ಆ್ಯಪ್ನಗರ

ನೃತ್ಯ ಸಂಗೀತದಿಂದ ಸಾತ್ವಿಕ ಸಂತೋಷ: ಪೇಜಾವರ ಶ್ರೀ

ಜೀವನ ಪರಿಪೂರ್ಣತೆ ಗಳಿಸುವುದು ಹಣ ಸಂಪಾದನೆ, ಶ್ರೀಮಂತಿಕೆಯಿಂದಲ್ಲ. ನತ್ಯಕಲೆ -ಸಂಗೀತ ಕಲೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ದೆಹಿಕ, ಮಾನಸಿಕ ವ್ಯಾಯಮವಾಗಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ನತ್ಯಸಂಗೀತ ಸಮಾಜಕ್ಕೆ ಅಲಂಕಾರ ಎಂದು ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ವಿಕ ಸುದ್ದಿಲೋಕ 29 Feb 2016, 3:49 pm
ಉಡುಪಿ: ಜೀವನ ಪರಿಪೂರ್ಣತೆ ಗಳಿಸುವುದು ಹಣ ಸಂಪಾದನೆ, ಶ್ರೀಮಂತಿಕೆಯಿಂದಲ್ಲ. ನತ್ಯಕಲೆ -ಸಂಗೀತ ಕಲೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ದೆಹಿಕ, ಮಾನಸಿಕ ವ್ಯಾಯಮವಾಗಿ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ನತ್ಯಸಂಗೀತ ಸಮಾಜಕ್ಕೆ ಅಲಂಕಾರ ಎಂದು ಪರ್ಯಾಯ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web
ನೃತ್ಯ ಸಂಗೀತದಿಂದ ಸಾತ್ವಿಕ ಸಂತೋಷ: ಪೇಜಾವರ ಶ್ರೀ


ಅವರು ಭಾನುವಾರ ಪರ್ಯಾಯ ಶ್ರೀ ಪೇಜಾವರ ಮಠ, ಶ್ರೀ ಕಷ್ಣ ಮಠದ ಆಶ್ರಯದಲ್ಲಿ ರಾಜಾಂಗಣದಲ್ಲಿ ಉಡುಪಿಯ ರಾಧಾಕಷ್ಣ ನತ್ಯನಿಕೇತನ ಹಮ್ಮಿಕೊಂಡ ಭರತಮುನಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.

ನತ್ಯ, ಶಿಲ್ಪ , ನಾಟ್ಯಕಲೆಗಳಿಂದ ಸಾತ್ವಿಕ ಸಂತೋಷ ಪ್ರಾಪ್ತಿಯಾಗುತ್ತದೆ. ಅದೇ ಮದ್ಯಪಾನ ಮತ್ತಿತರ ದುಶ್ಚಟಗಳಿಂದ ಹುಟ್ಟುವುದು ವಿಕೃತ ಸಂತೋಷ ಎಂದರು ಸ್ವಾಮೀಜಿ.

ಕಾರ್ಯಕ್ರಮದಲ್ಲಿ ವಿದುಷಿ ಕಮಲ ಭಟ್, ವಿದುಷಿ ಪ್ರತಿಭಾ ಎಲ್. ಸಾಮಗ, ವಿದುಷಿ ಸಿಂಗಾರಮಣಿ ಪದ್ಮಿನಿ ಶ್ರೀಧರ್, ವಿದ್ವಾನ್ ಸುರೇಶ್ ಅತ್ತಾವರ, ವಿದ್ವಾನ್ ಆರ್.ಕಣ್ಣನ್, ವಿದ್ವಾನ್ ಪುಲಕೇಶಿ ಕಸ್ತೂರಿ ಇವರಿಗೆ ಭರತ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷೃತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ವಹಿಸಿದ್ದರು. ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ , ನತ್ಯನಿಕೇತನದ ಸಂಗೀತ ಗುರು ಪ್ರೇಮಾ ಆರ್.ತಂತ್ರಿ, ಸಂಚಾಲಕ ಮುರಳೀಧರ ಸಾಮಗ ಉಪಸ್ಥಿತರಿದ್ದರು.

ನತ್ಯಗುರು ವಿದುಷಿ ವೀಣಾ ಎಂ.ಸಾಮಗ ಪ್ರಾಸ್ತಾವಿಕ ಮಾತನಾಡಿ ಡಾ. ರಶ್ಮಿ ಕಲ್ಕೂರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ