹತ್ಯೆ

ಆತ ಆ ಹುಡುಗಿಯನ್ನು ಮನಸಾರೆ ಪ್ರೀತಿಸಿದ. ಆಕೆಯನ್ನು ವರಿಸಿ ಸುಂದರ ಜೀವನದ ಕನಸು ಕಟ್ಟಿದ. ಆದರೆ ಇದಕ್ಕೆ ಜಾತಿ ಅಡ್ಡ ಬಂತು. ಇದರಿಂದ ರೋಸಿದ ಆ ಹುಡುಗ ತನ್ನ ಮಾವನ ಜಾತಿ ಧೋರಣೆಯನ್ನು ಖಂಡಿಸಿ ಅದನ್ನು ವೀಡಿಯೋ ಮಾಡಿ ನೇಣಿಗೆ ಶರಣಾಗಿದ್ದಾನೆ.

Vijaya Karnataka 4 Jul 2018, 7:58 am
ತುಮಕೂರು: ಆತ ಆ ಹುಡುಗಿಯನ್ನು ಮನಸಾರೆ ಪ್ರೀತಿಸಿದ. ಆಕೆಯನ್ನು ವರಿಸಿ ಸುಂದರ ಜೀವನದ ಕನಸು ಕಟ್ಟಿದ. ಆದರೆ ಇದಕ್ಕೆ ಜಾತಿ ಅಡ್ಡ ಬಂತು. ಇದರಿಂದ ರೋಸಿದ ಆ ಹುಡುಗ ತನ್ನ ಮಾವನ ಜಾತಿ ಧೋರಣೆಯನ್ನು ಖಂಡಿಸಿ ಅದನ್ನು ವೀಡಿಯೋ ಮಾಡಿ ನೇಣಿಗೆ ಶರಣಾಗಿದ್ದಾನೆ.
Vijaya Karnataka Web hanging youth


ತುಮಕೂರಿನ ಬಸವಾಪಟ್ಟಣದ ರಾಘವೇಂದ್ರ(22) ಇಲ್ಲಿನ ಯುವತಿಯೊಬ್ಬಳನ್ನು ಪ್ರೀತಿಸಿದ. ಯುವತಿಯ ಅಪ್ಪ, ಮದುವೆಯನ್ನು ವಿರೋಧಿಸಿದ. ಇದರಿಂದ ಮನನೊಂದ ರಾಘವೇಂದ್ರ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡ. ತನ್ನ ನಿರ್ಧಾರಕ್ಕೆ ಕಾರಣವಾದ ಅಂಶಗಳನ್ನು ಹೇಳಿಕೊಳ್ಳುತ್ತ ಅದನ್ನು ವೀಡಿಯೋ ಮಾಡಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ.

'' ಅಲ್ಲಾ ಅಪ್ಪಾ ಜಾತಿ ಜಾತಿ ಎಂದು ಹೇಳಿಕೊಳ್ಳುತ್ತೀಯಾ, ಸತ್ತ ಮೇಲೆ ಏನಾದ್ರು ಜಾತಿ ಎತ್ತಿಕೊಂಡು ಹೋಗುತ್ತೀಯಾ. ಇಲ್ಲವಲ್ಲ. ಸುಮ್ಮನೇ ಬದುಕಿದ್ದೂ ಸಾಯಿಸುತ್ತೀಯಾ.. ನಿನ್ನ ಮಗಳನ್ನೂ ಸಾಯಿಸುತ್ತೀಯಾ... ನನ್ನನ್ನೂ ಸಾಯಿಸುತ್ತೀಯಾ.. ನೀನೂ ಚೆನ್ನಾಗಿರು, ನಿನ್ನ ಮಗಳೂ ಚೆನ್ನಾಗಿರಲಿ, ನಿಮ್ಮ ತಂಟೆಗೆ ಇನ್ನೆಂದೂ ಬರುವುದಿಲ್ಲ ,'' ಎನ್ನುವ ವಿಡಿಯೊ ವೈರಲ್‌ ಆಗಿದೆ. ಈ ಸಂಬಂಧ ಕ್ಯಾತ್ಸಂದ್ರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ