ಆ್ಯಪ್ನಗರ

ಗಡಿ ಭದ್ರತಾ ಪಡೆಯ ಗುಂಡಿ ದಾಳಿಗೆ ಇಬ್ಬರು ಉಗ್ರರು ಉಡೀಸ್‌.!

ಭಾರತ ಪ್ರವೇಶಿಸಲು ಯತ್ನಿಸಿದ ಇಬ್ಬರು ಉಗ್ರರನ್ನ ಯೋಧರು ಸದೆಬಡಿದಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ANI 2 May 2020, 4:28 pm
ಜಮ್ಮು-ಕಾಶ್ಮೀರ: ಕೊರೊನಾ ಹಾಗೂ ಲಾಕ್‌ಡೌನ್‌ ಸಮಯವನ್ನೇ ಅಸ್ತ್ರವಾಗಿ ಬಳಸಿಕೊಂಡಿರುವ ಪಾಕಿಸ್ತಾನ ಪೋಷಿತ ಉಗ್ರರಿಗೆ ಭಾರತದ ಗಡಿ ಭದ್ರತಾ ಪಡೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಭಾರತದೊಳಗೆ ನುಗ್ಗಲು ಇದು ತಕ್ಕ ಸಮಯ ಅಂತ ಗಡಿ ಮೂಲಕ ಭಾರತ ಪ್ರವೇಶಿಸಲು ಯತ್ನಿಸಿದ ಇಬ್ಬರು ಉಗ್ರರನ್ನ ಯೋಧರು ಸದೆಬಡಿದಿದ್ದಾರೆ. ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
Vijaya Karnataka Web EW-0tGWVAAE9DwO


ಇಲ್ಲಿನ ಡೇಂಗರ್‌ಪೋರಾದಲ್ಲಿ ಉಗ್ರರಿರುವ ಬಗ್ಗೆ ಸೇನೆಗೆ ಇಂದು ಬೆಳಗ್ಗೆ ಖಚಿತ ಮಾಹಿತಿ ಸಿಕ್ಕಿದೆ. ಮಾಹಿತಿ ಸಿಕ್ಕ ತಕ್ಷಣ ಭದ್ರತಾ ಪಡೆ ಈ ಪ್ರದೇಶದಲ್ಲಿ ಕಾರ್ಯಾಚರಣೆಗೆ ಇಳಿದಿದೆ. ಈ ವೇಳೆ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಯೋಧರು ಕೂಡ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಎರಡು ತಂಡಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಸಂದರ್ಭ ಇಬ್ಬರು ಉಗ್ರರು ಯೋಧರ ಗುಂಡಿಗೆ ಹತರಾಗಿದ್ದಾರೆ.

ಇನ್ನು ಈ ಇವರು ಯಾವ ಸಂಘಟನೆಗೆ ಸೇರಿದ ಉಗ್ರರು ಎಂದು ತಿಳಿದುಬಂದಿಲ್ಲ. ಕೊರೊನಾ ಹಾಗೂ ಲಾಕ್‌ಡೌನ್‌ ಸಮಯದಲ್ಲೇ ಪಾಕ್‌ ಪೋಷಿತ ಉಗ್ರರು ಗಡಿಯಲ್ಲಿ ಕಾಲ್ಕೆರೆದು ಜಗಳಕ್ಕೆ ನಿಂತಿದ್ದಾರೆ. ಗಡಿ ಪ್ರವೇಶಕ್ಕೂ ಪ್ರಯತ್ನಿಸುತ್ತಿದ್ದಾರೆ. ಆದ್ರೆ ಭಾರತದ ಸೇನೆಯಯ ತಕ್ಕ ಉತ್ತರಕ್ಕೆ ಪಾಕ್‌ ಉಗ್ರರಿಗೆ ಏನು ಮಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಕಾರ್ಯಾಚರಣೆ ಮುಂದುವರಿದಿದೆ.

ಹುಡುಗಿಗಾಗಿ 100 ಕಿ.ಮೀ ಸೈಕಲ್‌ ತುಳಿದ, ಮದ್ವೆಯಾಗಿ ಸೈಕಲ್‌ನಲ್ಲೇ ಕರ್ಕೊಂಡ್‌ ಹೋದ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ